ಇಂದು ನೂತನ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಪ್ರತಾಪ್ ರೆಡ್ಡಿ, ಮತ್ತೆ ಟೋಯಿಂಗ್ ಜಾರಿಗೆ ತರೋದಾಗಿ ಘೋಷಣೆ ಮಾಡಿದ್ದಾರೆ.
ನಗರದಲ್ಲಿ ಇಂದು ಬೆಂಗಳೂರು ನಗರ ಕಮೀಷನರ್ ಆಗಿ ಅಧಿಕಾರಿ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಜೊತೆಗೆ ಮಾತನಾಡಿ, ಶೀಘ್ರವೇ ನಗರದಲ್ಲಿ ಟೋಯಿಂಗ್ ಜಾರಿಗೆ ತರಲಾಗುತ್ತದೆ. ಜನರು ಸಲಹೆ ಸೂಚನೆ, ನೀಡಿದರೆ ಫಾಲೋ ಮಾಡುತ್ತೇವೆ ಎಂದು ಹೇಳಿದ್ದಾರೆ.
ಪ್ರತಿಯೊಂದು ಠಾಣೆಯಲ್ಲಿಯೂ ಕನಿಷ್ಠ ನಾಲ್ಕು ಸಿಸಿಟಿವಿ ಇರಲೇ ಬೇಕು. ಯಾರೇ ಸಾರ್ವಜನಿಕರು ದೂರು ನೀಡಿದ್ರು, ದೂರು ದಾಖಲಿಸಲಬೇಕು ಎಂಬುದಾಗಿ ಖಡಕ್ ಸೂಚನೆ ನೀಡಿದರು.