ಮಂತ್ರಾಲಯ ಮಠ ನಮಗೆ ತವರೂರು ಇದ್ದಂತೆ ಇಂಥಾ ಭಾಗ್ಯ ಎಲ್ಲರಿಗೂ ಸಗುವುದಿಲ್ಲ ಎಂದು ನಟ ಡಾ || ಶಿವರಾಜ್ಕುಮಾರ್ ತಿಳಿಸಿದ್ದಾರೆ.
ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ಬೃಂದಾವನ ದರ್ಶನ ಪಡೆದ ಬಳಿಕ ಮಾತನಾಡಿದ ಶಿವಣ್ಣ ನಾವು ರಾಯಚೂರಿನಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ಇದೇ ಮೊದಲು . ಆದರೆ, ಮಂತ್ರಲಾಯಕ್ಕೆ ಮತ್ತು ಬೇರೆಡೆ ತೆರಳುವ ವೇಳೆ ರಾಯಚೂರಿಗೆ ಬಂದು ಹೋಗಿದ್ದೇನೆ ಎಂದು ಹೇಳಿದ್ದಾರೆ.
ನಿರ್ದೇಶಕ ಎ.ಹರ್ಷ ಮಾತನಾಡಿ ಇದು ನನ್ನ ಹಾಗೂ ಶಿವಣ್ಣ ಕಾಂಬಿನೇಷನ್ನ ಮೂರನೇ ಚಿತ್ರ ವೇದ ಒಂದು ಉತ್ತಮ ಚಿತ್ರವಾಗಿದ್ದು ಕುಟುಂಬದವರು ಕುಳಿತು ವೀಕ್ಷಿಸುವಂತಹ ಸಿನಿಮಾ ಎಲ್ಲರೂ ಚಿತ್ರಮಂದಿರಕ್ಕೆ ಬಂದು ಚಿತ್ರವನ್ನ ವೀಕ್ಷಿಸಿ ಪ್ರೋತ್ಸಾಹಿಸಿ ಎಂದು ಹೇಳಿದ್ದಾರೆ.