ಸಮಯಕ್ಕೆ ಸರಿಯಾಗಿ ಬಸ್ ಬಾರದೇ ವಿದ್ಯಾರ್ಥಿಗಳು ನಡುರಸ್ತೆಯಲ್ಲೇ ಪ್ರತಿಭಟಿಸಿರುವ ಘಟನೆ ಕೊಪಳ ಜಿಲ್ಲೆ, ಕುಷ್ಟಗಿ ತಾಲ್ಲೂಕಿನ ಕೋನಾಪೂರ ಹಾಗು ಪರಮನಹಟ್ಟಿ ಗ್ರಾಮಗಳಲ್ಲಿ ನಡೆದಿದೆ.
ಈ ಎರಡು ಗ್ರಾಮಗಳಿಂದ ಶಾಲೆ ಸರಿಸುಮಾರು 5 ಕಿ.ಮೀ ದೂರವಿದ್ದು ಪ್ರತಿನಿತಯ ವಿದ್ಯಾರ್ಥಿಗಳು ಶಾಲೆಗೆ ನಡೆದುಕೊಂಡು ಹೋಗಿ ಬರುತ್ತಾರೆ. ಮಳೆಗಾಲವಾಗಿರುವ ಕಾರಣ ನಡೆದುಕೊಂಡು ಹೋಗಲು ಸಾಧ್ಯವಾಗದೆ ಪ್ರತಿನಿತ್ಯ ಬಸ್ಸಿನಲ್ಲಿ ಸಂಚರಿಸುತ್ತಿದ್ದಾರೆ.
ಆದರೆ, ಶಾಲೆಯ ಸಮಯಕ್ಕೆ ಬಸ್ ಒದಗಿಸುವಂತೆ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಎಷ್ಟೇ ಆಗ್ರಹಿಸಿದರು ಸಹ ಯಾರೊಬ್ಬರು ಕಿವಿಗೊಡದ ಕಾರಣ ಶುಕ್ರವಾ ವಿದ್ಯಾರ್ಥಿಗಳು ವಿನೂತನವಾಗಿ ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದಾರೆ.
ಈ ವೇಳೆ ಬಾದಮನಾಳ ಕ್ರಾಸ್ಸಿನಲ್ಲಿ ಬಸ್ಸಿಗೆ ನಡು ರಸ್ತೆಯಲ್ಲೇ ಅಡ್ಡಲಾಗಿ ಕುಳಿತ ವಿದ್ಯಾರ್ಥಿಗಳು ತಮ್ಮ ಪಠ್ಯಗಳನ್ನು ಒದುವ ಮೂಲಕ ಪ್ರತಿಭಟನೆಯನ್ನ ನಡೆಸಿದ್ದಾರೆ.
ಈ ವೇಳ ಸ್ಥಳಕ್ಕಾಗಮಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಸ್.ಹನುಮಂತ ಸಾರಿಗೆ ಅಧಿಕಾರಿಗಳ ಜೊತೆ ಮಾತನಾಡಿದ್ದರು ಮತ್ತು ಶನಿವಾರದಿಂದ ಸಾರಿಗೆ ಆರಂಭಿಸುವುದಾಗಿ ಹೇಳಿದ್ದರು ಹಾಗು ವಿದ್ಯಾರ್ಥಿಗಳಿಗೆ ಪ್ರತಿಭಟನೆಯನ್ನ ಕೈ ಬಿಟ್ಟು ಶಾಲೆಗೆ ತೆರಳುವಂತೆ ಮನವಿ ಮಾಡಿದ್ದರು.