ರೈಲ್ವೆಗೆ ಸುರಕ್ಷತೆಯೇ ಮೊದಲ ಆದ್ಯತೆ. ಪುರಾವೆಗಳನ್ನು ಹಾಳು ಮಾಡದಂತೆ ಹಾಗೂ ಯಾವುದೇ ಸಾಕ್ಷಿ ಹಾಳು ಮಾಡದಂತೆ ನಾವು ಎಚ್ಚರಿಕೆ ವಹಿಸಿದ್ದೇವೆ. ‘ಗ್ರೀನ್’ ಸಿಗ್ನಲ್ ಸಿಕ್ಕ ಬಳಿಕವೇ ರೈಲು ಮುಂದೆ ಸಾಗಿತು ಅಂತಾ ಗಂಭೀರವಾಗಿ ಗಾಯಗೊಂಡಿರುವ ಲೊಕೋಪೈಲೆಟ್ ತಿಳಿಸಿದ್ದಾರೆ.
ಅವರು ಯಾವುದೇ ಸಿಗ್ನಲ್ ಜಂಪ್ ಮಾಡಿಲ್ಲ ಅಥವಾ ಮಿತಿಮೀರಿದ ವೇಗದಲ್ಲಿ ಚಲಿಸಲಿಲ್ಲ ಅಂತಾ ರೈಲ್ವೆ ಮಂಡಳಿಯ ಕಾರ್ಯಾಚರಣೆ ಮತ್ತು ವ್ಯಾಪಾರ ಅಭಿವೃದ್ಧಿ ವಿಭಾಗದ ಜಯ ವರ್ಮ ಸಿನ್ಹಾ ತಿಳಿಸಿದ್ದಾರೆ