ಕರೋನ ಸೋಂಕಿನ ಎರಡನೇ ಅಲೆಯಿಂದ ಹೊರಬರುವ ಮುನ್ನವೇ ಮೈಸೂರಿನಲ್ಲಿ ಮೂರನೇ ಅಲೆಯ ಆತಂಕ ಮನೆಮಾಡಿದೆ. ತಜ್ಞರ ಮುನ್ಸೂಚನೆ ನಡುವೆಯೇ ಮೈಸೂರಿನಲ್ಲಿ ಕಳೆದ ಒಂದು ವಾರದಿಂದೀಚೆಗೆ ದಾಖಲಾಗಿರುವ ಅಂಕಿಅಂಶಗಳು ಕರೋನ ಸೋಂಕಿನ ಮೂರನೇ ಅಲೆಯನ್ನು ಖಾತ್ರಿಪಡಿಸುತ್ತಿವೆ. ಕಳೆದ 10 ದಿನದಲ್ಲಿ 700ಕ್ಕೂ ಹೆಚ್ಚು ಮಕ್ಕಳಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಮೈಸೂರು ಜಿಲ್ಲೆಯಲ್ಲಿ 18 ವರ್ಷದೊಳಗಿನ ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ. ಮೊದಲ ಅಲೆಯಲ್ಲಿ 1500ಕ್ಕೂ ಹೆಚ್ಚು ಮಕ್ಕಳಲ್ಲಿ ಸೋಂಕು ಪತ್ತೆಯಾಗಿತ್ತು. ಇದೀಗ ಕಳೆದ ಮೂರು ತಿಂಗಳಲ್ಲಿ 3 ಸಾವಿರ ಮಕ್ಕಳಲ್ಲಿ ಸೋಂಕು ಪತ್ತೆ ಆಗಿದೆ. ಅದರ ಹೊರತಾಗಿ ಕಳೆದ 10 ದಿನದಲ್ಲಿ ಸೋಂಕು ಹೆಚ್ಚಾಗಿ ಕಂಡುಬಂದಿದೆ. ಜಿಲ್ಲಾಡಳಿತ ನೀಡಿರುವ ಅಧಿಕೃತ ಸೋಂಕಿತರ ವರದಿಯಲ್ಲಿ ಕಳೆದ 10 ದಿನದಲ್ಲಿ 769 ಪ್ರಕರಣ ಪತ್ತೆಯ. ಸದ್ಯಕ್ಕೆ ದೊಡ್ಡ ಮಟ್ಟದ ಸಮಸ್ಯೆ ಕಂಡು ಬಂದಿಲ್ಲ ಎಂಬ ಮಾತು ಅಧಿಕಾರಿಗಳ ವಲಯದಲ್ಲಿ ಕೇಳಿಬಂದಿರುವುದರ ನಡುವೆಯೇ, ಮಕ್ಕಳಲ್ಲಿ ಅಸಿಮ್ಟಮ್ಯಾಟಿಕ್ ಲಕ್ಷಣಗಳು ಕಂಡುಬರುತ್ತಿರುವುದು ಮುಂದೆ ಈ ಸಂಖ್ಯೆ ಹೆಚ್ಚಾಗುವ ಆತಂಕವನ್ನು ತಂದೊಡ್ಡಿದೆ.
ಮೂರನೇ ಅಲೆಯ ಕರೋನ ಹಿನ್ನಲೆಯಲ್ಲಿ ಈಗಾಗಲೇ ನಾವು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದವೆ. ಒಂದು ತಿಂಗಳ ಹಿಂದೆಯೇ 23 ಮಂದಿ ಮಕ್ಕಳ ತಜ್ಞರು ಈ ಸಭೆಯಲ್ಲಿ ಭಾಗಿಯಾಗಿದ್ದರು. ಅವರು ಈಗಾಗಲೇ ಮೈಸೂರಿನಲ್ಲಿ ಒಂದು ಕಾಮನ್ ಫೆಸಿಲಿಟಿ ಇರುವ 500 ಬೆಡ್ ನ ಕ್ಯಾಂಪಸ್ ಹುಡುಕುತ್ತಿದ್ದೇವೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಇದಕ್ಕೆ ಈಗಾಗಲೇ ನಮ್ಮ ಟ್ರಾಮ ಸೆಂಟರ್, ಜಿಲ್ಲಾಸ್ಪಾತ್ರೆ, ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗಳು ಒಂದೇ ಕ್ಯಾಂಪಸ್ ನಲ್ಲಿ ಬರುತ್ತವೆ. ಇಲ್ಲಿಯೇ ಅಗಯ ಸಿದ್ದತೆ ಮಾಡುತ್ತಿದ್ದೇವೆ. ಮಕ್ಕಳ ವೆಂಟಿಲೇಟರ್ ಯಾವ ರೀತಿಯಲ್ಲಿ ಬೇಕಾಗಲಿವೆ ಎಂಬ ಬಗ್ಗೆ ಯೋಚಿಸಿದ್ದೆವೆ ಎಂದಿದ್ದಾರೆ. ಮೂರು ವರ್ಷದ ಒಳಗಿನ ಮಕ್ಕಳಿಗೆ ನಿಯೋ ವೆಂಟಿಲೇಟರ್ ಬೇಕಾಗಿದ್ದು, ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಸಾಮಾನ್ಯ ವೆಂಟಿಲೇಟರ್ ಸಾಕಾಗಲಿದೆ ಎಂಬ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ. ಯಾವುದೇ ಮಕ್ಕಳು ಸಹ ಸೋಂಕಿನಿಂದ ಬಂದು ಅಡ್ಮಿಟ್ ಆಗಬಾರುದು ಅನ್ನೋ ಯೋಚನೆ ಇದ್ದು, ಆ ನಿಟ್ಟಿನಲ್ಲಿ ನಾವು ಕಾರ್ಯ ಪ್ರೌವೃತ್ತರಾಗಿದ್ದೆವೆ ಎಂದರು.
ಜಿಲ್ಲೆಯಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಸಾವಿನ ಪ್ರಮಾಣ ಕಡಿಮೆಯಾಗಿದೆ. ಮಾತ್ರವಲ್ಲ, ಪಾಸಿಟಿವ್ ಪ್ರಕರಣಗಳು ಸಹ ಕಡಿಮೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಹೆಚ್. ಪ್ರಸಾದ್ ತಿಳಿಸಿದ್ದಾರೆ.
ಆಸ್ಪತ್ರೆಗಳಲ್ಲಿ ದಾಖಲಾಗಿ ಬಂದು ಸತ್ತ ವ್ಯಕ್ತಿಗಳ ಮಾಹಿತಿ ನಮ್ಮಲ್ಲಿ ಹಾಗೂ ವಾರ್ ರೂಂನಲ್ಲಿ ಇರತ್ತದೆ. ಆದರೆ, ಕೆಲವು ಹಳ್ಳಿಗಾಡುಗಳಲ್ಲಿ ಆಸ್ಪತ್ರೆಗಳಿಗೆ ಬರದೆ ಇರೋರು ಈ ರೀತಿ ಸಾವನ್ನಪ್ಪಿದರೆ ನಮ್ಮಲ್ಲಿ ಮಾಹಿತಿ ಇರುವುದಿಲ್ಲ. ಹೀಗಾಗಿ ಅದನ್ನು ಪರಾಮರ್ಶೆ ಮಾಡಿ ದಾಖಲೆ ಮಾಡುತ್ತಿದ್ದೇವೆ. ನಾನು ಅಧಿಕಾರಕ್ಕೆ ಬಂದ ತಕ್ಷಣ ಮಾಡಿದ ಮೊದಲ ಕೆಲಸ ಜಿಲ್ಲೆಯ ಜನನ ಮತ್ತು ಮರಣ ಪ್ರಮಾಣ ದಾಖಲೆಗಳ ಮಾಹಿತಿ ಪಡೆದಿದ್ದೇನೆ. ಅದು ಏನಾಗಿದೆ ಎಂಬುದನ್ನು ನೋಡಿ ಸರ್ಕಾರಕ್ಕೆ ಮಾಹಿತಿ ನೀಡುತ್ತೇನೆ ಎಂದರು. ಉದ್ದೇಶ ಪೂರ್ವಕವಾಗಿ ಸಾವಿನ ಪ್ರಮಾಣ ಮುಚ್ಚಿಡಲಾಗಿದೆ ಎನ್ನುವುದು ಕಂಡುಬರುತ್ತಿಲ್ಲ. ಕೆಲವು ಬಾರಿ ಸೋಂಕಿತರು ಡಿಸ್ಚಾರ್ಜ್ ಆದ ಬಳಿಕ ಹಾಗೂ ಕೆಲವರು ಆಸ್ಪತ್ರೆಗೆ ಬರುವ ಮುನ್ನ ಸಾವನ್ನಪ್ಪಿದ್ದಾರೆ. ಹಾಗಾಗಿ ಸಾವಿನ ಪ್ರಮಾಣದಲ್ಲಿ ಹೆಚ್ಚು ಸ್ಪಷ್ಟತೆ ಇಲ್ಲವಾಗಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ 2ನೇ ಅಲೆಯ ಕೋವಿಡ್ ಕೇಸ್ಗಳು ಬಹುತೇಕ ಕಡಿಮೆಯಾಗುತ್ತಿರುವ ಮಧ್ಯೆ ರಾಜ್ಯಕ್ಕೆ ಡೆಲ್ಟಾ ಪ್ಲಸ್ ಎಂಟ್ರಿಯಾಗಿದೆ ಎಂಬ ಮಾಹಿತಿ ಇತ್ತು. ಮಹಾರಾಷ್ಟ್ರ ಬಳಿಕ ಮೊದಲ ಡೆಲ್ಟಾ ಪ್ಲಸ್ ವೈರಸ್ ಮೈಸೂರಿನಲ್ಲಿ ಪತ್ತೆಯಾಗಿರುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಪಷ್ಟಪಡಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡೆಲ್ಟಾ ಪ್ಲಸ್ಗೆ ಸಂಬಂಧಿಸಿದ 40 ಸ್ಯಾಂಪಲ್ಗಳನ್ನು ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರದಿಂದ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಡೆಲ್ಟಾ ಪ್ಲೆಸ್ ಪತ್ತೆಯಾಗಿರುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಮಾಹಿತಿ ಬಂದರೆ ಖಚಿತ ಪಡಿಸಲಾಗುವುದು ಎಂದು ಹೇಳಿದರು. ಮೈಸೂರಿನಲ್ಲಿ 800 ಮಂದಿ ಮಕ್ಕಳಿಗೆ ಕೊರೊನಾ ಸೋಂಕು ಈವರೆಗೆ ತಗುಲಿದೆ. ಮೂರನೇ ಅಲೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.