ಪತ್ರಾಚಾಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈನ ವಿಶೇಷ ನ್ಯಾಯಾಲಯವು ಶಿವಸೇನೆ ನಾಯಕ ಸಂಜಯ್ ರಾವುತ್ರನ್ನು ನಾಲ್ಕು ದಿನ (ಆಗಷ್ಟ್ 4)ವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿದೆ.
ಭೂ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಭಾನುವಾರ ಸಂಜಯ್ ರಾವುತ್ ಮನೆ ಮೇಲೆ ದಾಳಿ ನಡೆಸಿದ್ದರು. ತೀವ್ರ ಶೋಧ ಕಾರ್ಯಚರಣೆ ನಂತರ 11.50 ಲಕ್ಷ ಅಕ್ರಮ ನಗದನ್ನು ವಶಕ್ಕೆ ಪಡೆದಿದ್ದರು.
ಈ ವೇಳೆ ರಾವುತ್ ಪರ ವಕೀಲರು ಸಂಜಯ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಕಾರಣ ಅವರನ್ನು ತಡ ರಾತ್ರಿವರೆಗೂ ವಿಚಾರಣೆಗೆ ಒಳಪಡಿಸಬಾರದು ಹಾಗೂ ಅವರಿಗೆ ಜೈಲಿನ ಊಟದ ಬದಲು ಮನೆಯ ಊಟ ಸೇವನೆಗೆ ಅವಕಾಶ ನೀಡಬೇಕೆಂದು ರಾವುತ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಇದನ್ನು ಪುರಸ್ಕರಿಸಿದ ನ್ಯಾಯಾಲಯ ರಾತ್ರಿ 10ರವರೆಗೂ ವಿಚಾರಣೆ ನಡೆಸುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಳಿಗೆ ಸೂಚಿಸಿದೆ ಹಾಗೂ ಮನೆಯಿಂದ ಊಟದ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟಿದೆ.