ಅಂತು ಇಂತು ಶಿವನಾಂದ ಸ್ಟೀಲ್ ಬ್ರೀಡ್ಜ್ ಗೆ ಮೂಹುರ್ತ ಕೂಡಿ ಬಂತು ಎಂದುಕೊಳ್ಳಲಾಗಿತ್ತು. ಕಳೆದ 5 ವರ್ಷಗಳಿಂದ ನೆನ್ನಗುದ್ದಿಗೆ ಬಿದ್ದಿದ್ದ ಮೇಲ್ಸೇತುವೆಗೆ ಅಗಸ್ಟ್ 15 ಕ್ಕೆ ಸಂಚಾರದ ಭಾಗ್ಯ ಸಿಗಲಿದೆ ಎಂದಿತ್ತು ಬಿಬಿಎಂಪಿ. ಆದರೀಗ ಸ್ಟೀಲ್ ಬ್ರಿಡ್ಜ್ ಮೇಲೆ ಓಡಾಡೋಕೆ ಇನ್ನೂ ಹಲವು ದಿನಗಳು ಕಾಯಬೇಕು ಅಂತಿದೆ ಬಿಬಿಎಂಪಿ.
ಸದ್ಯಕ್ಕಿಲ್ಲ ಬೆಂಗಳೂರು ಮಂದಿಗೆ ಉಕ್ಕಿನ ಸೇತುವೆ ಮೇಲೆ ಓಡಾಡುವ ಭಾಗ್ಯ
ಮರಗಳ ತೆರವು, ಭೂಸ್ವಾಧಿನದ ಕಾರಣ ಶಿವಾನಂದ ಸ್ಟೀಲ್ ಬ್ರಿಡ್ಜ್ ಪ್ರಕರಣ ಹೈ ಕೋರ್ಟ್ ಮೆಟ್ಟಿಲೇರಿತ್ತು. ಅದಾಗಿ ಇತ್ತೀಚೆಗೆ ನ್ಯಾಯಾಲಯ ಕೂಡ ಸಂಚಾರಕ್ಕೆ ಅನುವುಮಾಡಿಕೊಡುವಂತೆ ಹೇಳಿತ್ತು. ಈ ಹಿನ್ನೆಲೆ ಬಿಬಿಎಂಪಿ ಕೂಡ ಕಾಮಾಗರಿ ಐದು ವರ್ಷಗಳ ಬಳಿಕ ಮತ್ತೆ ಕೈಗೆತ್ತಿಕೊಂಡಿತ್ತು. ಆದರೀಗ ಮಳೆಯ ಅಬ್ಬರಕ್ಕೆ ಸ್ಟೀಲ್ ಬ್ರಿಡ್ಜ್ ಉದ್ಘಾಟನೆ ಮತ್ತಷ್ಟು ವಿಳಂಬ ಆಗಿದೆ. ಈ ಹಿಂದೆ ಪಾಲಿಕೆ ಆಗಸ್ಟ್ 15ಕ್ಕೆ ಸ್ಟೀಲ್ ಬ್ರಿಡ್ಜ್ ಓಡಾಟಕ್ಕೆ ಓಪನ್ ಎಂದಿತ್ತು. ಆದರೆ 25 ದಿನಗಳ ಕಾಲ ಬಿಟ್ಟೂ ಬಿಡದೆ ಕಾಡಿದ ಮಳೆಯಿಂದಾಗಿ ಸ್ಟೀಲ್ ಬ್ರಿಡ್ಜ್ ಕಾಮಾಗರಿ ವಿಳಂಬ ಆಗಿದೆ. ಹೀಗಾಗಿ ಆಗಸ್ಟ್ 15ಕ್ಕೆ ರಾಜ್ಯದ ಮೊದಲ ಉಕ್ಕಿನ ಸೇತುವೆ ಲೋಕಾರ್ಪಣೆ ಆಗಲ್ಲ ಅನ್ನೋದು ಸ್ಪಷ್ಟವಾಗಿದೆ.
ಬಿಟ್ಟೂ ಬಿಡದೆ ಕಾಡಿದ ಮಳೆರಾಯ.. ವಿಳಂಬವಾದ ಸೇತುವೆ ಕಾಮಾಗರಿ
ಕಳೆದ 5 ವರ್ಷಗಳಿಂದ ನಗರದ ಶಿವನಾಂದ ಸರ್ಕಲ್ ಬಳಿ ಇರುವ ಸ್ಟೀಲ್ ಬ್ರೀಡ್ಜ್ ಹಲವು ಕಾರಣಗಳಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಮೂರು ಸಿಎಂಗಳು ಬಂದು ಹೋದರೂ, ಬ್ರೀಡ್ಜ್ ಮಾತ್ರ ಓಪನ್ ಅಗಿರಲ್ಲಿಲ್ಲ. ಕೆಲ ಕಾನೂನತ್ಮಕ ತೊಡಕಿನಿಂದ ಕಾಮಗಾರಿ ಕಳೆದ 5 ವರ್ಷಗಳಿಂದ ಅರ್ದಕ್ಕೆ ನಿಂತ್ತಿತ್ತು. ಆದರೆ ನ್ಯಾಯಲಯದ ಅದೇಶದಂತೆ ಬ್ರೀಡ್ಜ್ ಗೆ ವಿವಾದದಿಂದ ಮುಕ್ತಿ ನೀಡೋದಕ್ಕೆ ಬಿಬಿಎಂಪಿ ಮುಂದಾಗಿತ್ತು. ಆದರೆ ವರುಣ ಅದಕ್ಕೂ ಅಡ್ಡಗಾಲಾಕಿದ್ದಾನೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಯೋಜನಾ ವಿಭಾಗದ ಚೀಫ್ ಇಂಜಿನಿಯರ್ ಲೋಕೇಶ್, ಕಳೆದ 25 ದಿನಗಳಿಂದ ನಗರದಲ್ಲಿ ಬಿಟ್ಟೂ ಬಿಡದೆ ಮಳೆಯಾಗುತ್ತಿದೆ. ಹೀಗಾಗಿ ಕಾಮಾಗರಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಈಗ ಎರಡು ದಿನಗಳಿಂದ ಮಳೆ ಕುಗ್ಗಿದೆ. ಹೀಗಾಗಿ ಮತ್ತೆ ಕೆಲಸ ಆರಂಭಿಸಿದ್ದೇವೆ. ಶೀಘ್ರವೇ ಕಾಮಾಗರಿ ಮುಗಿದು ಜನರ ಓಡಾಟಕ್ಕೆ ಸೇತುವೆ ಓಪನ್ ಆಗಲಿದೆ ಎಂದರು.
ಈಗಾಗಲೇ ಉಕ್ಕಿನ ಸೇತುವೆ ಕಾಮಾಗರಿ 90% ಪೂರ್ಣ
ಮೇಲ್ಸೇತುವೆಯ ನಿರ್ಮಾಣ ಕಾರ್ಯ 90% ಪೂರ್ಣಗೊಂಡಿದೆ. ಶೇಷಾದ್ರಿಪುರ ಕಡೆಗೆ ಸಂಪರ್ಕಿಸುವ ಡೌನ್ ರ್ಯಾಂಲ್ ಬಳಿ ಕಾಲುವೆ ಅಭಿವೃದ್ಧಿ ಮತ್ತು ಇಳಿಜಾರು ರಸ್ತೆ ನಿರ್ಮಿಸಿ ಡಾಂಬರೀಕರಣ ಮಾಡುವುದು ಮಾತ್ರ ಬಾಕಿಯಿದೆ. ಕಾಮಗಾರಿ ಪೂರ್ಣಗೊಳಿಸಲು ಅಂದಾಜು ಇನ್ನೂ 15ಕ್ಕೂ ಅಧಿಕ ದಿನಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಒಟ್ಟಾರೆ, ಶಿವಾನಂದ ವೃತ್ತದ ಉಕ್ಕಿನ ಮೇಲ್ಸೇತುವೆ ಅಗಸ್ಟ್ 15 ರಂದು ವಾಹನಗಳ ಸಂಚಾರಕ್ಕೆ ಮುಕ್ತವಾಗುತ್ತೆ ಎಂದುಕೊಳ್ಳಲಾಗಿತ್ತು. ಆದರೆ ಮಳೆರಾಯನ ಕಾಟಕ್ಕೆ ಅದಕ್ಕೂ ಅಡ್ಡಗಾಲು ಬಿದ್ದಿದ್ದೆ.