ಜೆಡಿಎಸ್ ಪಕ್ಷಕ್ಕೆ ( JDS ) ಸೋಲು- ಗೆಲುವು ಹೊಸದಲ್ಲ, ವಿಧಾನಸಭೆ ಚುನಾವಣೆಯಲ್ಲಿ ( Assembly Election ) ಸೋಲಾಗಿದೆ, ರಾಜ್ಯ ಪ್ರವಾಸ ಮಾಡಿ ಪಕ್ಷ ( Party ) ಕಟ್ಟಬೇಕಿದೆ, ಇದಕ್ಕಾಗಿ ರಾಷ್ಟ್ರೀಯ ಅಧ್ಯಕ್ಷರು 20 ಸದಸ್ಯರ ಕೋರ್ ಕಮಿಟಿ ರಚಿಸಿದ್ದಾರೆ, ನನ್ನ ಅಧ್ಯಕ್ಷತೆಯಲ್ಲೇ ( President ) ಸಮಿತಿ ಆಗಬೇಕು ಅಂತ ದೇವೇಗೌಡರು ( H.D Devegowda ) ತೀರ್ಮಾನ ಮಾಡಿದ್ದಾರೆ, ನನ್ನ ಮೇಲೆ ಇಟ್ಟಿರುವ ಪ್ರೀತಿಗಾಗಿ ನಾನು ಧನ್ಯವಾದ ಸಲ್ಲಿಸುತ್ತೇನೆ, ನನ್ನೊಂದಿಗೆ ಮಾಜಿ ಸಚಿವರಾದ ವೈ.ಎಸ್.ವಿ.ದತ್ತ, ಬಂಡೆಪ್ಪ ಕಾಶಂಪೂರ್ ಕೂಡ ಇರುತ್ತಾರೆ,ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಆಗಸ್ಟ್ 15ರಂದು ಸಭೆ, ಎಲ್ಲ 20 ಸದಸ್ಯರನ್ನೂ ಸೇರಿಸಿ ಸಭೆ ನಡೆಸಿ ಮುಂದಿನ ಯೋಜನೆ ರೂಪಿಸುತ್ತೇವೆ ಎಂದು ಮೈಸೂರಿನಲ್ಲಿ ಶಾಸಕ ಜಿ.ಟಿ ದೇವೇಗೌಡ ಹೇಳಿಕೆ ನೀಡಿದ್ದಾರೆ.

ಇನ್ನು, ಲೋಕಸಭೆ ಚುನಾವಣೆಯ ಬಗ್ಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಗೆ ಜೆಡಿಎಸ್ ಸಿದ್ಧತೆ, ಶೀರ್ಘದಲ್ಲೇ ರಾಜ್ಯ ಪ್ರವಾಸ ಆರಂಭ ಮಾಡುತ್ತೇವೆ, ಲೋಕಸಭಾ ಚುನಾವಣೆಗೆ ಇನ್ನು 7- 8 ತಿಂಗಳು ಬಾಕಿ ಇದೆ, ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕು, ಇದಕ್ಕಾಗಿ ಶೀರ್ಘದಲ್ಲೇ ರಾಜ್ಯ ಪ್ರವಾಸ ಮಾಡಲಾಗುತ್ತೆ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳು, ಪಂಚರತ್ನ ಯೋಜನೆಯ ಉದ್ದೇಶಗಳನ್ನು ಜನರಿಗೆ ತಿಳಿಸಬೇಕು, ಪಕ್ಷ ಸಂಘಟನೆ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲಾಗುವುದು. ಎಂದು ಹೇಳಿಕೆಯನ್ನ ನೀಡಿದ್ದಾರೆ.
ಈ ಅಂಕಣವನ್ನು ಓದಿ ; ದುರಂತದ ನಡುವೆ ಮಾನವತೆ ಮೆರೆದ ಚೇತನ ನಿಕೋಲಸ್ ವಿಂಟನ್- ಭಾಗ 1

ಜೆಡಿಎಸ್ ಹಾಗೂ ಬಿಜೆಪಿ ನಡುವಿನ ಮೈತ್ರಿ ಕುರಿತು ಮಾತನಾಡಿದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ರಾಜ್ಯದ ಜನ ಬುದ್ದಿವಂತರು, ರಾಜ್ಯದ ಅಧಿಕಾರವನ್ನು ಕಾಂಗ್ರೆಸ್ಗೆ ಕೊಟ್ಟಿದ್ದಾರೆ, ದೇಶದ ಅಧಿಕಾರವನ್ನು ಸಮರ್ಥ ನಾಯಕನ ಕೈಗೆ ಕೊಡಲಿದ್ದಾರೆ, ಮೈತ್ರಿ ಬಗ್ಗೆ ವರಿಷ್ಠರು ತೀರ್ಮಾನ ಮಾಡಲಿದ್ದಾರೆ, ಮೈಸೂರು ಕ್ಷೇತ್ರದ ವಿಚಾರವೂ ಅಷ್ಟೆ, ಯಾರು ಅಭ್ಯರ್ಥಿ ಆಗಬೇಕು ಅಂತ ವರಿಷ್ಠರು ನಿರ್ಧಾರ ಮಾಡುತ್ತಾರೆ, ಪಕ್ಷ ಸೂಚನೆ ನೀಡಿದರೆ ನಾನೇ ಅಭ್ಯರ್ಥಿ ಆಗಬೇಕಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ.