ಮುಸ್ಲಿಂ ಪಾತ್ರಗಳ ಕಥಾ ಹಂದರ ಹೊಂದಿದೆ ಎಂಬ ಕಾರಣಕ್ಕಾಗಿಯೇ ಈ ನಾಟಕ ಪ್ರದರ್ಶನ ನಿರ್ಭಂದಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ನಡೆದಿದೆ.
ತಾಲ್ಲೂಕಿನ ವೀರಶೈವ ಲಿಂಗಾಯತ ಕಲ್ಯಾಣ ಮಂಟಪದಲ್ಲಿ ಜತೆಗಿರುವನು ಚಂದಿರ ನಾಟಕ ಪ್ರದರ್ಶನಕ್ಕೆ ಆರ್ ಎಸ್ ಎಸ್ ಹಾಗೂ ಭಜರಂಗದಳದ ಕಾರ್ಯಕರ್ತರು ಅಡ್ಡಿಪಡಿದ್ದಾರೆ.
ಜೋಸೆಫ್ ಸ್ಟೀನ್ ಬರೆದಿರುವ ʻಪಿಡ್ಲರ್ ಆನ್ ದಿ ರೂಫ್ʼ ನಾಟಕವನ್ನ ಖ್ಯಾತ ಸಹಿತಿ ಜಯಂತ್ ಕಾಯ್ಕಿಣಿರವರು ಕನ್ನಡಕ್ಕೆ ಅನುವಾದವನ್ನ ಮಾಡಿದ್ದರು. ರಂಗಬೆಳಕು ತಂಡವು ಇದರ ನಾಟಕ ರೂಪವನ್ನ ಹೊರತಂದಿದ್ದರು ಹಾಗು ಭಾನುವಾರ ಪ್ರದರ್ಶನವನ್ನ ಏರ್ಪಡಿಸಿತ್ತು.
ಸರಿ ಸುಮಾರು ರಾತ್ರಿ 9:30ರ ಹೊತ್ತಿಗೆ ಆರ್ ಎಸ್ ಎಸ್ ಸಂಘಟನೆಯ ಶ್ರೀಧರ್ ಅಚಾರ್ ಹಾಗು ಭಜರಂಗದಳದ ಮಂಜಣ್ಣ ಎಂಬುವವರು ಸಭಾಂಗಣ ಪ್ರವೇಶಿಸಿದ್ದು ಭೋಲೋ ಬಾರತ್ ಮಾತಾ ಕೀ ಜೈ ಎಂದು ಘೋಷಣೆಗಳನ್ನ ಕೂಗಿ ನಟಕ ಪ್ರದರ್ಶನವನ್ನ ನಿಲ್ಲಿಸುವಂತೆ ಸೂಚಿಸಿದ್ದಾರೆ.
ನೆರೆದಿದ್ದ ಪ್ರೇಕ್ಷಕರನ್ನು ಒತ್ತಾಯಪೂರ್ವಕವಾಗಿ ಹೊರ ನಡೆಯುವಂತೆ ಮಾಡಿದ್ದಾರೆ ಇದರಿಂದ ಪ್ರದರ್ಶಕ್ರು ನಾಟಕವನ್ನು ಅರ್ಧದಲ್ಲೇ ಮೊಟಕುಗೊಳಿಸಿದ್ದಾರೆ.
ದೇಶದಲ್ಲಿ ಹಾಲಿ ಹಿಂದೂ ಹಾಗು ಮುಸ್ಲಿಮರ ನಡುವೆ ಗಲಾಟೆ ನಡೆಯುತ್ತಿದ್ದು ಮುಸ್ಲಿಂ ಕೇಂದ್ರಿತ ನಾಟಕವನ್ನ ಪ್ರದರ್ಶಿಸುವುದು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತಂದಂತೆ ಆಗುತ್ತದೆ ಆದ್ದರಿಂದ ನಾಟಕವನ್ನ ಅರ್ಧದಲ್ಲೇ ನಿಲ್ಲಿಸಬೇಕಾಯಿತ್ತು ಎಂದು ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ತಮ್ಮ ಕ್ರಮವನ್ನ ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಯೋಜಕರಾದ ಕೊಟ್ರಪ್ಪ ಹಿರೇಮಾಗಡಿ ನಾಟಕದಲ್ಲಿ ಅಂತಹ ಯಾವುದೇ ಸಂದೇಶ ಅಥವಾ ದೃಶ್ಯಗಳಿರಲಿಲ್ಲ ನಾವು ಭಾರತೀಯರು ಒಂದೇ ಎಂದು ಭಾವೈಕ್ಯತೆ ಸಾರುವ ಅಂಶ ನಾಟಕದಲ್ಲಿತ್ತು ಸಂಘಟನೆಯ ಕಾರ್ಯಕರ್ತರುಗಳು ನಾಟಕವನ್ನ ನೋಡಿ ವಿರ್ಮಶಿಸಬೇಕಾಗುತ್ತು ಅದು ಬಿಟ್ಟು ನಾಟಕವನ್ನ ಅರ್ಧದಲ್ಲೇ ನಿಲ್ಲಿಸಿದ್ದು ಸರಿಯಲ್ಲ ಎಂದು ಖಂಡಿಸಿದ್ದಾರೆ.