ದೆಹಲಿ ಸರ್ಕಾರ ನೀಡುತ್ತಿರುವ ಉಚಿತ ಯೋಜನೆಗಳ ವಿರುದ್ದ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಸೋಮವಾರ ಈ ಕುರಿತು ಮಾತನಾಡಿದ ಕೇಜ್ರಿವಾಲ್ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ ದೇಶವನ್ನು ಸದೃಢವಾಗಿಸಲು ಯೋಜನೆಗಳನ್ನು ರೂಪಿಸಬೇಕು ಎಂದಿದ್ದಾರೆ.
ಮುಂದುವರೆದು, ಕೇಂದ್ರ ಸರ್ಕಾರವು 300 ಯೂನಿಟ್ಗಳವರೆಗೆ ಉಚಿತ ವಿದ್ಯುತ್, ನಿರುದ್ಯೋಗ ಭರ್ತಿ ಮಾಡುವುದು, ಉಚಿತ ಶಿಕ್ಷಣ ನೀಡುವಂತಹ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.
ಕೆಲವರು ಸರ್ಕಾರಿ ಯೋಜನೆಗಳನ್ನು ಉಚಿತ ಎಂದು ಕರೆಯುವ ಮೂಲಕ ಲೇವಡಿ ಮಾಡುತ್ತಾರೆ ನಮ್ಮ ಸರ್ಕಾರ ನೀಡುತ್ತಿರುವ ಯೋಜನೆಗಳ ವಿರುದ್ದ ಪಿತೂರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಜನಪರ ಯೋಜೆನಗಳನ್ನು ಟೀಕಿಸುವವರು ಹಾಗೂ ವಿರೋಧಿಸುವವರು ದ್ರೋಹಿಗಳು ಎಂದಿದ್ದಾರೆ. ಯಾರು ತಮ್ಮ ಸ್ನೇಹಿತರು ಮಾಡಿದ 10 ಲಕ್ಷ ಕೋಟಿ ಸಾಲವನ್ನ ಮನ್ನಾ ಮಾಡಿದ್ದಾರೆ ಅಂತಹವರನ್ನು ದ್ರೋಹಿಗಳೆಂದು ಕರೆಯಬೇಕು ಎಂದು ಪರೋಕ್ಷವಾಗಿ ನರೇಂದ್ರ ಮೋದಿ ಸರ್ಕಾರದ ವಿರುದ್ದ ಗುಡುಗಿದ್ದಾರೆ.