Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ತುಮಕೂರು ಗ್ರಾಮಾಂತರದಲ್ಲಿ ಹಾಲಿ – ಮಾಜಿ ಶಾಸಕರ ಗುದ್ದಾಟ

ಪ್ರತಿಧ್ವನಿ

ಪ್ರತಿಧ್ವನಿ

November 26, 2022
Share on FacebookShare on Twitter

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್​​ನಿಂದ ಗೌರಿಶಂಕರ್​ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮಾಜಿ ಸಚಿವ ಎನ್​ ಚೆನ್ನಿಗಪ್ಪ ಅವರ ಮಗನಾಗಿರುವ ಗೌರಿಶಂಕರ್​, ಜನರೊಂದಿಗೆ ಉತ್ತಮ ಒಡನಾಟವನ್ನೂ ಹೊಂದಿದ್ದಾರೆ. ಈಗಾಗಲೇ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿರುವ ಗೌರಿಶಂಕರ್​, ಕಳೆದ ಗೌರಿ ಗಣೇಶ ಹಬ್ಬದಿಂದಲೇ ಪ್ರತಿಗ್ರಾಮಗಳಿಗೂ ಭೇಟಿ ನೀಡಿ, ಮತದಾರರನ್ನು ಓಲೈಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇದು ಮಾಜಿ ಶಾಸಕ ಸುರೇಶ್​ಗೌಡ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 

ಹೆಚ್ಚು ಓದಿದ ಸ್ಟೋರಿಗಳು

SIDDARAMAIAH | ಅಧಿಕಾರಕ್ಕೆ ಬಂದ್ಮೇಲೆ 10 ಕೆಜಿ ಅಕ್ಕಿ ಕೊಡ್ತೇವೆ.. | ಸಿದ್ದರಾಮಯ್ಯ | CONGRESS | BJP |

Mimicry comedy Gopi | ಒಂದೇ ವೇದಿಕೆಯಲ್ಲಿ ರಾಜಕೀಯಾ ಮುಖಂಡರು!

ಕುಮಟಾ ಶಾಸಕರಿಗೆ ಕಂಟಕವಾದ ಪರೇಶ್‌ ಮೇಸ್ತಾ ಪ್ರಕರಣ: ಹಿಂದೂ ಕಾರ್ಯಕರ್ತರಿಂದಲೇ ಛೀಮಾರಿ

ಬಹಿರಂಗ ವೇದಿಕೆಯಲ್ಲಿ ಕೊಲೆ ಆರೋಪ ಮಾಡಿದ ಸುರೇಶ್​ಗೌಡ

ಮೊನ್ನೆಯಷ್ಟೆ ಗ್ರಾಮವೊಂದರಲ್ಲಿ ಭಾಷಣ ಮಾಡುತ್ತಿದ್ದ ಸುರೇಶ್​ಗೌಡ ಅವರು ನನ್ನನ್ನು ಕೊಲೆ ಮಾಡುಸ್ತೀಯಾ..? ನನ್ನನ್ನು ಕೊಲೆ ಮಾಡಿಸಲು ಜೈಲಿನಲ್ಲಿರುವ ಆರೋಪಿಗೆ ಸುಪಾರಿ ಕೊಟ್ಟಿದ್ದೀಯಾ..? 5 ಕೋಟಿ ಸುಪಾರಿ ಕೊಟ್ಟು ಹೆಣ ಸಿಗದಂತೆ ಕೊಲೆ ಮಾಡಲು ಪ್ಲ್ಯಾನ್​ ಮಾಡಿದ್ದೀಯಾ ಅಂತೆಲ್ಲಾ ಜನರ ಮುಂದೆ ಬಹಿರಂಗ ಮಾಡಿದ್ದರು. ಆ ಬಳಿಕ ಮಾಧ್ಯಮಗಳ ಎದುರು ಮಾತನಾಡಿದ್ದ ಸುರೇಶ್​ಗೌಡ, ಹೌದು ನನಗೆ ಕೊಲೆ ಬೆದರಿಕೆ ಇರುವುದು ಸತ್ಯ, ನಾನು ಈಗಾಗಲೇ ಸಿಎಂ ಹಾಗು ಗೃಹ ಸಚಿವರ ಜೊತೆಗೂ ಈ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದಿದ್ದರು. ಆ ಬಳಿಕ ಜೆಡಿಎಸ್​ ಕಾರ್ಯಕರ್ತನಿಗೆ ಫೋನ್​ ಮಾಡಿ ಬಾಯಿಗೆ ಬಂದ ಹಾಗೆ ಬೈದಿದ್ದ ಆಡಿಯೋ ಕೂಡ ವೈರಲ್​ ಆಗಿತ್ತು. 

ಸುರೇಶ್​ಗೌಡಗೆ ಮಾನಸಿಕ ಸ್ಥಿತಿ ಸರಿಯಿಲ್ಲ – ಗೌರಿಶಂಕರ್​

ಶಾಸಕರ ಮಾತನ್ನು ತೀರ ಕ್ಷುಲ್ಲಕ ಎನ್ನುವಂತೆ ವ್ಯಂಗ್ಯ ಮಾಡಿದ್ದ ಹಾಲಿ ಶಾಸಕ ಗೌರಿಶಂಕರ್​, ಮಾಜಿ ಶಾಸಕರ ಮಾತನ್ನು ಕೇಳಿದರೆ ಶಾಲಾ ಮಕ್ಕಳು ಕೂಡ ನಕ್ಕು ಬಿಡ್ತಾರೆ. ಅವರದ್ದೇ ಸರ್ಕಾರ ಇದೆ. ರಾಜ್ಯ ಹಾಗು ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದೆ. ಯಾವ ತನಿಖೆಗೆ ಬೇಕಾದರೂ ಒತ್ತಾಯ ಮಾಡಲಿ. ನಾನು ಆ ರೀತಿಯ ಕುತಂತ್ರ ಮಾಡುವ ವ್ಯಕ್ತಿ ನಾನಲ್ಲ. ನಾವು ಸಿದ್ಧಗಂಗಾ ಮಠದ ಪರಂಪರೆಯಲ್ಲಿ ಬೆಳೆದು ಬಂದವರು, ನಾವು ಏನಿದ್ದರೂ ನೇರವಾಗಿ ಹೋರಾಟ ಮಾಡುತ್ತೇವೆ. 10 ವರ್ಷ ಶಾಸಕರಾಗಿ ಕೆಲಸ ಮಾಡಿರುವ ಸುರೇಶ್​ಗೌಡ ಅವರು ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯಬಾರದಿತ್ತು, ಸುರೇಶ್​ಗೌಡ ಅವರಿಗೆ ಮಾನಸಿಕ ಸ್ಥಿಮಿತ ಸರಿಯಿಲ್ಲ ಎಂದಿದ್ದರು. ಜೊತೆಗೆ ನಾನು ತುಮಕೂರು ಎಸ್​ಪಿ ಅವರನ್ನು ಭೇಟಿ ಮಾಡಿ ಮಾಜಿ ಶಾಸಕರ ಆರೋಪದ ಬಗ್ಗೆ ತನಿಖೆ ಮಾಡುವಂತೆ ಮನವಿ ಮಾಡಿದ್ದೇನೆ ಎಂದು ಪತ್ರವನ್ನೂ ಬಿಡುಗಡೆ ಮಾಡಿದ್ದರು. 

ಶಾಸಕರ ಮನವಿ ಬಳಿಕ ಓಡಿ ಬಂದು ದೂರು ಕೊಟ್ಟ ಮಾಜಿ ಶಾಸಕ

ಶಾಸಕರೇ ತುಮಕೂರು ಎಸ್​ಪಿಗೆ ಮನವಿ ಮಾಡಿದ ಬಳಿಕ ಜೀವ ಭಯ ಇರುವ ಬಗ್ಗೆ ಮಾಜಿ ಶಾಸಕ ಸುರೇಶ್​ಗೌಡ ದೂರು ಸಲ್ಲಿಸದಿದ್ದರೆ ಕೆಟ್ಟ ಸಂದೇಶ ರವಾನೆ ಆಗುತ್ತದೆ ಎನ್ನುವ ಕಾರಣಕ್ಕೆ ಕ್ಯಾತ್ಸಂದ್ರ ಪೊಲೀಸ್​ ಠಾಣೆಗೆ ದೂರು ಕೊಟ್ಟಿದ್ದ ಸುರೇಶ್​ಗೌಡ, ನನ್ನನ್ನು ಕೊಲೆ ಮಾಡಲು ಶಾಸಕ ಗೌರಿಶಂಕರ್​, ಅಟ್ಟಿಕಾ ಗೋಲ್ಡ್​ ಸಂಸ್ಥೆ ಮಾಲೀಕ ಬಾಬು, ಹಿರೇಹಳ್ಳಿ ಮಹೇಶ್ ಎಂಬುವರ ಮೇಲೆ ಎಫ್​​ಐಆರ್​ ಮಾಡಿಸಿದ್ದರು. ಯಾವಾಗ ಮಾಜಿ ಶಾಸಕರು ದೂರು ನೀಡಿದ್ರು ಹಾಲಿ ಶಾಸಕರೂ ದೂರು ನೀಡಿದ್ದಾರೆ. ಮಾಜಿ ಶಾಸಕ ಸುರೇಶ್​ಗೌಡ ಅವರಿಂದಲೇ ನನಗೆ ಜೀವ ಬೆದರಿಕೆ ಇದೆ ಎಂದು ಪ್ರಕರಣ ದಾಖಲು ಮಾಡಿದ್ದಾರೆ. ಮಾಜಿ ಶಾಸಕರು ಅರೆಯೂರಿನಲ್ಲಿ ನಡೆದಿರುವ ಕಾರ್ಯಕ್ರಮದಲ್ಲಿ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಆ ಬಳಿಕ ಜೀವ ಭಯ ಕಾಡ್ತಿದೆ ಎಂದಿದ್ದಾರೆ. 

ತಮ್ಮ ರಾಜಕೀಯ ತೆವಲಿಗೆ ಪೊಲೀಸ್​ ಠಾಣೆಗೆ ದೂರು

ಚುನಾವಣಾ ಕಾವು ರಾಜ್ಯದಲ್ಲಿ ಮೊದಲ ಬಾರಿಗೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ತೀವ್ರವಾಗಿದೆ. ಚುನಾವಣೆಯಲ್ಲಿ ಗೆಲ್ಲುವ ಅಥವಾ ಜನರನ್ನು ತಮ್ಮ ಕಡೆಗೆ ಓಲೈಸಿಕೊಳ್ಳಲು ಮಾಜಿ ಶಾಸಕ ಸುರೇಶ್​ಗೌಡ ಸುಳ್ಳು ಆರೋಪ ಮಾಡಿದ್ದಾರೆ ಎನ್ನುವುದು ಕ್ಷೇತ್ರದ ಜನರೇ ಹೇಳುತ್ತಿದ್ದಾರೆ. ಆದರೆ ಯಾವಾಗ ಎಸ್​ಪಿಗೆ ಶಾಸಕರು ದೂರು ನೀಡಿದರೋ ಆಗ ಇಕ್ಕಟ್ಟಿಗೆ ಸಿಲುಕಿ ತಾನೇ ಠಾಣೆಗೆ ದೂರು ನೀಡಿದ್ದರು. ಇದೀಗ ಪ್ರತಿದೂರು ದಾಖಲಾಗಿದೆ. ಯಾರು ಯಾರಿಗೆ ಜೀವ ಬೆದರಿಕೆ ಹಾಕಿದ್ದಾರೆ ಅನ್ನೋದನ್ನು ಪೊಲೀಸ್ರು ತನಿಖೆ ಮಾಡಿ ಪ್ರಕರಣವನ್ನು ಇತ್ಯರ್ಥ ಮಾಡಬೇಕಿದೆ. ಯಾರಿಂದ ಯಾರಿಗೂ ಜೀವ ಬೆದರಿಕೆ ಇಲ್ಲ ಎನ್ನುವುದಾದರೆ ಇಬ್ಬರಿಗೂ ತನಿಖಾ ವೆಚ್ಚವನ್ನು ಭರಿಸುವಂತೆ ನೋಟಿಸ್​ ಕೊಡಬೇಕು. 

ಕೃಷ್ಣಮಣಿ

RS 500
RS 1500

SCAN HERE

Pratidhvani Youtube

«
Prev
1
/
3858
Next
»
loading
play
ರಾಜ್ಯದ ಜನರ ಧ್ವನಿಯಾದ 'ಪ್ರಜಾ ಧ್ವನಿ' ಯಾತ್ರೆಯ 'ಮಂಡ್ಯ ಸಮಾವೇಶ'ದ ನೇರ ಪ್ರಸಾರ #PrajaDhwaniYatre
play
ಪರಶುರಾಮ ತಪ್ಪಸಿನ ಫಲದಿಂದ ತುಳುನಾಡು ಹುಟ್ಟಿದ್ದು | CM Bommai |
«
Prev
1
/
3858
Next
»
loading

don't miss it !

Tiger Attack : ಸೌದೆ ತರಲು ಹೋಗಿ ಶವವಾದ | Pratidhvani
ವಿಡಿಯೋ

Tiger Attack : ಸೌದೆ ತರಲು ಹೋಗಿ ಶವವಾದ | Pratidhvani

by ಮಂಜುನಾಥ ಬಿ
January 23, 2023
O Manase Movie | ಬ್ಯಾಂಕಾಕ್ ನಲ್ಲೇ ಸೋಪಿಂಗ್ ಮಾಡು ಅಂತ ಅಡ್ವಾನ್ಸ್ ಕೊಟ್ರು…! |Dharma | Pratidhvani
ಸಿನಿಮಾ

O Manase Movie | ಬ್ಯಾಂಕಾಕ್ ನಲ್ಲೇ ಸೋಪಿಂಗ್ ಮಾಡು ಅಂತ ಅಡ್ವಾನ್ಸ್ ಕೊಟ್ರು…! |Dharma | Pratidhvani

by ಪ್ರತಿಧ್ವನಿ
January 23, 2023
ಮಾಜಿ ಸಿಎಂ S.M.ಕೃಷ್ಣರಿಗೆ Padmaawards: ಶಾಲು ಹೊದಿಸಿ ಸನ್ಮಾನಿಸಿದ ಸಿಎಂ ಬೊಮ್ಮಾಯಿ. #pratidhvani #padmaawards
ರಾಜಕೀಯ

ಮಾಜಿ ಸಿಎಂ S.M.ಕೃಷ್ಣರಿಗೆ Padmaawards: ಶಾಲು ಹೊದಿಸಿ ಸನ್ಮಾನಿಸಿದ ಸಿಎಂ ಬೊಮ್ಮಾಯಿ. #pratidhvani #padmaawards

by ಪ್ರತಿಧ್ವನಿ
January 27, 2023
B K Sangameshwar : ಸರ್ಕಾರ ನೆಡೆಸೋಕೆ ಯೋಗ್ಯತೆ ಇಲ್ಲ | Pratidhvani
ರಾಜಕೀಯ

B K Sangameshwar : ಸರ್ಕಾರ ನೆಡೆಸೋಕೆ ಯೋಗ್ಯತೆ ಇಲ್ಲ | Pratidhvani

by ಪ್ರತಿಧ್ವನಿ
January 21, 2023
Bommai: ಕಾಂಗ್ರೆಸ್ ದೂರು CM ವ್ಯಂಗ್ಯ! | Siddu | DKS | Congress | Pratidhvani
ರಾಜಕೀಯ

Bommai: ಕಾಂಗ್ರೆಸ್ ದೂರು CM ವ್ಯಂಗ್ಯ! | Siddu | DKS | Congress | Pratidhvani

by ಪ್ರತಿಧ್ವನಿ
January 25, 2023
Next Post
ಛತ್ತೀಸ್‌ಗಢ; ಪೊಲೀಸ್‌ ಎನ್‌ಕೌಂಟರ್‌ನಲ್ಲಿ 3 ನಕ್ಸಲರ ಹತ್ಯೆ

ಛತ್ತೀಸ್‌ಗಢ; ಪೊಲೀಸ್‌ ಎನ್‌ಕೌಂಟರ್‌ನಲ್ಲಿ 3 ನಕ್ಸಲರ ಹತ್ಯೆ

ಮೈಸೂರು; ವಿದ್ಯಾರ್ಥಿಯನ್ನು ಮನಸೋ ಇಚ್ಛೆ ಥಳಿಸಿದ ಶಿಕ್ಷಕ

ಮೈಸೂರು; ವಿದ್ಯಾರ್ಥಿಯನ್ನು ಮನಸೋ ಇಚ್ಛೆ ಥಳಿಸಿದ ಶಿಕ್ಷಕ

ಧರಣಿ ಮಂಡಲ ಮಧ್ಯದೊಳಗೆ ಚಿತ್ರಕ್ಕೆ ಸಾಥ್ ನೀಡಿದ ಹ್ಯಾಟ್ರಿಕ್ ಹೀರೋ, ವಸಿಷ್ಠ ಸಿಂಹ

ಧರಣಿ ಮಂಡಲ ಮಧ್ಯದೊಳಗೆ ಚಿತ್ರಕ್ಕೆ ಸಾಥ್ ನೀಡಿದ ಹ್ಯಾಟ್ರಿಕ್ ಹೀರೋ, ವಸಿಷ್ಠ ಸಿಂಹ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist