ದಶಪಥ ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿರುವುದರಿಂದ ಮೈಸೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿದೆ.
ನೂತನವಾಗಿ ನಿರ್ಮಾಣವಾಗುತ್ತಿರುವ ದಶಪಥ ರಸ್ತೆಯ (10 Lane Expressway) ಮೇಲೆ ನೀರು ತುಂಬಿ ಹರಿಯುತ್ತಿದೆ. ಬಿಡದಿ ಸಮೀತಿ ಕೆರೆ ಹೊಡೆದು ಸರ್ವಿಸ್ ರೋಡ್ ಪೂರ್ತಿ ಕೊಚ್ಚಿ ಹೋಗಿದ್ದು ದಶಪಥ ರಸ್ತೆಯಲ್ಲಿ ನೀರು ತುಂಬಿದೆ.
ರಾಮನಗರದಿಂದ (Bengaluru) ಬೆಂಗಳೂರಿಗೆ ಸಂಚಾರ ಮಾಡಲು ಬದಲಿ ಮಾರ್ಗಗಳನ್ನು ಅನುಸರಿಸಿದರೂ. ಬಿಡದಿ ರಸ್ತೆಯಲ್ಲಿ ನೀರು ತುಂಬಿದ್ದು, ಕುಂಬಳಗೂಡಿನ ಸಮೀಪ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದೆ. ಮೈಸೂರಿನಿಂದ ಬರುವವರು ನಾಗಮಂಗಲ ದಾರಿಯಿಂದ ಕುಣಿಗಲ್ ನೆಲಮಂಗಲ ಮಾರ್ಗವಾಗಿ ಬಂದರೆ ಸೂಕ್ತ ಎನ್ನಿಸುತ್ತಿದೆ.
ನಿನ್ನೆ ತಡ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಈ ಸ್ಥಿತಿ ನಿರ್ಮಾಣವಾಗಿದೆ.