ಬ್ರಿಟಿಷರ ಕನಸಿನಲ್ಲಿಯೂ ಬೆಚ್ಚು ಬಿಳುವಂತೆ ಕಾಡಿದ ಅಪ್ರತಿಮ ದೊರ ಟಿಪ್ಪು ಸುಲ್ತಾನ್ ಭಾವವಿತ್ರವಿರುವ ಬ್ಯಾನರ್ಗಳನ್ನು ಹರಿದಿರು ಕುರಿತು ಮಾತನಾಡಿರುವ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೆಲವು ಮತಾಂಧತೆ ಇರುವಂತಹ ಸಂಸ್ಥೆಗಳು ಕಾನೂನಿಗೆ ಆತಂಕವನ್ನು ಉಂಟುಮಾಡುವ ಹಾಗೂ ಸರಾಗವಾಗಿ ಆಡಳಿತ ನಡೆಸುವಾಗ ಅಡ್ಡಿ ಮಾಡುವಂತಹ ಕೆಲಸಗಳನ್ನು ಕಾಲಕಾಲಕ್ಕೆ ಭಯೋತ್ಪಾದನೆ ಮಾದರಿಯಲ್ಲಿ ಮಾಡುತ್ತಾ ಇದೆ ಎಂದು ಹೇಳಿದರು.
ಗದಗ ತಾಲೂಕಿನ ಲಕ್ಕುಂಡಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಎಸ್.ಡಿ.ಪಿ.ಐ ಇರಬಹುದು, ಅಥವಾ ಯಾವುದೇ ಸಂಘಟನೆ ಇರಬಹುದು. ನಾವು ಸರ್ಕಾರದಿಂದ ಇಂತಹ ಯಾವುದೇ ಡಗ್ಗು ಸಲಾಮಿಗೂ, ಪುಂಡಾಟಕ್ಕೂ ಕೂಡಾ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಕಾನೂನಿಗೆ ಕೈಗೆತ್ತಿಕೊಳ್ಳುವಂತಹ ಕೆಲಸವನ್ನು ಯಾವ ಸಂಸ್ಥೆಯವರೂ ಕೂಡಾ ಹೊಂದಿಲ್ಲ. ಅದು ಡಿಕೆಶಿ ಹೇಳಿರಲಿ ಅಥವಾ ಸಿದ್ದರಾಮಯ್ಯ ಹೇಳಿರಲಿ. ಕಾನೂನು ಯಾರು ಕೈಗೆತ್ತಿಕೊಳ್ಳುತ್ತಾರೋ ಅವರ ಬಂಧನ ಆಗತ್ತದೆ ಎಂದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷ ಫ್ರೀಡಂ ಮಾರ್ಚ್ಅನ್ನು ಆ. 15ಕ್ಕೆ ಆಯೋಜನೆ ಮಾಡಿದೆ. ಅದಕ್ಕೆ ಪ್ರತಿಯಾಗಿ ಬೆಂಗಳೂರಿನಲ್ಲಿ ಸ್ವಾತಂತ್ರ್ಯ ನಡಿಗೆಯ ಕುರಿತಾದ ದೊಡ್ಡ ದೊಡ್ಡ ಫ್ಲೆಕ್ಸ್ಗಳನ್ನು ಹಾಕಲಾಗಿದೆ. ಇದರಲ್ಲಿ ಬ್ರಿಟಿಷರ ಕನಸಿನಲ್ಲಿಯೂ ಬೆಚ್ಚು ಬಿಳುವಂತೆ ಕಾಡಿದ ಅಪ್ರತಿಮ ದೊರ ಟಿಪ್ಪು ಸುಲ್ತಾನ್ ಭಾವವಿತ್ರವಿರುವ ಬ್ಯಾನರ್ಗಳನ್ನು ಕೆಲವು ಕಿಡಿಕೇಡಿಗಳು ನಿನ್ನೆ ತಡರಾತ್ರಿ ಹರಿದು ಹಾಕಿದ್ದಾರೆ.