ಮಹಾ ವಿಕಾಸ್ ಅಘಾಡಿ ಸರ್ಕಾದ ವಿರುದ್ದ ಬಂಡಾಯವೆದ್ದು ಶಿವಸೇನೆ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿರುವ ಸಚಿವ ಏಕನಾಥ್ ಶಿಂಧೆ ತಮ್ಮಗೆ 50 ಶಾಸಕರ ಬೆಂಬಲವಿರುವುದಾಗಿ ಹೇಳಿದ್ದಾರೆ. ಈ ಮಧ್ಯೆ ಮಹಾ ಸಿಎಂ ಉದ್ದವ್ ಠಾಕ್ರೆ & ಟೀಂ ಬಂಡಾಯ ಶಾಸಕರ ಅನರ್ಹ ಮಾಡುವಂತೆ ಡೆಪ್ಯೂಟಿ ಸ್ಪೀಕರ್ಗೆ ಮನವಿ ಸಲ್ಲಿಸಿದೆ.
ಇಲ್ಲಿವೆ ಪ್ರಮುಖ ಅಂಶಗಳು
1) ಬಂಡಾಯಕ್ಕೆ ಮೂಲ ಕಾರಣವಾಗಿರುವ 16 ಶಾಸಕರನ್ನು ಅನರ್ಹಗೊಳಿಸುವಂತೆ ಶಿವಸೇನೆಯ ಪ್ರಮುಖ ನಾಯಕರು ಡೆಪ್ಯುಟಿ ಸ್ಪೀಕರ್ಗೆ ಮನವಿ ಸಲ್ಲಿಸಿದ್ದಾರೆ.
2) ಇದೇ ವೇಳೆ ಪ್ರತಿಕ್ರಿಯಿಸಿರುವ ಸಚಿವ ಏಕನಾಥ್ ಶಿಂಧೆ ತಮ್ಮ ಜೊತೆ 50ಕ್ಕು ಹೆಚ್ಚು ಶಾಸಕರು ಇರುವುದಾಗಿ ಹೇಳಿದ್ದಾರೆ. ಅದರಲ್ಲಿ 40ಕ್ಕು ಹೆಚ್ಚಿನ ಜನರು ಶಿವಸೇನೆಯವರಾಗಿದ್ದು ಇನ್ನುಳಿದವರು ಪಕ್ಷೇತರರು ಎಂದು ಹೇಳಲಾಗಿದೆ.
3) ಇಬ್ಬರು ಪಕ್ಷೇತರ ಶಾಸಕರು ಡೆಪ್ಯೂಟಿ ಸ್ಪೀಕರ್ ನರಹರಿ ಜಿರ್ವಾಲ್ರನ್ನು ತಮ್ಮ ಸ್ಥಾನದಿಂದ ಪದಚ್ಯುತಿಗೊಳಿಸುವಂತೆ ಮನವಿ ಮಾಡಿದ್ದಾರೆ. ಮಹೇಶ್ ಬಾಲ್ಡಿ ಹಾಗು ವಿನೋದ್ ಅಗರ್ವಾಲ್ ಬಂಡಾಯ ಶಾಸಕರನ್ನು ಅನರ್ಹಗೊಳಿಸದಂತೆ ಮನವಿ ಅಮಡಿದ್ದಾರೆ.
4) ಇದೇ ವೇಳೆ ಶಿವಸೇನೆಯೆ ಅಜಯ್ ಚೌಧರಿಯನ್ನು ಶಾಸಕಾಂಗ ಪಕ್ಷದ ನಾಯಕನಾಗಿ ನೇಮಿಸಿ ಡೆಪ್ಯೂಟಿ ಸ್ಪೀಕರ್ ಆದೇಶ ಹೊರಡಿಸಿದ್ದಾರೆ ಹಾಗು ಶಿವಸೇನೆ ಹೆಸರಿಸಿರುವ 16 ಬಂಡಾಯ ಶಾಸಕರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
5) ಇದೇ ವೇಳೆ ಶಿವಸೇನೆಯ 16 ಶಾಸಕರು ತಮ್ಮಗೆ ನೋಟಿಸ್ ದೊರೆಯುತ್ತಿದ್ದಂತೆ ಸುಪ್ರೀಂ ಕೋರ್ಟ್ಗೆ ಹೋಗಲು ಸಿದ್ದತೆ ನಡೆಸಿರುವುದಾಗಿ ತಿಳಿದು ಬಂದಿದೆ. ಇದೇ ವೇಳ ಏಕನಾಥ್ ಶಿಂಧೆ ಶಿವಸೇನೆಯ ಅಧಿಕೃತ ಚಿಹ್ನೆ ತಮ್ಮಗೆ ನೀಡುವಂತೆ ಚುನಾವಣ ಆಯೋಗಕ್ಕೆ ಮನವಿ ಸಲ್ಲಿಸಲು ಸಿದ್ದರಾಗಿದ್ದಾರೆ ಎಂದು ತಿಳಿದು ಬಂದಿದೆ.
6) ಇದೇ ವೇಳೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ಗೆ ಕೇಂದ್ರ ಸಚಿವರೊಬ್ಬರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಶಿವಸೇನೆಯ ವಕ್ತಾರ ಸಂಜಯ್ ರಾವುತ್ ಆರೋಪಿಸಿದ್ದಾರೆ.
7) ಇದೇ ವೇಳೆ ಬಂಡಾಯ ಶಾಸಕರ ಶಕ್ತಿ ಪ್ರದರ್ಶನಕ್ಕೆ ಆಹ್ವಾನ ನೀಡಿರುವ ರಾವುತ್ ಬೆಂಬಲ ಬರಿ ಕಾಗದದ ಮೇಲಿದೆ. ಶಿವಸೇನೆ ಒಂದು ದೊಡ್ಡ ಸಾಗರ ಇಂತಹ ಸಣ್ಣ ಸಣ್ಣ ಅಲೆಗಳು ಆಗಾಗ ಬಂದು ಹೋಗುತ್ತದೆ ಎಂದಿದ್ದಾರೆ.
8) ಶಿವಸೇನೆ ಬಂಡಾಯ ಶಾಸಕರ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ ಮರುಕ್ಷಣವೇ ರಾಜ್ಯಪಾಲರು ಹಾಗು ಡೆಪ್ಯೂಟಿ ಸ್ದೀಕರ್ಗೆ ಪತ್ರ ಬರೆದಿರುವ 37 ರೆಬೆಲ್ ಶಾಸಕರು ಏಕನಾಥ್ ಶಿಂಧೆರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ನೇಮಿಸುವಂತೆ ಕೋರಿದ್ದಾರೆ.
9) ಇತ್ತ ಏಕನಾಥ್ ಶಿಂಧೆ ಬಣದಲ್ಲಿ ಶಾಸಕರ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ ತಾನು ಮಹಾ ವಿಕಾಸ್ ಅಘಾಡಿ ಮೈತ್ರಿ ತೊರೆಯುವುದಾಗಿ ಶಿವಸೇನೆ ಘೋಷಿಸಿದೆ ಮತ್ತು 24 ಘಂಟೆಯೊಳಗೆ ವಾಪಸ್ ಬರುವಂತೆ ತನ್ನ ಶಾಸಕರಿಗೆ ಸೂಚಿಸಿದೆ.
10) ಕಳೆದ ಎರಡು ವರ್ಷಗಳಿಂದ ಶಿವಸೇನೆಯ ಶಾಸಕರು ಹಾಗು ನಾಯಕರುಗಳು ಈ ಮೈತ್ರಿಯಿಂದಾಗಿ ಸಾಕಷ್ಟು ಅನುಭವಿಸಿದ್ದಾರೆ. ಮೈತ್ರಿಯಿಂದಾಗಿ ಕಾಂಗ್ರೆಸ್ ಹಾಗು ಎನ್ಸಿಪಿ ಶಾಸಕರು ದಿನದಿಂದ ದಿನಕ್ಕೆ ಬಲಿಷ್ಠವಾಗಿ ಬೆಳೆಯುತ್ತಿದ್ದರು ಎಂದು ಏಕನಾಥ್ ಶಿಂಧೆ ಪುನರುಚ್ಚರಿಸಿದ್ದಾರೆ.