ಮೈಸೂರು : ಮಾ.೨೫ : ಕೊನೆಗೂ ಅದೃಷ್ಟದ ಕ್ಷೇತ್ರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ ಮಾಡೋದು ಫಿಕ್ಸ್ ಆಗಿದೆ. ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ.
ಒಂದೇ ಕ್ಷೇತ್ರದಿಂದ ಮೊದಲ ಹಂತದಲ್ಲಿ ಟಿಕೆಟ್ ಘೋಷಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ವರಣ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಿದ್ದಾರೆ. ತಿ.ನರಸೀಪುರದಲ್ಲಿ ಮಗನಿಗೆ ಕೊಕ್ ನೀಡಿ ಅಪ್ಪನಿಗೆ ಟಿಕೆಟ್ ಇನ್ನು ಸುನೀಲ್ ಬೋಸ್ ಬದಲಿಗೆ ಮಹದೇವಪ್ಪ ಹೆಸರು ಫೈನಲ್ ಆಗಿದ್ದು, ತ್ರ ಸುನೀಲ್ ಬೋಸ್ ಗೆ ಸ್ಥಾನ ಬಿಟ್ಟುಕೊಡಲು ಮಹದೇವಪ್ಪ ಮುಂದಾಗಿದ್ದರು, ಆದ್ರೆ ಕೊನೆ ಕ್ಷಣದಲ್ಲಿ ತಾವೇ ಸ್ಪರ್ಧೆಗೆ ಮಹದೇವಪ್ಪ ಮುಂದಾಗಿದ್ದಾರೆ. ಸೂರು ಜಿಲ್ಲೆಯಲ್ಲಿ ಹಳೆ ಜೋಡಿ ಮತ್ತೆ ಮೋಡಿ ಮಾಡುತ್ತಾ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಸಿದ್ದರಾಮಯ್ಯ- ಮಹದೇವಪ್ಪ ಸ್ಪರ್ಧೆಯಿಂದ ಕ್ಷೇತ್ರದಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಪ್ಲಾನ್ ಮಾಡಿದ್ದಾರೆ.
ನಂಜನಗೂಡು ಕ್ಷೇತ್ರದಿಂದ ದ್ರುವ ನಾರಾಯಣ್ ಪುತ್ರ ದರ್ಶನ್ ದ್ರುವ ನಾರಾಯಣ್ ಹೆಸರು ಅಂತಿಮಗೊಂಡಿದ್ದು, ಟಿಕೆಟ್ ಘೋಷಣೆ ಮಾಡಿದ್ದಾರೆ. ಎನ್.ಆರ್.ಕ್ಷೇತ್ರದಿಂದ ತನ್ವೀರ್ ಸೇಠ್ ಗೆ ಟಿಕೆಟ್ ಫಿಕ್ಸ್ ಆಗಿದೆ. ತನಗೆ ಟಿಕೆಟ್ ಬೇಡ ಎಂದಿದ್ದ ತನ್ವೀರ್ ಸೇಠ್ ಆದ್ರೆ ಅವರ ಅಭಿಮಾನಿಗಳು ಆತ್ಮಹತ್ಯೆಗೆ ಯತ್ನಿಸಿದ್ದರು.ಕೊನೆಗೂ ತನ್ವೀರ್ ಸೇಠ್ಗೆ ಹೈಕಮಾಂಡ್ ಟಿಕೆಟ್ ಫೈನಲ್ ಮಾಡಿದೆ. ಮೈಸೂರು ಜಿಲ್ಲೆಯ 11 ಕ್ಷೇತ್ರದಲ್ಲಿ 8ರಲ್ಲಿ ಟಿಕೆಟ್ ಫೈನಲ್ ಆಗಿದೆ. ಇನ್ನು ಚಾಮರಾಜ, ಕೃಷ್ಣರಾಜ, ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ಕಗ್ಗಂಟಾಗಿ ಉಳಿದೆ.
ಉಳಿದಂತೆ ಪಿರಿಯಾಪಟ್ಟಣದಿಂದ ಕೆ.ವೆಂಕಟೇಶ್ ಫೈನಲ್ ಆಗಿದ್ರೆ, ಕೃಷ್ಣರಾಜನಗರದಿಂದ ಡಿ.ರವಿಶಂಕರ್ಗೆ ಟಿಕೆಟ್ ಅಂತಿಮವಾಗಿದೆ. ಹುಣಸೂರು ಕ್ಷೇತ್ರದಿಂದ ಹಾಲಿ ಶಾಸಕ ಎಚ್.ಪಿ.ಮಂಜುನಾಥ್ ಟಿಕೆಟ್, ಹೆಗ್ಗಡದೇವನಕೋಟೆಯಿಂದ ಅನಿಲ್ ಗೆ ಟಿಕೆಟ್ ಖಾತ್ರಿಯಾಗಿದೆ..