ಮಹಾರಾಷ್ಟ್ರ ಸರ್ಕಾರ ಪತನ ಅಥವಾ ಜಗಳಕ್ಕೆ ಶಿವಸೇನೆಯ ಒಳಗಿನ ಜಗಳವೇ ಕಾರಣವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ಗದಗನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ, ಮಹಾ ಸರ್ಕಾರ ಪತನಕ್ಕೆ ಶಿವಸೇನೆ ಶಾಸಕರು ಬರೆದಿರುವ ಪತ್ರವೇ ಸಾಕ್ಷಿಯಾಗಿವೆ.
ಅದು ಅಸ್ವಾಭಾವಿಕ ಮೈತ್ರಿ ಅಂತಾ ಅಲ್ಲಿಯ ನಾಯಕರೇ ಹೇಳಿದ್ದಾರೆ. ಒಂದು ಕಾಲಘಟ್ಟದಲ್ಲಿ ಎನ್ ಸಿಪಿ, ಕಾಂಗ್ರೆಸ್ ವಿರುದ್ಧ ಬಾಳಾ ಸಾಹೇಬರು ಹೋರಾಟ ಮಾಡಿದವರು. ಆದರೆ ಇಂದು ಅದೇ ಪಕ್ಷ ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ವಿಪರ್ಯಾಸವಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಎನ್ ಸಿಪಿಯವರೇ ಮುಖ್ಯಮಂತ್ರಿಯನ್ನು ರಿಮೋಟ್ ಕಂಟ್ರೋಲ್ ನಲ್ಲಿ ಇಟ್ಟಿದ್ದರು ಎನ್ನುವ ಆರೋಪ ಇದೆ. ಶಿವ ಸೈನಿಕರು, ಎಮ್ ಎಲ್ ಎ, ಎಂಪಿಗಳು ನಿರಾಶೆಗೊಂಡಿದ್ದಾರೆ.
ಇವರು ಮಾಡಿದ ತಪ್ಪಿಂದ ಇಡೀ ಪಕ್ಷವೇ ಅಸಮಾಧಾನ ಗೊಂಡಿದೆ. ಒಂದಿಬ್ಬರು ಪಕ್ಷ ತೊರೆಯಬಹುದು. ಆದರೆ ಇಲ್ಲಿ ಪಕ್ಷಕ್ಕೆ ಪಕ್ಷವೇ ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಸಚಿವ ಸಿ.ಸಿ. ಪಾಟೀಲ್, ವಿಪ ಸದಸ್ಯ ಎಸ್.ವಿ. ಸಂಕನೂರ್, ದ್ರಾಕ್ಷಾರಸ ನಿಗಮದ ಅಧ್ಯಕ್ಷ ಕಾಂತಿಲಾಲ್ ಬನ್ಸಾಲಿ ಸೇರಿದಂತೆ ಇತರರು ಇದ್ದರು. ಇನ್ನೆರಡು ದಿನ ತಡೆವಾದರೆ ಉದ್ಧವ್ ಠಾಕ್ರೆ, ಅದಿತ್ಯ ಠಾಕ್ರೆ ಬಿಟ್ರೆ ಎಲ್ಲರೂ ಹೋಗುವ ಹಾಗಿದೆ. ಹೊರಗಿನವರು ಷಡ್ಯಂತ್ರ ರೂಪಿಸಿ ಇಡೀ ಪಾರ್ಟಿ ತೆಗೆದುಕೊಂಡು ಹೋಗುವುದಕ್ಕೆ ಆಗಲ್ಲ. ಅವರ ವಿಚಾರ ಧಾರೆ ಯಾವುದು ಎನ್ನುವುದು ಅವರಿಗೆ ಗೊತ್ತಿಲ್ಲ ಎಂದು ಬಿಜೆಪಿ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಪಾರ್ಟಿ ಏನೋ 40 ಸೀಟ್ ಇದೆ. ಅಲ್ಲಿ ಇಲ್ಲಿ ಮೆಯಿಕೊಂಡು ಇದ್ದರು. ಕಾಂಗ್ರೆಸ್ ಅವರನ್ನು ಟಾರ್ಗೆಟ್ ಮಡುವ ಅವಶ್ಯಕತೆ ನಮಗಿಲ್ಲ. ಕಾಂಗ್ರೆಸ್ ಅದಾಗಿಯೆ ಮುಗಿದು ಹೋಗುತ್ತಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್ ಗಾಗಿ ದೇವರಲ್ಲಿ ಪ್ರಾರ್ಥಿಸುತ್ತೇವೆ. ಅವರು ವಿರೋಧ ಪಕ್ಷವಾಗಿ ಅಸ್ಥಿತ್ವ ಉಳಿಸಿಕೊಳ್ಳಲಿ. ಶಾಸಕರನ್ನು ಖರೀದಿ ಮಾಡುವ ಪ್ರಶ್ನೆ ಇಲ್ಲ. ಎನ್ ಸಿಪಿ, ಕಾಂಗ್ರೆಸ್ ಅವರಿಂದ ಶಿವಸೇನೆಗೆ ಸಮಸ್ಯೆಯಾಗಿದೆ ಎಂದು ಆರೋಪಿಸಿದ್ದಾರೆ.
ಶಾಸಕರು ದುಡ್ಡಿನ ಹಿಂದೆ ಹೋಗುತ್ತಾರೆ ಎಂದು ಆರೋಪಿಸುತ್ತಾರೆ. ದುಡ್ಡಿನ ಹಿಂದೆ ಹೋಗುವುದಾದರೆ 50 ಜನಕ್ಕಿಂತ ಹೆಚ್ಚು ಜನರು ದುಡ್ಡಿನಿಂದೆ ಹೋಗುತ್ತಾರಾ?
ಹಿಂದೂ ಮತಕ್ಕಿಂತ ಸಮಾನ ಮನಸ್ಕರರು ಒಂದೆಡೆ ಇದ್ದೇವೆ. ಶಿವಸೇನೆ ಒಂದು ಹೊರಗೆ ಹೋಗಿತ್ತು. 2014ರ ಚುನಾವಣೆಯಲ್ಲೂ ನಾವು ಒಳ್ಳೆ ಸಾಧನೆ ಮಾಡಿದ್ದೇವೆ ಎಂದು ಸಚಿವ ಜೋಷಿ ಹೇಳಿದ್ದಾರೆ.