2002ರಲ್ಲಿ ಗುಜರಾತ್ನಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರರಿಗೆ ನೀಡಿದ್ದ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ ಹಾಗು ಹಿಂದಿನ ಆದೇಶವನ್ನ ಎತ್ತಿ ಹಿಡಿದಿದೆ.
ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಮಾಜಿ ಸಂಸದರಾದ ದಿ. ಎಹ್ಸಾನ್ ಜಾಫ್ರಿ ಜಾಕಿಯಾ ಜಫ್ರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಎ.ಎಂ.ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಹಾಗು ಸಿ.ಟಿ.ರವಿಕುಮಾರ್ ಇದ್ದ ತ್ರಿಸದಸ್ಯ ಪೀಠವು ವಾದ ಪ್ರತಿವಾದವನ್ನ ಸುಧೀರ್ಘವಾಗಿ ಆಲಿಸಿತ್ತು ಮತ್ತು ಅರ್ಜಿಯನ್ನ ತಿರಸ್ಕರಿಸಿ ವಿಶೇಷ ತನಿಖಾ ತಂಡ (SIT) ವರದಿಯನ್ನು ಉಲ್ಲೇಖಿಸಿ ನೀಡಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ್ದ ತೀರ್ಪನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.
ತನಿಖೆಯಲ್ಲಿ ಕಾನೂನು ಉಲ್ಲಂಘನೆಯಾಗಿರುವ ಬಗ್ಗೆ ನಮ್ಮಗೆ ಎಲ್ಲಿ ಕಾಣಿಸಿಲ್ಲ ಅರ್ಜಿದಾರರ ವಾದವನ್ನ ನಾವು ಪರಿಗಣಿಸಲು ಸಾಧ್ಯವಿಲ್ಲ. ಅಂತಿಮ ವರದಿಯನ್ನು ಅಂಗೀಕರಿಸಿ ಗುಜರಾತ್ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿಯುತ್ತೇವೆ ಎಂದು ನ್ಯಾಮೂರ್ತಿ ಎ.ಎಂ.ಖಾನ್ವಿಲ್ಕರ್ ಅಭಿಪ್ರಾಯಪಟ್ಟಿದ್ದಾರೆ.