Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಕಾಂಗ್ರೆಸ್​ನಲ್ಲಿ ಭುಗಿಲೆದ್ದ ಅಸಮಾಧಾನ, ಪರಮೇಶ್ವರ್​ ಪ್ರಣಾಳಿಕ ಸಮಿತಿಗೆ ರಾಜೀನಾಮೆ..!!

ಕೃಷ್ಣ ಮಣಿ

ಕೃಷ್ಣ ಮಣಿ

February 3, 2023
Share on FacebookShare on Twitter

ಸಿದ್ದರಾಮಯ್ಯ ದಲಿತ ನಾಯಕರ ವಿರೋಧಿ ಎನ್ನುವ ಅಭಿಯಾನ ಕೋಲಾರದ ನಡೆಯುವ ಸಮಯದಲ್ಲೇ ಕಾಂಗ್ರೆಸ್​ನಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ವಿರುದ್ಧ ಬಂಡೆದ್ದ ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್​ 2023ರ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಚುನಾವಣಾ ಪ್ರಣಾಳಿಕ ಸಮಿತಿಯಲ್ಲಿ ಅಧ್ಯಕ್ಷನಾಗಿ ಇದ್ದರೂ ನನ್ನ ಗಮನಕ್ಕೇ ಬಾರದೆ ಕೆಲವೊಂದು ನಿರ್ಧಾರಗಳು ಆಗುತ್ತಿವೆ. ಹೀಗಿರುವಾಗ ನಾನು ಪ್ರಣಾಳಿಕ ಸಮಿತಿ ಅಧ್ಯಕ್ಷನಾಗಿ ಯಾಕೆ ಇರಬೇಕು ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಕರ್ನಾಟಕ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಆಗಿರುವ ರಣದೀಪ್​ ಸುರ್ಜೆವಾಲ ಎದುರೇ ಬಂಡಾಯ ಭುಗಿಲೆದ್ದಿದೆ. 

ಹೆಚ್ಚು ಓದಿದ ಸ್ಟೋರಿಗಳು

ಜಗಜ್ಯೋತಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣ..!

ಎರಡು ತಿಂಗಳ ನಿರಂತರ ಹೋರಾಟ..! VISL ಉಳಿಸಿ ಎಂದು ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆದ ಕಾರ್ಮಿಕರು..!

PRATAP SIMHA | ರಾಜಕೀಯ ಲಾಭಕ್ಕಾಗಿ ಮೀಸಲಾತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಗೆ ದಲಿತರ ಮೇಲೆ ನೈಜ ಕಾಳಜಿ ಇಲ್ಲ

ಉಚಿತ ಯೋಜನೆಗಳ ಬಗ್ಗೆ ನನಗೆ ಗೊತ್ತೇ ಇರಲಿಲ್ಲ..!

ಕಾಂಗ್ರೆಸ್​ ಈಗಾಗಲೇ ಎರಡು ಮಹತ್ವದ ಯೋಜನೆಗಳನ್ನು ಕಾಂಗ್ರೆಸ್​ ಪಕ್ಷ ಘೋಷಣೆ ಮಾಡಿದೆ. ಮೊದಲನೆಯದಾಗಿ 200 ಯೂನಿಟ್​ ಉಚಿತ ವಿದ್ಯುತ್​ ನೀಡುವ ಬಗ್ಗೆ ಘೋಷಣೆ ಮಾಡಲಾಗಿದೆ. ಮತ್ತೊಂದು ಗೃಹಿಣಿಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಬಗ್ಗೆಯೂ ಘೋಷಣೆ ಮಾಡಲಾಯ್ತು. ಮಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ ನೀಡುವ ಬಗ್ಗೆಯೂ ಗೊತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನಮಾನ ನನಗೆ ಬೇಡ ಅಂತ ಪರಮೇಶ್ವರ್ ರಾಜೀನಾಮೆ ನೀಡಿದ್ದಾರೆ. ಡಾ ಜಿ. ಪರಮೇಶ್ವರ್​ ರಾಜೀನಾಮೆ ಬೆನ್ನಲ್ಲೇ ಸುರ್ಜೆವಾಲ ಸಂಧಾನ ಪ್ರಯತ್ನ ಮಾಡಿದ್ದು, ರಾಜೀನಾಮೆ ಹಿಂಪಡೆಯುವಂತೆ ಪರಮೇಶ್ವರ್​​​ಗೆ ಮನವಿ ಮಾಡಿದ್ದಾರೆ. ಆದರೆ ಪ್ರಜಾಧ್ವನಿ ಯಾತ್ರೆಗೆ ನಾನು ಬರ್ತೀನಿ. ಆದರೆ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸ್ಥಾನ ನನಗೆ ಬೇಡ,  ರಾಜೀನಾಮೆ ಹಿಂಪಡೆಯಲ್ಲ ಎಂದಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. 

ಇಂದಿನ ಕಾರ್ಯಕ್ರಮಕ್ಕೆ ಗೈರಾಗಲು ಪರಂ ನಿರ್ಧಾರ..!

ಇಂದಿನಿಂದ ಪ್ರಜಾಧ್ವನಿ ಸಮಾವೇಶ ಕೋಲಾರದ ಮುಳಬಾಗಿಲುವಿನಿಂದ ಆರಂಭ ಆಗುತ್ತಿದ್ದು, ಬೆಳಗ್ಗೆ 10 ಗಂಟೆಗೆ ಮುಳಬಾಗಿಲುವಿನ ಕುರುಡುಮಲೆ ವಿನಾಯಕ ದೇಗುಲದಲ್ಲಿ ಡಿ.ಕೆ ಶಿವಕುಮಾರ್​ ವಿಶೇಷ ಪೂಜೆ ಹಮ್ಮಿಕೊಂಡಿದ್ದಾರೆ. ಚುನಾವಣಾ ಪ್ರಣಾಳಿಕೆ ಸಮಿತಿಗೆ ಪರಮೇಶ್ವರ್​ ರಾಜೀನಾಮೆ ನೀಡದ ಬಳಿಕ ನಾನು ಯಾವ ಯಾತ್ರೆಗೂ ಬರುವುದಿಲ್ಲ, ನಾನು ಡಿಸಿಎಂ ಆಗಿದ್ದವನು, 8 ವರ್ಷ ಕಾಲ ಕಾಂಗ್ರೆಸ್​ ಪಕ್ಷವನ್ನು ಮುನ್ನಡೆಸಿದ್ದೇನೆ. ನನಗೆ ಗೊತ್ತಿಲ್ಲದೆ ಘೋಷಣೆ ಆದ ಬಳಿಕ ಚುನಾವಣಾ ಪ್ರಣಾಳಿಕ ಸಮಿತಿ ಪಟ್ಟಿಗೆ ಸೇರಿಸುವುದು ಸರಿಯಲ್ಲ. ನೀವು ಯಾತ್ರೆ ಮುಂದುವರಿಸಿ ಎಂದಿದ್ದಾರೆ ಎನ್ನಲಾಗಿದ್ದು, ರಣದೀಪ್​ ಸಿಂಗ್​ ಸುರ್ಜೇವಾಲ ಪರಮೇಶ್ವರ್​ ಅವರನ್ನು ಮನವೊಲಿಸಲು ಸಾಕಷ್ಟು ಹರಸಾಹಸ ಮಾಡಿದ್ದಾರೆ. ಕೊನೆಗೆ ಬಿಜೆಪಿ, ಜೆಡಿಎಸ್ ಹಾಗು ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಸುರ್ಜೆವಾಲ ಮನವೊಲಿಸಿದ್ದಾರೆ. 

ಡಿಕೆಶಿ ಏಕವ್ಯಕ್ತಿ ನಿರ್ಧಾರ ಮಾಡ್ತಿದ್ದಾರಾ..? ಸಿದ್ದು ಸೈಲೆಂಟ್​ ಹೇಗೆ..? 

ಕಾಂಗ್ರೆಸ್​ ಘೋಷಣೆ ಮಾಡಿರುವ ಎರಡು ಪ್ರಮುಖ ಅಂಶಗಳು ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷರಿಗೇ ಗೊತ್ತಿಲ್ಲ ಎಂದ ಮೇಲೆ ಡಿ.ಕೆ ಶಿವಕುಮಾರ್​ ಏಕಾಂಗಿಯಾಗಿ ಈ ನಿರ್ಧಾರ ಮಾಡುತ್ತಿದ್ದಾರಾ..? ಅನ್ನೋ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇನ್ನು ಸಿದ್ದರಾಮಯ್ಯ ಕೂಡ ಶಿವಕುಮಾರ್​ ಮಾತಿಗೆ ಸುಮ್ಮನೆ ತಲೆ ಆಡಿಸುತ್ತಿದ್ದಾರಾ..? ಅನ್ನೋ ಪ್ರಶ್ನೆಯೂ ಕಾಡುತ್ತದೆ. ಒಂದು ವೇಳೆ ಬೇರೆ ಎಲ್ಲಾ ನಾಯಕರಿಗೂ ಈ ವಿಚಾರ ಗೊತ್ತಾದರೆ ಬಹಿರಂಗ ಆಗುವ ಭೀತಿಯಲ್ಲಿ ಉಭಯ ನಾಯಕರು ಗೌಪ್ಯವಾಗಿ  ತಯಾರಿ ಮಾಡಿಕೊಂಡಿರಬಹುದು ಅನ್ನೋ ಮಾತುಗಳು ಕೇಳಿಬರುತ್ತಿದೆ. ಒಂದು ವೇಳೆ ಸಿದ್ದರಾಮಯ್ಯಗೆ ಈ ಮಾಹಿತಿಯೇ ಇಲ್ಲದೆ ಘೋಷಣೆ ಮಾಡಿದ್ದರೆ..! ಡಾ ಜಿ ಪರಮೇಶ್ವರ್​ಗಿಂತ ಮೊದಲು ಸಿದ್ದರಾಮಯ್ಯ ಅವರೇ ಸಿಡಿದು ಏಳುತ್ತಿದ್ದರು ಅಲ್ಲವೇ..? ಒಟ್ಟಾರೆ ಕಾಂಗ್ರೆಸ್​ನಲ್ಲಿ ದಲಿತರ ಏಳಿಗೆ ಸಹಿಸಲ್ಲ ಅನ್ನೋ ಆರೋಪದ ನಡುವೆ ಈ ವಿಚಾರ ಸ್ಫೋಟ ಆಗಿರುವುದು ಕಾಂಗ್ರೆಸ್​ ಪಾಲಿಗೆ ಬಿಸಿ ತುಪ್ಪ ಆಗಿದೆ. 

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವುದರ ಬದಲಿಗೆ ನಿರುದ್ಯೋಗವನ್ನು ಸೃಷ್ಟಿಸಿದೆ : ಸಿದ್ದರಾಮಯ್ಯ
Top Story

ಬಿಜೆಪಿ ಸರ್ಕಾರ ಉದ್ಯೋಗ ಸೃಷ್ಟಿಸುವುದರ ಬದಲಿಗೆ ನಿರುದ್ಯೋಗವನ್ನು ಸೃಷ್ಟಿಸಿದೆ : ಸಿದ್ದರಾಮಯ್ಯ

by ಪ್ರತಿಧ್ವನಿ
March 23, 2023
ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಅಪಘಾತ : ಶಸ್ತ್ರಚಿಕಿತ್ಸೆ ಮುಗಿಸಿ ಆ್ಯಂಬುಲೆನ್ಸ್​ನಲ್ಲೇ ಪರೀಕ್ಷೆ ಬರೆದ ಸಾಹಸಿ
Top Story

ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಅಪಘಾತ : ಶಸ್ತ್ರಚಿಕಿತ್ಸೆ ಮುಗಿಸಿ ಆ್ಯಂಬುಲೆನ್ಸ್​ನಲ್ಲೇ ಪರೀಕ್ಷೆ ಬರೆದ ಸಾಹಸಿ

by ಮಂಜುನಾಥ ಬಿ
March 21, 2023
ಕಾಂಗ್ರೆಸ್​​ನಿಂದ ಮೊದಲ ಪಟ್ಟಿ ರಿಲೀಸ್​.. ಯಾರಿಗೆ ಟಿಕೆಟ್​ ಮಿಸ್​ ಗೊತ್ತಾ..?
Top Story

ಕಾಂಗ್ರೆಸ್​​ನಿಂದ ಮೊದಲ ಪಟ್ಟಿ ರಿಲೀಸ್​.. ಯಾರಿಗೆ ಟಿಕೆಟ್​ ಮಿಸ್​ ಗೊತ್ತಾ..?

by ಕೃಷ್ಣ ಮಣಿ
March 25, 2023
ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಐಟಿ ದಾಳಿ : ಶೋಭಾ ಡೆವಲಪರ್ಸ್ ಕಚೇರಿಗಳ ಮೇಲೆ ರೇಡ್‌..! IT Raid At Dawn in Bangalore: Raid on the offices of Shobha Developers..!
Top Story

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಐಟಿ ದಾಳಿ : ಶೋಭಾ ಡೆವಲಪರ್ಸ್ ಕಚೇರಿಗಳ ಮೇಲೆ ರೇಡ್‌..! IT Raid At Dawn in Bangalore: Raid on the offices of Shobha Developers..!

by ಪ್ರತಿಧ್ವನಿ
March 20, 2023
ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ಆಟೋ ಚಾಲಕರ ಜತೆ ಡಿ.ಕೆ.ಶಿವಕುಮಾರ್ ಸಂವಾದ
Top Story

ಬೆಂಗಳೂರಿನ ಅರಮನೆ ಮೈದಾನದಲ್ಲಿ ಗುರುವಾರ ಆಟೋ ಚಾಲಕರ ಜತೆ ಡಿ.ಕೆ.ಶಿವಕುಮಾರ್ ಸಂವಾದ

by ಪ್ರತಿಧ್ವನಿ
March 24, 2023
Next Post
ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಸೂಲಿಬೆಲೆ

ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಸೂಲಿಬೆಲೆ

ಸೈಬರ್ ಅಪರಾಧವನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕಾನೂನು ಜಾರಿಗೆ ಕರೆ ನೀಡಿದ ಜಸ್ಟಿಸ್ ಅರುಣ್ ಮಿಶ್ರಾ

ಸೈಬರ್ ಅಪರಾಧವನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕಾನೂನು ಜಾರಿಗೆ ಕರೆ ನೀಡಿದ ಜಸ್ಟಿಸ್ ಅರುಣ್ ಮಿಶ್ರಾ

ಚೆನ್ನೈನಲ್ಲಿ ಅದ್ದೂರಿಯಾಗಿ ಮುಹೂರ್ತ ಮುಗಿಸಿದ ದಳಪತಿ 67ಚಿತ್ರದ ಬಹುತೇಕ ತಾರಾಬಳಗದ ಸಮ್ಮುಖದಲ್ಲಿ ಚಿತ್ರಕ್ಕೆ ಚಾಲನೆ

ಚೆನ್ನೈನಲ್ಲಿ ಅದ್ದೂರಿಯಾಗಿ ಮುಹೂರ್ತ ಮುಗಿಸಿದ ದಳಪತಿ 67
ಚಿತ್ರದ ಬಹುತೇಕ ತಾರಾಬಳಗದ ಸಮ್ಮುಖದಲ್ಲಿ ಚಿತ್ರಕ್ಕೆ ಚಾಲನೆ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist