ರಾಜ್ಯದಲ್ಲಿ ದಿನದಿಂದ ಕೋವಿಡ್ ಹಾಗೂ ಓಮಿಕ್ರಾನ್ ರೂಪಾಂತರಿ ಸೋಂಕು ಹೆಚ್ಚಳವಾಗುತ್ತಿದ್ದು. ಸೋಂಕು ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈಗಾಗಲೇ ಸೆಮಿ ಲಾಕ್ಡೌನ್ ಹಾಗೂ ವಿಕೇಂಡ್ ಕರ್ಪ್ಯೂ ಅಸ್ತ್ರವನ್ನ ಪ್ರಯೋಗಿಸಿದೆ.
ಈ ನಡುವೆ ಸೋಮವಾರ ತಜ್ಞರ ಸಮಿತಿಯೂ ಕೋವಿಡ್-19 ಮೇಲಿನ ನಿರ್ಬಂಧಗಳನ್ನು ಸಡಿಲಿಸಬೇಕೋ ಅಥವಾ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರಬೇಕೆ ಎಂಬುದರ ಕುರಿತು ತಜ್ಞರ ಸಮಿತಿ ಜೊತೆಗೆ ವರ್ಚುವಲ್ ಸಭೆ ನಡೆಸಿದ ಸಿಎಂ ಬೊಮ್ಮಾಯಿ ಈ ಸ್ಥಿತಿಗತಿ ಕುರಿತು ವರದಿಯನ್ನ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಸಭೆಯ ಬಳಿಕ ಮಾತನಾಡಿದ ಆರ್.ಅಶೋಕ್ ಇಡೀ ದೇಶದಲ್ಲಿಯೇ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಕೋವಿಡ್ ಟೆಸ್ಟಿಂಗ್ ನಡೆಯುತ್ತಿರುವುದು ಕರ್ನಾಟಕದಲ್ಲಿ. ರಾಜ್ಯದಲ್ಲಿ ಐದಾರು ಜಿಲ್ಲೆಗಳಲ್ಲಿ ಲಸಿಕೆ ಅಭಿಯಾನ ಕುಂಟುತ್ತಾ ಸಾಗಿದೆ ಆ ಜಿಲ್ಲೆಗಳಳ ಕಡೆಗೆ ಹೆಚ್ಚಿನ ಗಮನವನ್ನ ಹರಿಸ್ತೀವಿ ಹಾಗೂ ಆ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಪ್ರತ್ಯೇಕವಾಗಿ ಸಭೆಯನ್ನ ಮಡುತ್ತೇವೆ ಎಂದು ಹೇಳಿದ್ದಾರೆ.
ಮುಂದುವರೆದು ಜನವರಿ 25, 26ರ ನಂತರ ಕೋವಿಡ್ ಪ್ರಕರಣಗಳಲ್ಲಿ ತೀವ್ರ ಗತಿಯ ಏರಿಕೆಯಾಗಬಹುದು ಆಕ್ಸಿಜನ್ ಪ್ಲಾಂಟ್ಗಳು ಇರುವ ಕಡೇ ಜನರೇಟರ್ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಸೂಚಿಸಲಾಗಿದೆ ಮತ್ತು ಶುಕ್ರವಾರದವರೆಗೂ ಕಾದು ನೋಡುವ ತಂತ್ರವನ್ನ ಅನುಸರಿಸಲಾಗುವುದು ಅಲ್ಲಿಯಬರೆಗೂ ಪ್ರಸ್ತುತ ಜಾರಿಯಲ್ಲಿರುವ ಎಲ್ಲ ನಿಯಮಗಳು ಜಾರಿಯಲ್ಲಿರುತ್ತವೆ ಎಂದು ತಿಳಿಸಿದ್ದಾರೆ.
ಮುಂದುವರೆದು ನಾವು ಲಾಕ್ಡೌನ್ ಹಾಗೂ ಕಠಿಣ ನಿಯಮಗಳನ್ನು ಜಾರಿಗೆ ತರಲು ಬಯಸುವುದಿಲ್ಲ. ಆದರೆ, ಜನರ ಜೀವ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ ನಾವು ಯಾವುದೇ ನಿರ್ಧಾರವನ್ನ ಕೈಗೊಂಡರು ಅದು ಜನರ ಹಿತದೃಷ್ಟಿಯಿಂದಲ್ಲೇ ಹೊರತು ಸರ್ಕಾರ ಆದಾಯದ ಬಗ್ಗೆ ಅಲ್ಲ. ಯಾರದ್ದೋ ಹಿತದೃಷ್ಟಿ ಕಾಪಾಡುವುದಕ್ಕೆ ಹೋದರೆ ಜನರ ಜೀವ ಅಪಾಯಕ್ಕೆ ದೂಡಿದಂತಾಗುತ್ತದೆ ಎಂದು ಹೇಳಿದ್ದಾರೆ.