ಚಿಲುಮೆ ಮತದಾರರ ಪಟ್ಟಿ ಪರಿಷ್ಕರಣೆ ಹಗರಣ ಹಾಗೂ ರೌಡಿಶೀಟರ್ ಗಳು ರಾಜಕೀಯ ಪ್ರವೇಶದ ಕುರಿತು ಮಾಜಿ ಲೋಕಾಯುಕ್ತ ಸಂತೋಷ ಹೆಗಡೆ ಮಾತನಾಡಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಆದ ಅಕ್ರಮ ಸಂವಿಧಾನಕ್ಕೆ ವಿರುದ್ಧವಾದದ್ದು ಇದನ್ನು ಯಾರು ಸರಿ ಎಂದು ಒಪ್ಪಿಕೊಳ್ಳಬಾರದು. ಚುನಾವಣಾ ಆಯೋಗವು ಒಂದು ಸ್ವತಂತ್ರ ಸಂಸ್ಥೆಯಾಗಿದ್ದು ಅದರ ಹಿನ್ನೆಲೆಯಲ್ಲಿ ಈ ರೀತಿಯ ಅಕ್ರಮ ನಡೆದಿರುವುದು ಪ್ರಜಾಪ್ರಭುತ್ವದ ಮಟ್ಟ ಎಲ್ಲಿಗೆ ಹೋಗಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕು ಎಂದಿದ್ದಾರೆ.
ಇನ್ನೂ ರೌಡಿಶೀಟರ್ ಗಳು ರಾಜಕೀಯ ಸೇರ್ಪಡೆ ಕುರಿತು ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಎಲ್ಲರೂ ರಾಜಕೀಯಕ್ಕೆ ಬರಬೇಕೆಂಬ ಆಸೆಯನ್ನು ತೋರ್ಪಡಿಸುತ್ತಿರುವುದನ್ನು ನಾವು ನೋಡಿದ್ದೇವೆ. ನಿವೃತ್ತ ನ್ಯಾಯಾಧೀಶರು, ಸರ್ಕಾರಿ ಅಧಿಕಾರಿಗಳು ಇತರೆ ಗೂಂಡಾಗಳು ರಾಜಕೀಯ ಪ್ರವೇಶಿಸುತ್ತಾರೆ.
ಯಾಕೆಂದರೆ ಅಲ್ಲಿ ಬರುವಷ್ಟು ಸಂಪಾದನೆ ಬೇರೆಲ್ಲೂ ಇಲ್ಲ ಎಂದು ಕಾಣುತ್ತದೆ ಆದ್ದರಿಂದ ಆದಷ್ಟು ಬೇಗ ಈ ವ್ಯವಸ್ಥೆಯಲ್ಲಿ ಬಹಳಷ್ಟು ಸುಧಾರಣೆ ಆಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.