Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ವಿಜ್ಞಾನ ಉಪಕರಣಗಳ ಮೇಲೆ GST : ಸಂಶೋಧನೆಯ ಭವಿಷ್ಯದ ಬಗ್ಗೆ ವಿಜ್ಞಾನಿಗಳ ಆತಂಕ!

ಪ್ರತಿಧ್ವನಿ

ಪ್ರತಿಧ್ವನಿ

July 23, 2022
Share on FacebookShare on Twitter

ಹೆಚ್ಚು ಓದಿದ ಸ್ಟೋರಿಗಳು

ಉದ್ಯಮಿ ಗೌತಮ್ ಅದಾನಿಗೆ Z ಶ್ರೇಣಿ ಭದ್ರತೆ

ರಾಜಕೀಯ ಪಕ್ಷಗಳು ನೀಡುವ ಭರವಸೆಗಳನ್ನು ತಡೆಯಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಜಮ್ಮು-ಕಾಶ್ಮೀರ; ಕಾಶ್ಮೀರಿ ಪಂಡಿತರ ಹಂತಕರನ್ನು ಗುರುತಿಸಿದ ಪೊಲೀಸರು

ಸರಕಾರಿ ಅನುದಾನಿತ ಸಂಶೋಧನಾ ಸಂಸ್ಥೆಗಳು ಖರೀದಿಸುವ ವೈಜ್ಞಾನಿಕ ಮತ್ತು ತಾಂತ್ರಿಕ ಉಪಕರಣಗಳಿಗೆ ಶೇ.5 % ಇದ್ದ GSTಯನ್ನು ವಿನಾಯಿತಿ ದರವನ್ನು ಪರಿಷ್ಕರಿಸಿರುವ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಹಲವಾರು ವಿಜ್ಞಾನಿಗಳು ತಮ್ಮ ಸಂಶೋಧನೆಯ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾರೆ.

ಹೌದು, ಕೇಂದ್ರ ಸರ್ಕಾರದ ಈ ನೀತಿಯಿಂದಾಗಿ ವೈಜ್ಞಾನಿಕ ಉಪಕರಣಗಳ ಮೇಲಿನ GST ಜುಲೈ18ರಿಂದ ಶೇ.18ಕ್ಕೆ ಏರಿಕೆಯಾಗಿದೆ, ಅಂದರೆ ನಮ್ಮ ಅನುದಾನವು ಶೇ.13ರಷ್ಟು ಕಡಿಮೆಯಾಗಿದೆ ಎಂದು ಸರಕಾರಿ ಸಂಸ್ಥೆಯೊಂದರ ವಿಜ್ಞಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಈ GST ಏರಿಕೆಯಿಂದಾಗಿ ರಾಸಾಯನಿಕದಂತಹ ಪ್ರಾಥಮಿಕ ಸರಕುಗಳಿಂದ ಹಿಡಿದು ಮೈಕ್ರೋಟೋಮ್ನಂತಹ ಅತ್ಯಾಧುನಿಕ ಯಂತ್ರಗಳವರೆಗೆ ಎಲ್ಲ ವೈಜ್ಞಾನಿಕ ಉಪಕರಣಗಳ ಬೆಲೆಗಳನ್ನು ಹೆಚ್ಚಿಸಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಪರಿಷ್ಕರಿಸಿದ ಈ ನಿರ್ಧಾರವನ್ನು ಹಿಂಪಡೆಯಿರಿ, ಇಲ್ಲದಿದ್ದರೆ ವಿಜ್ಞಾನಕ್ಕೆ ಹೊಡೆತ ಬೀಳುತ್ತದೆ ಎಂದು ಟ್ವೀಟ್ ಮೂಲಕ CSIR ಇನ್ಸ್ಟಿಟ್ಯೂಟ್ ಆಫ್ ಮೈಕ್ರೋಬಿಯಲ್ ಟೆಕ್ನಾಲಜಿಯ ಮುಖ್ಯ ವಿಜ್ಞಾನಿ ಡಾ.ಅಮಿತ ಟುಲಿ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ICMR ಮಾಜಿ ಅಧಿಕಾರಿಯೋರ್ವರು, GST ಇರಲಿ ಅಥವಾ ಇಲ್ಲದಿರಲಿ, ವೈದ್ಯಕೀಯ ಸಂಶೋಧನೆಗೆ ಹೆಚ್ಚು ಹಣದ ಅಗತ್ಯವಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಅನುದಾನಿತ ವೈಜ್ಞಾನಿಕ ಸಂಶೋಧನೆ ಕ್ಷೇತ್ರ ಉತ್ತಮ‌ ಅನುದಾನ ಇಲ್ಲದೆ ಸಂಕಷ್ಟದಲ್ಲಿದೆ. ಕೋವಿಡ್ ನಿಂದ ಆದ ದುರಂತದಿಂದ ನಾವಿನ್ನು ಸಹಜ ಸ್ಥಿತಿಗೆ ಇನ್ನೂ ಮರಳಿಲ್ಲ. ಇದೆಲ್ಲವನ್ನೂ ನೋಡಿಯೂ GST ಹೆಚ್ಚಳ ಮಾಡಿದರೆ ವೈಜ್ಞಾನಿಕ ಸಂಶೋಧನೆ ಕೇಂದ್ರದ ಸಂಕಟಗಳನ್ನು ಇನ್ನಷ್ಟು ಹೆಚ್ಚಲಿದರ ಎಂದು ಅನೇಕ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಇದಲ್ಲದೇ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನಲ್ಲಿ ಸಂಶೋಧಕರಾಗಿರುವ ಅರಿಂದಮ್ ಘೋಷ್ ಕೂಡ, ಸಂಶೋಧನಾ ಉಪಕರಣಗಳ ಮೇಲಿನ ವಿನಾಯಿತಿ ಜಿಎಸ್ಟಿ ದರವನ್ನು ಹಿಂದೆಗೆದುಕೊಂಡಿರುವುದು ಈಗಾಗಲೇ ಅನುದಾನದ ಕೊರತೆಯಿಂದ ಬಳಲುತ್ತಿರುವ ಸಂಶೋಧನಾ ಪರಿಸರ ವ್ಯವಸ್ಥೆಗೆ ತೀವ್ರ ಹೊಡೆತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

GST ಏರಿಕೆಯಿಂದ ಹೆಚ್ಚಿನ ವೆಚ್ಚವನ್ನು ಸರಿದೂಗಿಸಲು ಅನುದಾನಗಳಲ್ಲಿ ಹೆಚ್ಚಳ ಮಾಡಬೇಕು ಎಂದು ದೆಹಲಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇಮ್ಯುನಾಲಜಿಯ ವಿಜ್ಞಾನಿ ಅರ್ನಾಬ್ ಮುಖ್ಯೋಪಾಧ್ಯಾಯ ಆಗ್ರಹಿಸಿದ್ದಾರೆ.

2017 ನವಂಬರ್ ನಲ್ಲಿ ಸರಕಾರವು ಸಾರ್ವಜನಿಕ ಅನುದಾನಿತ ಸಂಶೋಧನಾ ಸಂಸ್ಥೆಗಳು ಮತ್ತು ಪ್ರಯೋಗಶಾಲೆಗಳಲ್ಲಿಯ ವೈಜ್ಞಾನಿಕ ಮತ್ತು ತಾಂತ್ರಿಕ ಉಪಕರಣಗಳಿಗೆ ಶೇ.5ರ ವಿನಾಯಿತಿ GST ದರವನ್ನು ಪ್ರಕಟಿಸಿತ್ತು.

RS 500
RS 1500

SCAN HERE

[elfsight_youtube_gallery id="4"]

don't miss it !

ಸರಕಾರದ ಜಾಹಿರಾತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ನೆಹರುಗೆ ಕೊಕ್‍!
ಫೀಚರ್ಸ್

ಸರಕಾರದ ಜಾಹಿರಾತಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ನೆಹರುಗೆ ಕೊಕ್‍!

by ಪ್ರತಿಧ್ವನಿ
August 14, 2022
ರಾಜ್ ಕುಮಾರ್ ಮೊಮ್ಮಗಳ ಚಿತ್ರದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ವಿಡಿಯೋ

ರಾಜ್ ಕುಮಾರ್ ಮೊಮ್ಮಗಳ ಚಿತ್ರದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

by ಪ್ರತಿಧ್ವನಿ
August 12, 2022
Uncategorized

Free Essay Checker

by
August 13, 2022
ವೀರ ಸಾರ್ವಕರ್‌ ಫ್ಲೆಕ್ಸ್ ವಿವಾದ: ಶಿವಮೊಗ್ಗದಲ್ಲಿ ನಿಷೇದಾಜ್ಞೆ ಜಾರಿ
ಕರ್ನಾಟಕ

ವೀರ ಸಾರ್ವಕರ್‌ ಫ್ಲೆಕ್ಸ್ ವಿವಾದ: ಶಿವಮೊಗ್ಗದಲ್ಲಿ ನಿಷೇದಾಜ್ಞೆ ಜಾರಿ

by ಪ್ರತಿಧ್ವನಿ
August 15, 2022
ಸ್ವಾತಂತ್ರ್ಯ ದಿನಾಚರಣೆಯ ದಿನದಂದು ನಮ್ಮ ಮೆಟ್ರೋದಲ್ಲಿ 5.74 ಲಕ್ಷ ಜನ ಪ್ರಯಾಣ : BMRCLಗೆ ಕೋಟಿ ಕೋಟಿ ಆದಾಯ!
ಕರ್ನಾಟಕ

ಸ್ವಾತಂತ್ರ್ಯ ದಿನಾಚರಣೆಯ ದಿನದಂದು ನಮ್ಮ ಮೆಟ್ರೋದಲ್ಲಿ 5.74 ಲಕ್ಷ ಜನ ಪ್ರಯಾಣ : BMRCLಗೆ ಕೋಟಿ ಕೋಟಿ ಆದಾಯ!

by ಪ್ರತಿಧ್ವನಿ
August 16, 2022
Next Post
ಉತ್ತರಪ್ರದೇಶ | ಅಪ್ರಾಪ್ತ ದಲಿತ ವಿದ್ಯಾರ್ಥಿನಿಯರನ್ನು ಬೆತ್ತಲುಗೊಳಿಸಿದ ಶಿಕ್ಷಕರು!

ಉತ್ತರಪ್ರದೇಶ | ಅಪ್ರಾಪ್ತ ದಲಿತ ವಿದ್ಯಾರ್ಥಿನಿಯರನ್ನು ಬೆತ್ತಲುಗೊಳಿಸಿದ ಶಿಕ್ಷಕರು!

ಯಡಿಯೂರಪ್ಪ ರಾಜೀನಾಮೆ ಹಗ್ಗಜಗ್ಗಾಟಕ್ಕೆ ಕೊನೆಗೂ ತೆರೆ ಬಿತ್ತೆ?

ಅಕ್ರಮ ಡಿನೋಟಿಷಿಕೇಷನ್ ಪ್ರಕರಣ : ಯಡಿಯೂರಪ್ಪಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂಕೋರ್ಟ್

ಬಿಜೆಪಿಗರು ನಮ್ಮ ಸಂವಿಧಾನವನ್ನೇ ಅಪಾಯಕ್ಕೆ ಸಿಲುಕಿಸಿದ್ದಾರೆ : ಡಿ.ಕೆ. ಶಿವಕುಮಾರ್

ಸಿಎಂ ಆಯ್ಕೆ ವಿಚಾರವಾಗಿ ಜಮೀರ್‌ ಹೇಳಿಕೆಗೆ ತಿರುಗೇಟು ಕೊಟ್ಟ ಡಿಕೆಶಿ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist