ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರನ್ನು ದುಷ್ಕರ್ಮಿಗಳು 60 ಬಾರಿ ಚಾಕುವಿನಿಂದ ಇರಿದಿದ್ದೂ ಅಲ್ಲದೇ ಕತ್ತು ಇರಿದು ಹತ್ಯೆಗೈಯ್ಯಲಾಗಿದೆ.
ಹುಬ್ಬಳ್ಳಿಯ ಉಣಕಲ್ ಬಳಿಯ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ಈ ಕೃತ್ಯ ನಡೆದಿದ್ದು, ಪೊಲೀಸರು ಹುಬ್ಬಳ್ಳಿ-ಧಾರವಾಡದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಭಕ್ತರ ಸೋಗಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಡೆಸಿದ ಮಾರಕ ದಾಳಿಗೆ ಕೇವಲ 40 ಸೆಕೆಂಡ್ ಗಳಲ್ಲಿ ಚಂದ್ರಶೇಖರ್ ಗುರೂಜಿ ಮೃತಪಟ್ಟಿದ್ದಾರೆ.
ಗ್ರಾಹಕರ ಭೇಟಿಗೆ ರೂಮ್ ಬುಕ್ ಮಾಡಿದ್ದ ಗುರೂಜಿಯನ್ನು ಭೇಟಿ ಮಾಡಿದ ಇಬ್ಬರು ದುಷ್ಕರ್ಮಿಗಳು, ಭಕ್ತರಂತೆ ನಟಿಸಿ ಅವರ ಬಳಿ ಬಂದಿದ್ದು, ಒಬ್ಬ ಕಾಲಿಗೆ ಬಿದ್ದು ನಮಸ್ಕರಿಸುವಂತೆ ನಟಿಸಿದ್ದಾನೆ. ಈ ವೇಳೆ ಮತ್ತೊಬ್ಬ ಚಾಕುವಿನಿಂದ ಇರಿದಿದ್ದಾನೆ.
ಇಬ್ಬರು ದುಷ್ಕರ್ಮಿಗಳು ಮನಸೋ ಇಚ್ಛೆ ಇರಿದು ಸುಮಾರು 60 ಬಾರಿ ಇರಿದಿದ್ದಾರೆ. ಹೋಟೆಲ್ ಸಿಬ್ಬಂದಿ ಹಾಗೂ ಗ್ರಾಹಕರು ಇವರ ಭೀಕರ ವರ್ತನೆಗೆ ಬೆಚ್ಚಿ ಹತ್ತಿರ ಬರಲು ಹಿಂಜರಿದಿದ್ದಾರೆ.
ಹಂತಕರು ಬಾಗಲಕೋಟೆ ನಿವಾಸಿಗಳಾಗಿದ್ದು, ಜ್ಯೋತಿಷ್ಯ ಕೇಳುವ ನೆಪದಲ್ಲಿ ಆಗಮಿದ್ದರು. ಬೆಳಿಗ್ಗೆಯಿಂದಲೇ ಹೋಟೆಲ್ ಮುಂದೆ ಕಾದಿದ್ದರು ಎಂದು ತಿಳಿದು ಬಂದಿದೆ.