ಏನಾದರೂ ಮಾಡಿ ಆಪ್ ಸರಕಾರವನ್ನು ಬೀಳಿಸಿ ದೆಹಲಿಯಲ್ಲಿ ಸರಕಾರ ರಚಿಸಲು ಬಿಜೆಪಿ ಕಸರತ್ತು ನಡೆಸಿದ್ದು, ಆಮ್ ಆದ್ಮಿ ಪಕ್ಷದ ನಾಯಕರನ್ನು ಸೆಳೆಯಲು ದುಬಾರಿ ಆಫರ್ ಗಳನ್ನು ನೀಡಲಾಗುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಗಂಭೀರ ಆರೋಪ ಮಾಡಿದೆ.
ಆಮ್ ಆದ್ಮಿ ಪಕ್ಷದ 5 ಹಿರಿಯ ನಾಯಕರು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, 25 ಕೋಟಿ ತಗೊಂಡು ಬಿಜೆಪಿ ಪಕ್ಷಕ್ಕೆ ಸೇರಿ. ಇಲ್ಲದಿದ್ದರೆ ಸಿಸೊಡಿಯಾ ರೀತಿ ಸಿಬಿಐ ತನಿಖೆ ಎದುರಿಸಿ ಎಂದು ಬ್ಲಾಕ್ ಮೇಲ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಆಪ್ ಶಾಸಕರು, ರಾಜ್ಯಸಭಾ ಸದಸ್ಯರು ಹಾಗೂ ಸಂಸದರಿಗೆ ಬಿಜೆಪಿ ನೇರವಾಗಿ ಆಹ್ವಾನ ನೀಡುತ್ತಿದ್ದು, ಬಿಜೆಪಿ ಸೇರಿದರೆ 20 ಕೋಟಿ ರೂ., ಬೇರೆಯವರನ್ನು ಸೇರಿಸಿದರೆ 25 ಕೋಟಿ ರೂ. ನೀಡಲಾಗುವುದು ಎಂದು ಆಮೀಷ ಒಡ್ಡಲಾಗುತ್ತಿದೆ ಎಂದು ಅವರು ಆರೋಪಿಸಿದರು.