Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ಕೊಳಕು, ಫ್ಯಾಸಿಸಂ ಎಂದಿದ್ದನ್ನು ಸಮರ್ಥಿಸಿದ ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್

ಪ್ರತಿಧ್ವನಿ

ಪ್ರತಿಧ್ವನಿ

December 1, 2022
Share on FacebookShare on Twitter

53 ನೇ ಅಂತರಾಷ್ಟ್ರೀ ಚಲನಚಿತ್ರೋತ್ಸವದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಕುರಿತು ವಿಮರ್ಶಾತ್ಮಕ ಟೀಕೆಗಳನ್ನು ನೀಡಿ ಬಲಪಂಥೀಯರ ತೀವ್ರ ವಿರೋಧ ಎದುರಿಸಿರುವ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಾದವ್ ಲ್ಯಾಪಿಡ್ ಅವರು ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

Nela Narendra Babu | Tanuja Kannada Movie : ಇಂಥಾ ನೈಜ ಕಥೆಗಳಿಂದ ಬದಲಾವಣೆ ಸಾಧ್ಯ… ತನುಜಾ ಅದ್ಭುತ ಚಿತ್ರ

yadiyurappa ; ಇದ್ದೊಂದು ನೈಜ ಕಥೆ..ಅದಕ್ಕೆ ನಾನು ಅಭಿನಯಿಸಿದ್ದೇನೆ | Tanuja kannada movie | tanuja |

ಅಪ್ಪುಗಾಗಿ ಹಾಡು ಹಾಡಿದ ನಟಿ ಶ್ರುತಿ! Actress Shruti | Puneeth Rajkumar Road Inauguration Event

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್‌ ಫೈಲ್ಸ್‌ ಚಿತ್ರವು ʼಕೊಳಕು ಮತ್ತು ಅಜೆಂಡಾದ ಭಾಗʼ ಎಂದು ಗೋವಾದಲ್ಲಿ ನಡೆದ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಲ್ಯಾಪಿಡ್‌ ಹೇಳಿದ್ದರು. ಅಂತರರಾಷ್ಟ್ರೀಯ ತೀರ್ಪುಗಾರರ ಮುಖ್ಯಸ್ಥರಾದ ಲ್ಯಾಪಿಡ್ ಅವರ ಈ ಹೇಳಿಕೆಯು ದೇಶದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಚಿತ್ರ ನೋಡಿ “ವಿಚಲಿತರಾಗಿದ್ದೇವೆ ಮತ್ತು ಆಘಾತಕ್ಕೊಳಗಾಗಿದ್ದೇವೆ” ಎಂದು ಲ್ಯಾಪಿಡ್‌ ಹೇಳಿದ್ದರು.

“ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ, ಸ್ಪರ್ಧಾತ್ಮಕ ವಿಭಾಗಕ್ಕೆ ಇದು ಸೂಕ್ತವಲ್ಲದ ಅಜೆಂಡಾ ಪ್ರಚಾರದ ಚಲನಚಿತ್ರದಂತೆ ನಮಗೆ ತೋರುತ್ತಿದೆ” ಎಂದು ಅವರು ಹೇಳಿದ್ದರು.

ಕಾಶ್ಮೀರಿ ಪಂಡಿತರ ಹತ್ಯೆಯ ಕುರಿತಾದ ಚಿತ್ರವನ್ನು ಸಂವೇದನಾರಹಿತರಾಗಿ ಲ್ಯಾಪಿಡ್‌ ಟೀಕಿಸಿದ್ದಾರೆಂದು ಬಲಪಂಥೀಯರು ಮುಗಿಬಿದ್ದಿದ್ದರು. ಇದರ ನಂತರ ಇಸ್ರೇಲಿ ಸುದ್ದಿ ವೆಬ್‌ಸೈಟ್ Ynet ನೊಂದಿಗೆ ಫೋನ್ ಮೂಲಕ ಮಾತನಾಡಿದ ಲ್ಯಾಪಿಡ್, “ಇಲ್ಲಿ ಏನು ನಡೆಯುತ್ತಿದೆ ಇದು ವಿಚಿತ್ರ. ಇದು ಭಾರತದಲ್ಲಿ ನಡೆಯುವ ದೊಡ್ಡ ಸರ್ಕಾರಿ ಉತ್ಸವ. ಈ ಚಿತ್ರವು ಕಾಶ್ಮೀರ ಕುರಿತು ಭಾರತದ ನೀತಿಯನ್ನು ಸಮರ್ಥಿಸುತ್ತದೆ ಮತ್ತು ಅದು ಫ್ಯಾಸಿಸ್ಟ್ ಲಕ್ಷಣಗಳನ್ನು ಹೊಂದಿದೆ ” ಎಂದು ಅವರು ಹೇಳಿದ್ದಾರೆ.

‘ದಿ ಕಾಶ್ಮೀರ ಫೈಲ್ಸ್ ’ಕುರಿತು ಸರಕಾರದ ನಿಲುವಿನ ಬಗ್ಗೆ ತನಗೆ ಚೆನ್ನಾಗಿ ಅರಿವಿತ್ತು ಎಂದು ತಿಳಿಸಿದ ಲ್ಯಾಪಿಡ್, ಕಾರ್ಯಕ್ರಮವು ದೂರದರ್ಶನದಲ್ಲಿ ನೇರ ಪ್ರಸಾರವಾಗುತ್ತಿತ್ತು. ಅದು ಸರಕಾರದ ಕಾರ್ಯಕ್ರಮವಾಗಿದ್ದು, ಭಾರತದಲ್ಲಿ ಅತ್ಯಂತ ದೊಡ್ಡ ಚಲನಚಿತ್ರೋತ್ಸವವಾಗಿತ್ತು. ಸರಕಾರವು ಚಿತ್ರವನ್ನು ಅಸಾಧಾರಣ ರೀತಿಯಲ್ಲಿ ಉತ್ತೇಜಿಸಿತ್ತು ಎಂದು ಅವರು ಹೇಳಿದ್ದಾರೆ.

ಶೀಘ್ರವೇ ‘ದಿ ಕಾಶ್ಮೀರ ಫೈಲ್ಸ್’ರೀತಿಯ ಇಸ್ರೇಲಿ ಚಿತ್ರವನ್ನು ಸುಲಭವಾಗಿ ಕಲ್ಪಿಸಿಕೊಳ್ಳಬಹುದು ಎಂದ ಲ್ಯಾಪಿಡ್, ‘ನಾನು ಚಿತ್ರವನ್ನು ವೀಕ್ಷಿಸಿದಾಗ ಅದರಲ್ಲಿಯ ಅಪಪ್ರಚಾರ ಮತ್ತು ಫ್ಯಾಸಿಸಂ ಸಂಯೋಜನೆಯು ನನಗೆ ಆಘಾತವುಂಟು ಮಾಡಿತ್ತು ಎಂಬ ವಾಸ್ತವವನ್ನು ಮೀರಿ ಇನ್ನೊಂದೆರಡು ವರ್ಷಗಳಲ್ಲಿ ಇಂತಹುದೇ ಇಸ್ರೇಲಿ ಚಿತ್ರವು ಬರಬಹುದು ಎನ್ನುವುದನ್ನು ಊಹಿಸಿಕೊಳ್ಳದೇ ಇರಲು ನನಗೆ ಸಾಧ್ಯವಾಗಲಿಲ್ಲ ’ಎಂದರು.

ಚಲನಚಿತ್ರೋತ್ಸವವು ‘ಸರಕಾರವನ್ನು ಹೊಗಳುವ ಕಾರ್ಯಕ್ರಮವಾಗಿ ಉಳಿದಿದೆ, ಹೀಗಾಗಿ ಅದನ್ನು ಖಂಡಿಸುವುದರಲ್ಲಿ ಅಪಾಯಗಳಿವೆ ಎನ್ನುವುದು ತನಗೆ ತಿಳಿದಿತ್ತುʼ ಎಂದು ಲ್ಯಾಪಿಡ್ ಹೇಳಿದರು.

“ಇದು ಯಾವಾಗಲೂ ಒಂದೇ ವಿಧಾನವಾಗಿದೆ – ದೇಶದಲ್ಲಿ ವಿದೇಶಿ ಶತ್ರು ಇದ್ದಾನೆ ಮತ್ತು ದೇಶದ ಒಳಗಿನಿಂದ ದೇಶದ್ರೋಹಿಗಳಿದ್ದಾರೆ.” ಎಂಬ ಅಪಪ್ರಚಾರವನ್ನು ಪ್ರತಿಪಾದಿಸುತ್ತದೆ. ಆಡಳಿತಾರೂಢ ಬಿಜೆಪಿಯ ನಾಯಕರು ಪ್ರಚಾರ ಮಾಡಿದ ಈ ಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಗಿದೆ, ಆದರೆ ಕೋಮು ಭಾವನೆಗಳನ್ನು ಕೆರಳಿಸುವ ಆರೋಪವನ್ನೂ ಎದುರಿಸಿದೆ.

ಚಲನಚಿತ್ರ ನಿರ್ಮಾಪಕರ ಹೇಳಿಕೆಗಳು ಭಾರತದಲ್ಲಿ ಇಸ್ರೇಲ್‌ನ ರಾಜತಾಂತ್ರಿಕರಿಂದ ತೀವ್ರ ಟೀಕೆಗೆ ಒಳಗಾಗಿವೆ, ರಾಯಭಾರಿ ನೌರ್ ಗಿಲೋನ್ ಅವರು ಲ್ಯಾಪಿಡ್ “ನಾಚಿಕೆಪಡಬೇಕು” ಎಂದಿದ್ದರು ಮಾತ್ರವಲ್ಲ ಲ್ಯಾಪಿಡ್ ಕ್ಷಮೆಯಾಚನೆಗೆ ಒತ್ತಾಯಿಸಿದ್ದರು.

RS 500
RS 1500

SCAN HERE

Pratidhvani Youtube

«
Prev
1
/
3856
Next
»
loading
play
ಅಪ್ಪು ನೆನಪಿನಲ್ಲಿ ಯುವಕರಿಗೆ ಸ್ಫೂರ್ತಿ ಆಗಲಿ ಎಂದು ಆಯೋಜಿಸಿದ ಕ್ರೀಡೆ | Appu |
play
Cockroach Sudhi |ನಮ್ಮಂತ ವಿಲನ್‌ ಗಳಿಗೆಲ್ಲಾ ಯಾರ ಸರ್‌ ಹೀರೋಯಿನ್‌ ಕೊಡ್ತಾರೆ #pratidhvanidigital #cockroach
«
Prev
1
/
3856
Next
»
loading

don't miss it !

ಬೊಮ್ಮಾಯಿ, ಯಡಿಯೂರಪ್ಪ, ಮೋದಿ ಯಾರಾದರೂ ರೈತರ ಸಾಲ ಮನ್ನಾ ಮಾಡಿದ್ದಾರ?
ಇತರೆ

ಬೊಮ್ಮಾಯಿ, ಯಡಿಯೂರಪ್ಪ, ಮೋದಿ ಯಾರಾದರೂ ರೈತರ ಸಾಲ ಮನ್ನಾ ಮಾಡಿದ್ದಾರ?

by ಪ್ರತಿಧ್ವನಿ
February 4, 2023
ಕರ್ನಾಟಕದ ಸಂಸದೆ, ಕರ್ನಾಟಕದ ಸೀರೆಯುಟ್ಟು ಕನ್ನಡಿಗರಿಗೆ ಕೊಟ್ಟಿದ್ದೇನು..?
ದೇಶ

ಕರ್ನಾಟಕದ ಸಂಸದೆ, ಕರ್ನಾಟಕದ ಸೀರೆಯುಟ್ಟು ಕನ್ನಡಿಗರಿಗೆ ಕೊಟ್ಟಿದ್ದೇನು..?

by ಕೃಷ್ಣ ಮಣಿ
February 2, 2023
ಪ್ರಥಮ್‌ ಗೆ ಸಾವಿರ ಪ್ರಶ್ನೆ ಕೇಳಿ ಚಳಿ ಬಿಡಿಸಿದ ಪ್ರದೀಪ್‌ #pratidhvaninews #pratham #darshan #dboss
ಸಿನಿಮಾ

ಪ್ರಥಮ್‌ ಗೆ ಸಾವಿರ ಪ್ರಶ್ನೆ ಕೇಳಿ ಚಳಿ ಬಿಡಿಸಿದ ಪ್ರದೀಪ್‌ #pratidhvaninews #pratham #darshan #dboss

by ಪ್ರತಿಧ್ವನಿ
February 7, 2023
ಬ್ರಾಹ್ಮಣ ಸ್ವಾಮೀಜಿಗೆ ಪ್ರಾಣ ಬೆದರಿಕೆ ಹಾಕಿದ್ಯಾರು..!? ಕೇಂದ್ರ ಮಾಡಿದ್ದೇನು..?
ಅಂಕಣ

ಬ್ರಾಹ್ಮಣ ಸ್ವಾಮೀಜಿಗೆ ಪ್ರಾಣ ಬೆದರಿಕೆ ಹಾಕಿದ್ಯಾರು..!? ಕೇಂದ್ರ ಮಾಡಿದ್ದೇನು..?

by ಕೃಷ್ಣ ಮಣಿ
February 9, 2023
Ayanur Manjunath: ಶಿವಮೊಗ್ಗ ನಗರಕ್ಕೆ ಐಕೆಟ್ ಬೇಡಿಕೆ ಇಟ್ಟ ಆಯನೂರು, ಈಶ್ವರಪ್ಪನರನ್ನೇ ಕುಟುಕಿದರು #pratidhvani
ರಾಜಕೀಯ

Ayanur Manjunath: ಶಿವಮೊಗ್ಗ ನಗರಕ್ಕೆ ಐಕೆಟ್ ಬೇಡಿಕೆ ಇಟ್ಟ ಆಯನೂರು, ಈಶ್ವರಪ್ಪನರನ್ನೇ ಕುಟುಕಿದರು #pratidhvani

by ಪ್ರತಿಧ್ವನಿ
February 8, 2023
Next Post
ಬಿಜೆಪಿಯವರು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಾರೆ : ಡಿ.ಕೆ.ಶಿವಕುಮಾರ್‌

ಬಿಜೆಪಿಯವರು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಾರೆ : ಡಿ.ಕೆ.ಶಿವಕುಮಾರ್‌

ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಕಾಲೇಜು ಪ್ರಸ್ತಾವನೆ ಸರ್ಕಾರದ ಮುಂದಿಲ್ಲ : ಸಿಎಂ ಬೊಮ್ಮಾಯಿ

ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಕಾಲೇಜು ಪ್ರಸ್ತಾವನೆ ಸರ್ಕಾರದ ಮುಂದಿಲ್ಲ : ಸಿಎಂ ಬೊಮ್ಮಾಯಿ

ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ಕೊಳಕು, ಫ್ಯಾಸಿಸಂ ಎಂದಿದ್ದನ್ನು ಸಮರ್ಥಿಸಿದ ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್

ನನ್ನ ಟೀಕೆ ಸಂತ್ರಸ್ತ ಕಾಶ್ಮೀರಿ ಪಂಡಿತರ ಕುರಿತಾಗಿರಲಿಲ್ಲ; ಇಸ್ರೇಲಿ ನಿರ್ದೇಶಕ ನಾದವ್‌ ಲ್ಯಾಪಿಡ್‌ ಸ್ಪಷ್ಟೀಕರಣ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist