ರಾಜಕೀಯ ಕುಟುಂಬದಲ್ಲಿ ಹುಟ್ಟಿದ್ದನ್ನು ಹೊರತುಪಡಿಸಿದರೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ರಾಜಕೀಯದಲ್ಲಿ ಯಾವುದೇ ಅನುಭವ ಅಥವಾ ಸಿದ್ಧಾಂತ ಎರಡೂ ಇಲ್ಲ. ಆದರೂ ಇವರು ಆವಾಗಾವಾಗ ಒಂದಷ್ಟು ತೂಕದ ಮಾತನಾಡುತ್ತಾರೆ.
ಸ್ವತಃ ಬ್ರಾಹ್ಮಣ್ಯದ ಪರಮ ಭಕ್ತರಾಗಿರುವ ದೇವೇಗೌಡರ ಕುಟುಂಬಲ್ಲಿ ಜನಿಸಿರುವ ಕುಮಾರಸ್ವಾಮಿಯವರು ಕೂಡ ಬ್ರಾಹ್ಮಣ್ಯದ ಆಚರಣೆಯಲ್ಲಿ ಮುಂಚೂಣಿ ರಾಜಕಾರಣಿ. ಹಳೆ ಮೈಸೂರು ಪ್ರಾಂತ್ಯದಲ್ಲಿ ಶೂದ್ರ ಒಕ್ಕಲಿಗರಿಗೆ ರಾಷ್ಟ್ರಕವಿ ಕುವೆಂಪುˌ ಅವರ ಮಗ ಪೂರ್ಣಚಂದ್ರ ತೇಜಸ್ವಿˌ ದೇ. ಜವರೇಗೌಡರುˌ ಕಾಳೇಗೌಡ ನಾಗವಾರ್ˌ ಪುರುಷೋತ್ತಮ ಬಿಳಿಮಲೆˌ ಪ್ರೊ. ಭಗವಾನ್ˌ ರಾಜಕಾರಣಿಗಳಾದ ಶಾಂತವೇರಿ ಗೋಪಾಲಗೌಡರಂತವರು ಆದರ್ಶವಾಗಲೆಯಿಲ್ಲ. ಒಕ್ಕಲಿಗ ಸಮುದಾಯವನ್ನು ಸಗಟಾಗಿ ಬ್ರಾಹ್ಮಣ್ಯದ ಪರಮ ಮೌಢ್ಯಕ್ಕೆ ನೂಕುವಲ್ಲಿ ದೇವೇಗೌಡರ ಕುಟುಂಬದ ಕೊಡುಗೆ ಬಹಳ ದೊಡ್ಡದಿದೆ. ಮುಗ್ಧ ಶೂದ್ರ ಒಕ್ಕಲಿಗರು ಈಗಲೂ ತಿರುಪತಿˌ ಮಂತ್ರಾಲಯˌ ಧರ್ಮಸ್ಥಳದ ಪರಮ ಆರಾಧಕರು. ಬ್ರಾಹ್ಮಣ್ಯವನ್ನು ಚಾಚೂ ತಪ್ಪದೆ ಪಾಲಿಸುವವರು.
ಬ್ರಾಹ್ಮಣ್ಯವನ್ನು ಬಲವಾಗಿ ಸಮರ್ಥಿಸುವ ಒಕ್ಕಲಿಗರಲ್ಲಿ ರಾಜಕಾರಣಿ ಎಸ್ ಎಂ ಕೃಷ್ಣ ˌ ಅವರ ಶಿಷ್ಯ ಡಿ ಕೆ ಶಿವಕುಮಾರˌ ಚಿತ್ರನಟ ಜಗ್ಗೇಶ್ˌ ದೊಡ್ಡರಂಗೇಗೌಡˌ ಮತ್ತು ಬಿಜೆಪಿಯಲ್ಲಿರುವ ಸಗಟು ಒಕ್ಕಲಿಗ ಪುಢಾರಿಗಳು ಮತ್ತಿತರರು ಪ್ರಮುಖರು. ಕರ್ನಾಟಕದಲ್ಲಿ ಬ್ರಾಹ್ಮಣ್ಯದ ಪಾರಮ್ಯ ಮೆರೆಯಲು ಆರಂಭವಾದದ್ದೆ ಉಡುಪಿ ಪೇಜಾವವರ ಪರಮ ಶಿಷ್ಯ ಎಸ್ ಎಂ ಕೃಷ್ಣ ಆಡಳಿತಾವಧಿಯಲ್ಲಿ.
ಸಾಫ್ಟ್ ಹಿಂದುತ್ವವಾದಿ ಕೃಷ್ಣರ ಆಡಳಿತವು ಪಠ್ಯಪುಸ್ತಕಗಳಲ್ಲಿ ಬ್ರಾಹ್ಮಣ್ಯ ನುಸುಳಿಸಲು ಅನೂಕೂಲಕರ ವಾತಾವರಣ ಸೃಷ್ಟಿ ಮಾಡಿತು. ಅಷ್ಟೇ ಅಲ್ಲದೆ ಬ್ರಾಹ್ಮಣ್ಯ ದ್ವೇಷದ ನಡುವೆಯೂ ಎತ್ತರಕ್ಕೆ ಬೆಳೆದ ಕುವೆಂಪುರವರು ಬರೆದ ನಾಡಗೀತೆಯನ್ನು ತಿರುಚಿ ಮಾದ್ವರ ಹೆಸರನ್ನು ಸೇರಿಸಿದ ಕುಖ್ಯಾತಿ ಕೃಷ್ಣರದ್ದು. ಕುಮಾರಸ್ವಾಮಿಯವರ ತಂದೆ ದೇವೇಗೌಡರನ್ನು ಅನವರತ ರಾಜಕೀಯದಲ್ಲಿ ತುಳಿಯಲು ಯತ್ನಿಸಿ ವಿಫಲವಾದ ರಾಮಕೃಷ್ಣ ಹೆಗಡೆಯವರೊಂದಿಗಿನ ಬ್ರಾಹ್ಮಣ್ಯದ ಅಪಾಯಗಳ ಅನುಭವದ ಹೊರತಾಗಿಯೂ ಅದೇ ದೇವೇಗೌಡರ ಮಗ ಕುಮಾರಸ್ವಾಮಿಯವರು ಕರ್ನಾಟಕದಲ್ಲಿ ಬಿಜೆಪಿ ಬೇರೂರಲು ನೀಡಿದ ಕೊಡುಗೆ ಅಪಾರವಾದದ್ದು.
ಈಗ ಕುಮಾರಸ್ವಾಮಿಯವರು ಕರ್ನಾಟಕದಲ್ಲಿ ಮುಂದಿನ ಚುನಾವಣೆಯ ನಂತರ ಮಹಾರಾಷ್ಟ್ರ ಮೂಲದ ಚಿತ್ಪಾವನ ಬ್ರಾಹ್ಮಣ ಪ್ರಲ್ಹಾದ ಜೋಶಿಯನ್ನು ಬಿಜೆಪಿ ಮುಖ್ಯಮಂತ್ರಿ ಮಾಡಲಿದೆ ಎನ್ನುವ ಬಹಿರಂಗ ಸತ್ಯವನ್ನೆ ನುಡಿದು ಒಂದು ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಸಂಘದ ಈ ಹುನ್ನಾರ ಹೊಸದೇನಲ್ಲ. ಯಡಿಯೂರಪ್ಪನವರನ್ನು ಇಳಿಸಿದಾಗಲೆ ಈ ಹುನ್ನಾರಗಳು ತೆರೆಮರೆಯಲ್ಲಿ ನಡೆಯುತ್ತಿದ್ದವು. ಲಿಂಗಾಯತ ಮಠಾಧೀಶರ ಮೂಲಕ ಒತ್ತಡವನ್ನು ಹೇರಿಸಿ ಸಂಘದ ಈ ಯತ್ನವನ್ನು ವಿಫಲಗೊಳಿಸಿದ ಯಡಿಯೂರಪ್ಪ ಬಸವರಾಜ್ ಬೊಮ್ಮಾಯಿಯನ್ನು ಮುಖ್ಯಮಂತ್ರಿ ಮಾಡುವಲ್ಲಿ ಸಫಲರಾಗಿದ್ದರು. ಆದರೆ ಕೆಲವೆ ದಿನಗಳಲ್ಲಿ ಬೊಮ್ಮಾಯಿಯನ್ನು ನಿಷ್ಕ್ರಿಯಗೊಳಿಸಿದ ಸಂಘ ತಾನೇ ಪರೋಕ್ಷ ಆಡಳಿತ ನಡೆಸಿದ್ದನ್ನು ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ನಡೆದ ಬೆಳವಣಿಗೆಗಳು ದೃಢೀಕರಿಸುತ್ತವೆ. ಈಗ ಯಡಿಯೂರಪ್ಪ ಕುಟುಂಬವನ್ನು ಸಂಪೂರ್ಣ ನಿಸ್ಕ್ರೀಯಗೊಳಿಸುವ ಯೋಜನೆಯಲ್ಲಿ ಬಿಜೆಪಿಯನ್ನು ನಿಯಂತ್ರಿಸುವ ಅಸಂವಿಧಾನಿಕ ಶಕ್ತಿಗಳು ಅರ್ಧ ಯಶಸ್ವಿಯಾಗಿವೆ. ೨೦೨೩ ರ ಚುನಾವಣೆಯಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ ತಮ್ಮವನೇ ಆಗಿರುವ ಪ್ರಲ್ಹಾದ ಜೋಶಿಯನ್ನು ಮುಖ್ಯಮಂತ್ರಿ ಮಾಡುವ ಯೋಜನೆ ಆ ಅಸಂಧಾನಿಕ ಶಕ್ತಿಗಳು ಹಾಕಿದ್ದರಲ್ಲಿ ಯಾವುದೆ ಅನುಮಾನಗಳಿಲ್ಲ. ಆ ಸಂಗತಿಯನ್ನು ಕುಮಾರಸ್ವಾಮಿಯವರು ಬಹಿರಂಗವಾಗಿ ಚರ್ಚೆಯಾಗುವಂತೆ ಮಾಡಿ ಬ್ರಾಹ್ಮಣ ಮಠಾಧೀಶರ ಮನಸ್ಸಿನಲ್ಲಿರುವ ಗುಪ್ತ ಆಶೆಯನ್ನು ಬಟಾಬಯಲುಗೊಳಿಸಿದ್ದಾರೆ.
ಆದರೆ ರಾಜ್ಯದ ಜನಸಂಖ್ಯೆಯ ಶೇಕಡ ೧.೫ ಯಿಂದ ೨ ರಷ್ಟಿರುವ ಬ್ರಾಹ್ಮಣರು ಈಗಾಗಲೇ ತಮ್ಮದೆ ನಿಯಂತ್ರಣದಲ್ಲಿರುವ ಒಕ್ಕೂಟ ಸರಕಾರದ ಮೇಲೆ ಒತ್ತಡ ಹೇರುವ ಮೂಲಕ ಯಾವುದೇ ಹೋರಾಟ ಮಾಡದೆ ೧೦% ರಷ್ಟು ಬೃಹತ್ ಸ್ವರೂಪದ ಆರ್ಥಿಕ ದುರ್ಬಲರ ಮೀಸಲಾತಿಯನ್ನು ಅನಾಯಾಸವಾಗಿ ಹೊಡೆದುಕೊಂಡು ಕುಳಿತಿದ್ದಾರೆ. ಲಿಂಗಾಯತ ಧರ್ಮ ಮಾನ್ಯತೆ ಹೋರಾಟವನ್ನು ಶತಾಯಗತಾಯ ಹತ್ತಿಕ್ಕಲು ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಪರೋಕ್ಷವಾಗಿ ಹುಟ್ಟುಹಾಕಿದ ಬ್ರಾಹ್ಮಣಶಾಹಿಗಳು ಪಾಪ ಪಂಚಮಸಾಲಿಗಳನ್ನು ಅಕ್ಷರಶಃ ಬೀದಿಪಾಲು ಮಾಡಿದ್ದಾರೆ. ಇಷ್ಟೆಲ್ಲ ಮಾಡಿ ಈಗ ಮುಂದಿನ ಚುನಾವಣೆಯ ನಂತರ ರಾಜ್ಯದ ಮುಖ್ಯಮಂತ್ರಿ ಗದ್ದುಗೆ ಮೇಲೆ ಕಣ್ಣಿಟ್ಟು ಕುಳಿತಿದ್ದಾರೆ. ಅದಕ್ಕಾಗಿ ಬಿಜೆಪಿಯಲ್ಲಿರುವ ಒಕ್ಕಲಿಗ ಹಾಗು ಲಿಂಗಾಯತ ಪುಢಾರಿಗಳನ್ನು ತಮ್ಮ ತಮ್ಮ ಸಮುದಾಯದ ನಾಯಕರೆಂದು ಬಿಂಬಿಸಿಕೊಳ್ಳದೆ ಹಿಂದೂ ನಾಯಕರೆಂದು ಬಿಂಬಿಸಿಕೊಳ್ಳಲು ಕಟ್ಟಪ್ಪಣೆ ಹೊರಡಿಸಿ ತಾವು ಮಾತ್ರ ಬ್ರಾಹ್ಮಣ ನಾಯಕತ್ವವನ್ನು ಹೇರುವ ಗುಪ್ತ ಹುನ್ನಾರದಲ್ಲಿ ಮುಳುಗಿದ್ದಾರೆ. ಇದನ್ನೆ ಕುಮಾರಸ್ವಾಮಿ ಬಹಿರಂಗಪಡಿಸಿ ಒಂದು ಗಂಭೀರ ಚರ್ಚೆಗೆ ನಾಂದಿ ಹಾಡಿದ್ದಾರೆ.
ಈಗಾಗಲೆ ಬ್ರಾಹ್ಮಣ ಸಮಾಜದಿಂದ ಕರ್ನಾಟಕದಲ್ಲಿ ಇಬ್ಬರು ಮುಖ್ಯಮಂತ್ರಿಗಳು ಮತ್ತು ಅನೇಕ ಜನ ಮಂತ್ರಿಗಳು ಪ್ರತ್ಯಕ್ಷವಾಗಿ ಅಧಿಕಾರ ಅನುಭವಿಸಿದ್ದಾರೆ. ಬ್ರಾಹ್ಮಣರ ಜನಸಂಖ್ಯೆಗೆ ಮೀರಿದ ಅನುಪಾತದಲ್ಲಿ ಆ ಸಮುದಾಯಕ್ಕೆ ಅಧಿಕಾರ ಪ್ರಾಪ್ತವಾಗಿದ್ದಲ್ಲದೆ ಎಸ್ ಎಂ ಕೃಷ್ಣ ˌ ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರಕಾರದ ಆಡಳಿತವನ್ನು ಬ್ರಾಹ್ಮಣರೆ ಪರೋಕ್ಷವಾಗಿ ನಡೆಸಿದ್ದಾರೆ. ಬ್ರಾಹ್ಮಣರ ಆಡಳಿತದಲ್ಲಿ ನಾಡಿಗೆ ಒಳಿತಿಗಿಂತ ಕೆಡುಕಾಗಿದ್ದೆ ಹೆಚ್ಚು. ಇಂದಿರಾ ಭಂಟ ಮತ್ತು ಸಂಘಕ್ಕೆ ಹತ್ತಿರವಾಗಿದ್ದ ಸಂಜಯ ಗಾಂಧಿಯ ಚೇಲಾˌ ಮಡಿಕೇರಿಯ ಮಾಜಿ ಬಸ್ ಕಂಡಕ್ಟರ್ ಆರ್ ಗುಂಡೂರಾವ್ ಕರ್ನಾಟಕದ ಮೊದಲ ಬ್ರಾಹ್ಮಣ ಮುಖ್ಯಮಂತ್ರಿ. ಈತನ ಆಡಳಿತ ಕರ್ನಾಟಕದಲ್ಲಿ ಮಾಡಿದ ದುರಾಡಳಿತ ಮತ್ತು ಅರಾಜಕತೆ ಇತಿಹಾಸದಲ್ಲಿ ದಾಖಲಾಗಿದೆ. ಆರ್ ಗುಂಡೂರಾವ್ ಆಡಳಿತ ಕಾಲದಲ್ಲಿ ನಾಡಿನ ಮಾತೃಭಾಷೆಯಾಗಿರುವ ಕನ್ನಡಕ್ಕೆ ಬಹುದೊಡ್ಡ ಕುತ್ತು ಬಂದೊದಗಿತು. ಕನ್ನಡ ಭಾಷಾ ಕಲಿಕೆಯನ್ನು ಕಡ್ಡಾಯಗೊಳಿಸದೆ ಅದೊಂದು ಆಯ್ಕೆಯಾಗಿಸಿ, ಮೊದಲ ಭಾಷೆಯಾಗಿ ಸಂಸ್ಕೃತ, ಎರಡನೇ ಭಾಷೆಯಾಗಿ ಇಂಗ್ಲೀಷ್, ಮೂರನೇ ಅಥವಾ ನಾಲ್ಕನೇ ಭಾಷೆಯಾಗಿ ಕನ್ನಡವನ್ನು ಶಾಲಾ ಕಲಿಕೆಯಲ್ಲಿ ಅಳವಡಿಸುವ ನಿರ್ಧಾರ ಕೈಗೊಂಡಿದ್ದರು. ಗುಂಡುರಾವ್ ಅವರ ಕನ್ನಡ ವಿರೋಧಿ ಮತ್ತು ಸಂಸ್ಕೃತ ಪ್ರೇಮದ ವಿರುದ್ಧ ಕನ್ನಡಿಗರು ತಿರುಗಿ ಬಿದ್ದು ಗೋಕಾಕ್ ಚಳುವಳಿ ಆರಂಭಿಸಿದರು. ೧೯೮೦ ರಲ್ಲಿ ತೀವ್ರಗೊಂಡ ಗೋಕಾಕ್ ಚಳುವಳಿಗೆ ಹೆದರಿ ಗುಂಡುರಾವ್ ಆ ನಿರ್ಧಾರದಿಂದ ಹಿಂದೆ ಸರಿದರು.
ಇದಷ್ಟೆ ಅಲ್ಲದೆ ನಾಡಿನ ಅನ್ನದಾತ ರೈತರ ಮೇಲೆ ಗೋಲಿಬಾರ್ ಮಾಡಿಸಿದ ಮೊದಲ ಮುಖ್ಯಮಂತ್ರಿ ಆರ್ ಗುಂಡೂರಾವ್. ಆತ ತನ್ನನ್ನು ತಾನು ಒಬ್ಬ “ಕೋಳಿ ತಿನ್ನುವ ಬ್ರಾಹ್ಮಣ” ಎಂದು ಸಾರ್ವಜನಿಕವಾಗಿ ಹೇಳಿಕೊಂಡಿದ್ದನ್ನು ನಾವು ನೋಡಿದ್ದೇವೆ. ಈಗ ಅದೇ ಗುಂಡುರಾಯರ ಮಗ ದಿನೇಶ ಕೂಡ ಬ್ರಾಹ್ಮಣರ ಹಿತಾಸಕ್ತಿಯ ಮಾತನಾಡುತ್ತಾರೆ. ತಾನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷನಾಗಿದ್ದು ೨೦೧೯ ರ ಸಂಸತ್ ಚುನಾವಣೆಯಲ್ಲಿ ಧಾರವಾಡ ಸಂಸತ್ ಕ್ಷೇತ್ರದಿಂದ ಪ್ರಬಲ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿನಯ್ ಕುಲಕರ್ಣಿಯವರನ್ನು ಕಣಕ್ಕಿಳಿಸದೆ ವಿಳಂಬ ನೀತಿ ಅನುಸರಿಸಿದ್ದು ಮತ್ತು ಬಹಿರಂಗವಾಗಿ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಒಬ್ಬ ಸಮರ್ಥ ಕೆಲಸಗಾರನೆಂದು ಕೊಂಡಾಡಿದ್ದು ನಾವು ನೋಡಿದ್ದೇವೆ. ದಿನೇಶ ಅವಕಾಶ ಸಿಕ್ಕಾಗಲೆಲ್ಲ ಬ್ರಾಹ್ಮಣ ಸಮುದಾಯದ ರಕ್ಷಣೆಗೆ ದಾವಿಸುತ್ತಾರೆ ಮತ್ತು ಬಿಜೆಪಿಯ ಬ್ರಾಹ್ಮಣ ನಾಯಕರನ್ನು ಸಮರ್ಥಿಸುತ್ತಾರೆ. ಬ್ರಾಹ್ಮಣ ಅರ್ಚಕರಿರುವ ದೇವಾಲಯಗಳನ್ನು ಯಾವುದೇ ಕಾರಣಕ್ಕೂ ಸರಕಾರದ ಹಿಡಿತದಿಂದ ಬಿಡಿಸುವುದಿಲ್ಲ ಎಂದು ದಿನೇಶ್ ಪಟ್ಟುಹಿಡಿದು ಕುಳಿತಿದ್ದಾರೆ. ಇದರಲ್ಲಿ ಬ್ರಾಹ್ಮಣರ ಹಿತಾಸಕ್ತಿಯಲ್ಲದೆ ಮತ್ತೇನಿರಲು ಸಾಧ್ಯವಿದೆ? ಈಗ ಕುಮಾರಸ್ವಾಮಿಯವರ ಹೇಳಿಕೆಯನ್ನು ಬಿಜೆಪಿಯವರಿಗಿಂತ ಉಗ್ರವಾಗಿ ಖಂಡಿಸಿರುವ ದಿನೇಶ್ ” ಬ್ರಾಹ್ಮಣರ ಶಾಪ ಸುಮ್ಮನೆ ಬಿಡುವುದಿಲ್ಲಾ” ಎಂದಿದ್ದಾರೆ. ಈ ಶಾಪˌ ವರ ಮುಂತಾದ ಮೌಢ್ಯಗಳಿಂದ ಶತಶತಮಾನಗಳಿಂದ ಶೂದ್ರರನ್ನು ಪುರೋಹಿತಶಾಹಿಗಳು ಶೋಷಣೆ ಮಾಡಿದ್ದು ನಾವಿನ್ನು ಮರೆತಿಲ್ಲ.
ಇನ್ನು ಕರ್ನಾಟಕದ ಎರಡನೇ ಬ್ರಾಹ್ಮಣ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಆಡಳಿತವಂತೂ ಇನ್ನೂ ಅನಾಹುತಕಾರಿಯಾಗಿತ್ತು. ೧೯೪೭ ರಿಂದ ೧೯೬೫ ರವರೆಗೆ ಕರ್ನಾಟಕದಲ್ಲಿ ಸಂಪೂರ್ಣ “ಪಾನ ನಿಷೇಧ” ಜಾರಿಯಲ್ಲಿತ್ತು. ೧೯೬೫ ರಲ್ಲಿ ನಿಜಲಿಂಗಪ್ಪ ಸರಕಾರದಲ್ಲಿ ಅಬಕಾರಿ ಮಂತ್ರಿಯಾದ ರಾಮಕೃಷ್ಣ ಹೆಗಡೆ ಪಾನ ನಿಷೇಧವನ್ನು ರದ್ದುಗೊಳಿಸಿ ಸರ್ಕಾರವೇ ಆಧಿಕೃತವಾಗಿ ಮದ್ಯ ಮಾರಾಟ ಮಾಡುವ ವ್ಯವಸ್ಥೆ ಜಾರಿಗೆ ತಂದರು. ಅದರ ಪರಿಣಾಮವಾಗಿ ಇಂದು ರಾಜ್ಯದ ಶೇಕಡ ೮೦% ರಷ್ಟು ಯುವಕರು ಕುಡಿತಕ್ಕೆ ದಾಸರಾಗಿದ್ದಾರೆ. ಬ್ರಾಹ್ಮಣರು ಉತ್ತಮ ಸಂಸ್ಕಾರವನ್ನು ಪೋಷಿಸುತ್ತಾರೆ ಎಂಬ ಪುಂಖಾನುಪುಂಖ ಭಾಷಣಗಳ ನಡುವೆ ರಾಮಕೃಷ್ಣ ಹೆಗಡೆಯವರು ಕುಡಿತವನ್ನು ಅಧಿಕೃತಗೊಳಿಸಿ ನಾಡಿನ ಜನರಿಗೆ ಯಾವ ಬಗೆಯ ಸಂಸ್ಕಾರ ನೀಡಿದರೆನ್ನುವುದು ಯೋಚಿಸಬೇಕಾದ ಸಂಗತಿಯಾಗಿದೆ. ಲಿಂಗಾಯತ-ಒಕ್ಕಲಿಗರ ನಡುವಿನ ರಾಜಕೀಯ ಭಿನ್ನಾಭಿಪ್ರಾಯವನ್ನು ಆಳಗೊಳಿಸುತ್ತ ಎರಡೂ ಸಮುದಾಯಗಳ ನಾಯಕನೆನ್ನುವಂತೆ ಕುಲಬಾಂಧವ ಮಾಧ್ಯಮಗಳಿಂದ ಬಿಂಬಿಸಿಕೊಂಡ ಹೆಗಡೆ ಅಕ್ಷರಶಃ ಅನಾಹುತಕಾರಿ ಆಡಳಿತ ನೀಡಿದರು.
ಹೆಗಡೆ ಆಡಳಿತ ಸ್ಮರಣೀಯವಾಗುವುದೇ ಅವರ ಸಂಪುಟದಲ್ಲಿದ್ದ ಕ್ರಾಂತಿರಂಗ ಮೂಲದ ನಜೀರ್ ಸಾಬ್ˌ ಸಿ. ಭೈರೇಗೌಡˌ ಏಕಾಂತಯ್ಯ ˌ ಮುಂತಾದ ಪ್ರಗತಿಶೀಲ ಮಂತ್ರಿಗಳಿಂದಲೆ ಹೊರತು ಖುದ್ದು ಹೆಗಡೆಯಿಂದಲ್ಲ. ಅಂತಹ ಹೆಗಡೆ ತಮ್ಮ ಕುಲಬಾಂಧವ ಮಾಧ್ಯಮಗಳಿಂದ ರಾಷ್ಟ್ರನಾಯಕನೆಂತಲೂˌ ಇಂದಿರಾ ಗಾಂಧಿಗೆ ಪರ್ಯಾಯ ನಾಯಕನೆಂತಲೂ ಬಿಂಬಿಸಿಕೊಳ್ಳುವಲ್ಲಿ ಸಫಲರಾದರು. ಆದರೆ ಬಾಟ್ಲಿಂಗ್ˌ ರೇವಜೀತುˌ ಟೆಲಿಫೋನ್ ಕದ್ದಾಲಿಕೆˌ ಮುಂತಾದ ಕರ್ಮಕಾಂಡಗಳಿಂದ ಅಧಿಕಾರ ಕಳೆದುಕೊಳ್ಳಬೇಕಾಯಿತು. ತಮ್ಮ ಆಡಳಿತಾವಧಿಯಲ್ಲಿ ಬಿಜೆಪಿ ಮತ್ತು ಸಂಘ ಈ ನೆಲದಲ್ಲಿ ಆಳವಾಗಿ ಬೇರೂರಲು ಹೆಗಡೆ ಮಾಡಿದ ಸಹಾಯ ಬಹಳಷ್ಟು ಜನರಿಗೆ ಗೊತ್ತಿಲ್ಲ. ಇಂದು ಕನ್ನಡದ ಎಲ್ಲಾ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಹೆಗಡೆ ಕುಲಬಾಂಧವರಾದ ಹವ್ಯಕರ ನಿಯಂತ್ರಣದಲ್ಲಿರಲು ಹೆಗಡೆ ಕೊಡುಗೆ ಅಪಾರವಾದದ್ದು. ಕೊನೆಗಾಲದಲ್ಲಿ ಹೆಗಡೆ ವಾಜಪೇಯಿ ಸಂಪುಟ ಸೇರಿ ಬಿಜೆಪಿಯೊಂದಿಗೆ ತಮಗಿರುವ ನಂಟನ್ನು ಬಟಾಬಯಲುಗೊಳಿಸಿಕೊಂಡದ್ದು ಈಗ ಇತಿಹಾಸ.
ಇನ್ನೂ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಶಿಕ್ಷಣ ಖಾತೆ ಬ್ರಾಹ್ಮಣ ಶಾಸಕರಿಗೆ ಮೀಸಲಿಡುವುದು ಗುಪ್ತ ಸಂಗತಿಯೇನಲ್ಲ. ಕುಲಬಾಂಧವ ಮಾಧ್ಯಮಗಳಿಂದ ಸಜ್ಜನ ರಾಜಕಾರಣಿ ಎಂಬ ಬಿರುದಾಂಕಿತ ಪುಢಾರಿ ಸುರೇಶಕುಮಾರ ಕರ್ನಾಟಕದ ರಾಜಕಾರಣಿಗಳಲ್ಲಿಯೆ ಅತ್ಯಂತ ನಾಟಕೀಯ ವ್ಯಕ್ತಿ. ಸುರೇಶ್ ಒಬ್ಬ ಅಸಮರ್ಥ ಸಚಿವ ಎನ್ನುವುದು ಆಗಾಗ ಸಾಬೀತಾಗಿದೆ. ನಗರಾಭಿವೃದ್ಧಿ ಸಚಿವನಾಗಿ ಸುರೇಶ್ ಬೆಂಗಳೂರು ನಗರವನ್ನು ನರಕ ಮಾಡಿದ್ದು ನಾವು ಮರೆತಿಲ್ಲ. ನಗರದ ರಸ್ತೆಗಳಲ್ಲಿ ಆಳವಾದ ಗುಂಡಿಗಳು, ಮತ್ತು ಮಳೆ ಬಂದರೆ ಬೆಂಗಳೂರು ಅಕ್ಷರಶಃ ಕೆರೆಯಂತಾಗುತ್ತಿದ್ದದ್ದು ಸುರೇಶಕುಮಾರರ ಅದಕ್ಷತೆಯಿಂದ. ಬಿಬಿಎಂಪಿ ಮತ್ತು ಮತ್ತು ಒಳಚರಂಡಿ ಹಾಗು ನೀರು ಸರಬುರಾಜು ಮಂಡಳಿಗಳು ಲಂಚಾವತಾರದ ಕೂಪಗಳಾಗಿದ್ದು ಕೂಡ ಸುರೇಶ್ ಆಡಳಿತದಲ್ಲೆ. ಈ ಸುರೇಶಕುಮಾರ್ ಮತ್ತು ವಿಶ್ವೇಶ್ವರ ಹೆಗಡೆˌ ಕಾಗೇರಿ ಇವರಿಬ್ಬರು ಶಿಕ್ಷಣ ಸಚಿವರಾಗಿದ್ದ ಕಾಲದಲ್ಲಿ ಸರ್ಕಾರಿ ಶಾಲೆಗಳನ್ನು ಉದ್ದೇಶಪೂರ್ವಕವಾಗಿಯೆ ಕಡೆಗಣಿಸಿ ಮುಚ್ಚುವಂತೆ ಮಾಡಿದ್ದು ಮತ್ತು ದುಬಾರಿ ಶುಲ್ಕದ ಖಾಸಗಿ ಶಾಲೆಗಳ ಮಾಫಿಯಾ ರಾಜ್ಯದಲ್ಲಿ ತಲೆ ಎತ್ತಿದ್ದನ್ನು ನಾವು ಸ್ಮರಿಸಬಹುದಾಗಿದೆ. ಕೊರೋನಾ ಸಾಂಕ್ರಮಿಕ ಅವಧಿಯಲ್ಲಿ ಸುರೇಶಕುಮಾರ್ ಚಾಮರಾಜನಗರದ ಉಸ್ತುವಾರಿ ಮಂತ್ರಿಯಾಗಿ ಆಮ್ಲಜನಕ ಕೊರತೆಯಿಂದ ೩೬ ರೋಗಿಗಳ ಸಾವಿಗೆ ಕಾರಣನಾಗಿದ್ದು ನಾವು ಬಲ್ಲೆವು.
ಸುರೇಶಕುಮಾರ ಶಿಕ್ಷಣ ಸಚಿವನಾಗಿದ್ದಾಗ ಭಾರತದಲ್ಲಿ ಬ್ರಾಹ್ಮಣರ ದಬ್ಬಾಳಿಕೆಯ ವಿರುದ್ಧ ಅನೇಕ ಧರ್ಮಗಳು ಉದಯವಾದವು ಎನ್ನುವ ಮಾಹಿತಿಯನ್ನು ಶಾಲಾ ಪಠ್ಯದಿಂದ ಕೈಬಿಟ್ಟದ್ದ. ಇಂದು ಶಿಕ್ಷಣ ಸಚಿವನಾಗಿರುವ ಬಿ. ಸಿ. ನಾಗೇಶ್ ಕೂಡ ಪಠ್ಯಪುಸ್ತಕ ತಿರುಚುವಿಕೆಗೆ ಸುರೇಶ್ ಹಾಕಿದ ಬುನಾದಿಯ ಮೇಲೆ ಬ್ರಾಹ್ಮಣ್ಯದ ಗೋಡೆಗಳನ್ನು ಕಟ್ಟಿದಾತ. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಯಾವುದೇ ಅರ್ಹತೆ ಇಲ್ಲದ ತನ್ನ ಕುಲಬಾಂಧವನೊಬ್ಬನನ್ನು ನೇಮಿಸಿ ಇಡೀ ಶಾಲಾ ಪಠ್ಯವನ್ನೆ ಬ್ರಾಹ್ಮಣಮಯಗೊಳಿಸಿದ ಸಂಗತಿ ನಾವು ಬಲ್ಲೆವು. ಈ ಕುರಿತು ರಾಜ್ಯದಲ್ಲಿ ಬುಗಿಲೆದ್ದ ವಿರೋಧವನ್ನು ಲೆಕ್ಕಿಸದೆ ತನ್ನ ಬಂಡತನವನ್ನು ತೋರಿದಾತ ಈ ನಾಗೇಶ್. ಶಾಲಾ ಮಕ್ಕಳಿಗೆ ಸರಿಯಾಗಿ ಸಮವಸ್ತ್ರ, ಬೂಟುಗಳನ್ನು ನೀಡದ ಈತ “ಮಕ್ಕಳು ಸಮವಸ್ತ್ರ, ಶೂಗಾಗಿ ಶಾಲೆಗೆ ಬರುವುದಿಲ್ಲಾ” ಎಂಬ ಉದ್ಧಟತನದ ಹೇಳಿಕೆ ನೀಡಿದ. ಸರ್ಕಾರಿ ಶಾಲೆಯ ಮಗು ಪ್ರತಿ ತಿಂಗಳು ತಲಾ ೧೦೦ ರೂಪಾಯಿ ನೀಡಬೇಕು ಎಂಬ ಆಜ್ಞೆ ಹೊರಡಿಸಿ ಸಾರ್ವಜನಿಕರಿಂದ ಛೀˌ ಥೂಕ್ಕೊಳಗಾಗಿದ್ದು ನಾವು ಸ್ಮರಿಸಬಹುದಾಗಿದೆ. ಶಿಕ್ಷಣ ಇಲಾಖೆಯಲ್ಲಿ ಮಂತ್ರಿ ನಾಗೇಶ್ ತೆಗೆದುಕೊಂಡು ಪ್ರತಿಯೊಂದು ಐಲು ನಿರ್ಧಾರಗಳ ಹಿಂದೆ ಬಿಜೆಪಿಯನ್ನು ನಿಯಂತ್ರಿಸುವ ಅಸಂವಿಧಾನಿಕ ಶಕ್ತಿಗಳು ಇದ್ದವು ಎನ್ನುವುದು ಗುಟ್ಟಿನ ಸಂಗತಿಯೇನಲ್ಲ.
ರಾಜ್ಯದ ಬ್ರಾಹ್ಮಣರೆಲ್ಲಾ ಸೇರಿ ಗುರುರಾಘವೇಂದ್ರ ಬ್ಯಾಂಕ್ ಮುಳುಗಿಸಿದರು. ಅಂದಾಜು ಎರಡು ಸಾವಿರ ಕೋಟಿಗಿಂತಲೂ ಅಧಿಕ ಮೊತ್ತದ ಆರ್ಥಿಕ ಹಗರಣವದು. ಆದರೆ ಅದರ ಸರಿಯಾದ ವಿಚಾರಣೆ ನಡೆದು ತಪ್ಪಿತಸ್ಥರ ಬಂಧನವಾಗಲಿಲ್ಲ. ಆರ್ಥಿಕ ಮಂತ್ರಿಯಾಗಿರುವ ನಿರ್ಮಲಾ ಸೀತಾರಾಮನ್ ಎನ್ನುವ ಬ್ರಾಹ್ಮಣ ಹೆಣ್ಣುಮಗಳು ಬ್ಯಾಂಕಿನಲ್ಲಿ ಗುಳುಂ ಆಗಿರುವ ಹಣವನ್ನು ಸರಕಾರದ ಖಜಾನೆಯಿಂದ ಭರಿಸುವ ಭರವಸೆ ನೀಡಿದರು. ಈ ನಡುವೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಡಲು ಪ್ರಯತ್ನಿಸಿ ಬಂಧನಕ್ಕೊಳಗಾದ ರಾವ್ ಎಂಬಾತನನ್ನು ಮಾನಸಿಕ ಅಸ್ವಸ್ಥನನ್ನಾಗಿ ಬಿಂಬಿಸಲಾಯಿತು. ದೇಶದಲ್ಲೆ ಅತ್ಯಂತ ಭಯಂಕರ ಬಿಟ್ಸ್ ಕಾಯ್ನ್ ಹಗರಣದ ರೂವಾರಿ ಕೃಷ್ಣ ಭಟ್ಟನನ್ನು ನಾಜೂಕಾಗಿ ಕಾನೂನು ಬಾಹುಗಳಿಂದ ಹೊರಗಿಡಲಾಯಿತು. ಹೀಗೆ ಬ್ರಾಹ್ಮಣರು ರಾಜ್ಯದಲ್ಲಿ ಅಧಿಕಾರ ಮಾಡಿದಾಗಲೆಲ್ಲ ಅರಾಜಕತೆ ನಡೆದದ್ದು ನಾವು ದಾಖಲೆಗಳ ಸಮೇತ ವಿವರಿಸಬಹುದಾಗಿದೆ.
ಅದಾಗ್ಯೂ ಬಿಜೆಪಿಯನ್ನು ನಿಯಂತ್ರಿಸುವ ಅಸಂವಿಧಾನಿಕ ಧರ್ಮಾಂಧ ಶಕ್ತಿಗಳು ಮಾತ್ರ ಮುಂದಿನ ಚುನಾವಣೆಯ ನಂತರ ಕರ್ನಾಟಕದ ಗದ್ದುಗೆಯ ಮೇಲೆ ಬ್ರಾಹ್ಮಣನೊಬ್ಬನನ್ನು ಪ್ರತಿಷ್ಟಾಪಿಸುವ ಹುನ್ನಾರ ಮಾಡುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ. ಕುಮಾರಸ್ವಾಮಿ ಎತ್ತಿರುವ ವಿಷಯವು ಶೂದ್ರ ಮತದಾರರಲ್ಲಿ ಜಾಗೃತಿ ಮೂಡಿಸುವಲ್ಲಿ ಮಹತ್ತರ ಪಾತ್ರ ವಹಿಸಬೇಕಾದ ಅಗತ್ಯ ಈಗ ಅತ್ಯಂತ ಮಹತ್ವದ್ದಾಗಿದೆ. ಸಂವಿಧಾನವನ್ನು ಎಂದಿಗೂ ಒಪ್ಪಿಕೊಳ್ಳದ ಬ್ರಾಹ್ಮಣರು ರಾಜಕಾರಣಕ್ಕೆ ಬಂದು ಮಾಡುವುದಾದರೂ ಏನಿದೆ? ಗಾಂಧಿಜಿಯವರ ಅಭಿಪ್ರಾಯದಂತೆ ಬ್ರಾಹ್ಮಣರು ವೇದಾಧ್ಯಯನ, ಧ್ಯಾನ, ಪೌರೋಹಿತ್ಯ, ದೇವರ ಪೂಜೆ, ಧರ್ಮ ಬೋಧನೆ ಇವುಗಳನ್ನೆ ಪ್ರಧಾನ ವೃತ್ತಿಯನ್ನಾಗಿಸಿಕೊಂಡು ಸಂವಿಧಾನದ ಹುದ್ದೆಗಳನ್ನು ಶೂದ್ರರಿಗೆ ಬಿಟ್ಟುಕೊಡುವ ಅಗತ್ಯವಿದೆ. ಅದರಲ್ಲಿಯೆ ಲೋಕಕಲ್ಯಾಣ ಮತ್ತು ದೇಶದ ಪ್ರಗತಿ ಅಡಗಿದೆ ಎನ್ನುವ ಸಂಗತಿ ಎಲ್ಲರಿಗಿಂತ ಜಾಣರೆಂದು ಕರೆದುಕೊಳ್ಳುವ ಬ್ರಾಹ್ಮಣರಿಗೆ ನೆನಪಿಸುವ ಅಗತ್ಯವಿಲ್ಲ ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಈ ವಿಷಯದಲ್ಲಿ ಸದಾ ಚಿಕ್ಕವರಾಗುವ ಬ್ರಾಹ್ಮಣರು ಒಂದಷ್ಟು ದೊಡ್ಡವರಾಗಲು ಪ್ರಯತ್ನಿಸಬೇಕೆಂದು ದೇಶದ ಜನರು ಬಯಸುತ್ತಿದ್ದಾರೆ.