ಮಾಜಿ ಸಚಿವ ವಿನಯ್ ಕುಲಕರ್ಣಿ (Vinay kulkarni) ಹೇಳಿಕೆ ಬೆಂಗಳೂರಿನ ಡಾಲರ್ಸ್ ಕಾಲೋನಿ (Dollars colony) ನಿವಾಸದ ಮೇಲೆ ED ದಾಳಿ ನಡೆಸಿ ಪರಿಶೀಲಿಸಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಕುಲಕರ್ಣಿ,ಏನು ಬೇಕೋ ಎಲ್ಲಾ ಕೇಳಿದ್ದಾರೆ..ಯಾವ ಕೇಸ್ ಹಾಕಬೇಕೋ ಎಲ್ಲ ಕೇಸ್ ಹಾಕಿದ್ದಾರೆ. ಇದೆಲ್ಲ ರಾಜಕೀಯ ಷಡ್ಯಂತ್ರ ಎಂದಿದ್ದಾರೆ.

ನನಗೆ ಬೇರೆ ಯಾವುದೇ ಉದ್ಯಮ ಇಲ್ಲ.ನಾನು ಪ್ಯೂರ್ಲಿ ಒಬ್ಬ ಅಗ್ರಿಕಲ್ಚರಿಸ್ಟ್ (Agriculturist) ಅಷ್ಟೇ. ವ್ಯವಸಾಯ ಬಿಟ್ಟು ನನಗೆ ಬೇರೇನೂ ಬರುವುದಿಲ್ಲ. ನನಗೆ ಯಾವುದೇ ಬಿಜಿನೆಸ್ ಕೂಡ ಇಲ್ಲ ಎಂದಿದ್ದಾರೆ. ಇನ್ನು ED ದಾಳಿಯ ವೇಳೆ ತಮ್ಮ ಮನೆಯಲ್ಲಿ ಏನು ಸಿಗಲಿಲ್ಲ ಎಂದು ವಿನಯ್ ಹೇಳಿದ್ದಾರೆ.
ED ಅವರಿಗೆ ಏನು ಬೇಕು ಎಲ್ಲ ಹುಡುಕಿದ್ದಾರೆ.ಹೈಕೋರ್ಟ್ ನಲ್ಲಿ ನಾನು ವಿಟ್ನೆಸ್, ಕೆಲವು ಕೇಸ್ ನಲ್ಲಿ ಒಂದು ತಿಂಗಳಿನಿಂದ ದಿನಾ ಹರಾಸ್ಮೆಂಟ್ ನಡಿತಿದೆ. ನಾನೊಬ್ಬ ಎಂ.ಎಲ್.ಎ ಆದ್ರು ನನ್ನ ಕ್ಷೇತ್ರಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಹಾರಾಸ್ಮೆಂಟ್ ತ್ರಾಸ್ ಗೆ ಲಿಮಿಟೇಷನ್ ಇರಬೇಕು, ಇದನ್ನು ಹೇಳಲು ಬಹಳ ನೋವಾಗತ್ತೆ ಎಂದಿದ್ದಾರೆ.

ಇನ್ನು ಆರೋಪಿ ಐಶ್ವರ್ಯಗೌಡ ಜೊತೆ ಟ್ರಾನ್ಸಾಕ್ಷನ್ ಇದ್ರೆ ಸಿಕ್ಕೇ ಸಿಗತ್ತೆ.ಒಮ್ಮೆ ಕೊಲ್ಲಾಪುರ ಟೆಂಪಲ್ ಹೋಗುವಾಗ ಪರಿಚಯ ವಾಯ್ತು. ಅವರೇ ಕಾರನ್ನ ನಮ್ಮ ಫಾರ್ಮ್ ನಲ್ಲಿ ಬಿಟ್ಟು ಹೋಗಿದ್ರು. ಒಂದು ತಿಂಗಳ ನಂತರ ಪೊಲೀಸರು ಕಾಲ್ ಮಾಡಿದ್ರು.. ಆ ನಂತರ ತಂದು ಕೊಟ್ಟಿದ್ರು ಎಂದು ಹೇಳಿದ್ದಾರೆ.
ಈ ರೀತಿ ಜನರಿಗೆ ಮೋಸ ವಂಚನೆ ಮಾಡುವುದು ಒಳ್ಳೆ ಕೆಲಸವಲ್ಲ. ಇಡಿ ಅವರಿಗೆ ಯಾವುದೇ ನೋಟಿಸ್ ನೀಡಿಲ್ಲ.ಆದ್ರೆ ಪ್ರತಿಯೊಂದಕ್ಕೂ ನಾನೇ ಟಾರ್ಗೇಟ್ಕ್ಷೇತ್ರಕ್ಕೆ ಹೋಗಲಿಕ್ಕೆ ಆಗ್ತಿಲ್ಲ ಆಗಿದ್ದೇನೆ. ಇದ್ರಿಂದ ಅಧಿಕಾರಿಗಳನ್ನ ಭೇಟಿ ಆಗಲಿಕ್ಕೆ ಆಗ್ತಿಲ್ಲ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದ್ದಾರೆ.