ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ತಾಳಗುಪ್ಪೆಯಲ್ಲಿ ಇಂದು ಬೆಳ್ಳಗ್ಗೆ ಮೈಸೂರು-ತಾಳಗುಪ್ಪೆ ನಡುವೆ ಸಂಚರಿಸುವ ರೈಲಿನಲ್ಲಿ ಅಪರಿಚಿತ ಮಹಿಳೆಯೊಬ್ಬರು ನೇಣಿಗೆ ಯತ್ನಿಸಿದ್ದಾರೆ. ಇದನ್ನು ಕಂಡ ರೈಲ್ವೆ ಸಿಬ್ಬಂದಿ ರವಿ ಹಾಗೂ ಜಯಶೀಲಾರವರುಮಹಿಳೆಯನ್ನು ರಕ್ಷಣೆ ಮಾಡಿ ಬುದ್ದಿವಾದ ಹೇಳಿ ತಾಯಿ ಹಾಗೂ ಮಕ್ಕಳನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ.