
ಪ್ರಧಾನಿ ನರೇಂದ್ರ ಮೋದಿ 2 ದಿನಗಳ ಕುವೈತ್ ಪ್ರವಾಸ ಕೈಗೊಂಡಿದ್ದು, ಭಾನುವಾರ ಕುವೈತ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್’ ನೀಡಿ ಗೌರವಿಸಲಾಗಿದೆ.. ಇದು ಮೋದಿ ಅವರಿಗೆ ದೊರೆತ 20ನೇ ಅಂತರಾಷ್ಟ್ರೀಯ ಗೌರವ ಆಗಿದೆ.. ಕುವೈತ್ನ ಬಯಾನ್ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಕುವೈತ್ನ ರಾಜ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾ ಅವರು ಪ್ರಧಾನಿ ಮೋದಿಗೆ ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್ ಗೌರವ ನೀಡಿ ಸನ್ಮಾನಿಸಿದ್ದಾರೆ.
ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಬಲಪಡಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ ಅಂತ ಕುವೈತ್ನ ಸರ್ಕಾರ ಪ್ರಕಟಿಸಿದೆ. ರಾಜ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ ಕುವೈತ್ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಕುವೈತ್ ಸರ್ಕಾರ ಹಾಗೂ ಅಲ್ಲಿನ ಉದ್ಯಮಿಗಳ ಜೊತೆ ಮಾತುಕತೆ ನಡೆಸಿದ್ರು. ಐಟಿ, ಫಿನ್ಟೆಕ್, ಮೂಲಸೌಕರ್ಯ, ಆರ್ಥಿಕತೆ, ಪಾಲುದಾರಿಕೆ, ಹೂಡಿಕೆ, ಭದ್ರತೆ, ಔಷಧಗಳು ಸೇರಿದಂತೆ ಉಭಯ ರಾಷ್ಟ್ರಗಳ ನಡುವಿನ ನಿಕಟ ಬಾಂಧವ್ಯದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯ್ತು..

ಕುವೈತ್ನ ಅಮೀರ್, ಶೇಖ್ ಮೆಶಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್ ಸಬಾಹ್ ಅವರೊಂದಿಗೆ ಮೋದಿ ದ್ವಿಪಕ್ಷೀಯ ಸಭೆ ನಡೆಸಿದ್ರು.. ವಿವಿಧ ಅಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿದಂತೆ ಮೆಮೊರಾಂಡಮ್ ಆಫ್ ಅಂಡರ್ಸ್ಟ್ಯಾಂಡಿಂಗ್ಗೆ ಕುವೈತ್ ಸಹವರ್ತಿ ಅಬ್ದುಲ್ಲಾ ಅಲಿ ಅಲ್ ಯಾಹ್ಯಾ ಮತ್ತು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವ್ರು ಪರಸ್ಪರ ಸಹಿ ಮಾಡಿಕೊಂಡ್ರು.. ಕುವೈತ್ನ ಗಲ್ಫ್ ಸ್ಪಿಕ್ ಲೇಬರ್ ಕ್ಯಾಂಪ್ಗೆ ಭೇಟಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಮೂಲದ ಕೆಲಸಗಾರರೊಂದಿಗೆ ಸಂವಾದ ನಡೆಸಿದ್ರು.. ಬಡವರ ಅಭಿವೃದ್ಧಿಯೇ ನನ್ನ ಗುರಿ ಅಂದ್ರು..
ನನಗೆ ಅಭಿವೃದ್ಧಿ ಎಂದರೆ ಒಳ್ಳೆಯ ರಸ್ತೆಗಳು, ಉತ್ತಮ ವಿಮಾನ, ರೈಲು ನಿಲ್ದಾಣಗಳು ಮಾತ್ರವಲ್ಲ. ಬಡವರ ಮನೆಗಳಲ್ಲಿ ಶೌಚಾಲಯ ಇರಬೇಕು. 11 ಕೋಟಿ ಶೌಚಾಲಯ ನಿರ್ಮಿಸುವ ಮನಸ್ಸಿದೆ, ಬಡವರಿಗೆ ಉತ್ತಮ ಮನೆಗಳು ಇರಬೇಕು. ಬಡವರಿಗೆ 4 ಕೋಟಿ ಮನೆಗಳನ್ನು ನಿರ್ಮಿಸಿದ್ದೇವೆ. ಅದರಲ್ಲಿ ಕನಿಷ್ಠ 15-16 ಕೋಟಿ ಜನರು ವಾಸಿಸುತ್ತಾರೆ. ಪ್ರತಿಯೊಬ್ಬರಿಗೂ ಶುದ್ಧ ನೀರು ಒದಗಿಸಬೇಕು. ಇದಕ್ಕಾಗಿ ನಾನು ಸಾಕಷ್ಟು ಕೆಲಸ ಮಾಡಬೇಕಾಗಿದೆ ಎಂದಿದ್ದಾರೆ. ಇನ್ನು ನನಗೆ ಅತ್ಯಂತ ಪ್ರಮುಖ ವಿಷಯವೆಂದರೆ.. ಬಡವರ ಘನತೆ ಮತ್ತು ಗೌರವ ಅಂತಾನೂ ಪ್ರಧಾನಿ ಹೇಳಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ 2 ದಿನಗಳ ಕುವೈತ್ ಪ್ರವಾಸ ಕೈಗೊಂಡಿದ್ದು, ಭಾನುವಾರ ಕುವೈತ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್’ ನೀಡಿ ಗೌರವಿಸಲಾಗಿದೆ.. ಇದು ಮೋದಿ ಅವರಿಗೆ ದೊರೆತ 20ನೇ ಅಂತರಾಷ್ಟ್ರೀಯ ಗೌರವ ಆಗಿದೆ.. ಕುವೈತ್ನ ಬಯಾನ್ ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಕುವೈತ್ನ ರಾಜ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾ ಅವರು ಪ್ರಧಾನಿ ಮೋದಿಗೆ ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್ ಗೌರವ ನೀಡಿ ಸನ್ಮಾನಿಸಿದ್ದಾರೆ.
ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಬಲಪಡಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ ಅಂತ ಕುವೈತ್ನ ಸರ್ಕಾರ ಪ್ರಕಟಿಸಿದೆ. ರಾಜ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ ಕುವೈತ್ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಕುವೈತ್ ಸರ್ಕಾರ ಹಾಗೂ ಅಲ್ಲಿನ ಉದ್ಯಮಿಗಳ ಜೊತೆ ಮಾತುಕತೆ ನಡೆಸಿದ್ರು. ಐಟಿ, ಫಿನ್ಟೆಕ್, ಮೂಲಸೌಕರ್ಯ, ಆರ್ಥಿಕತೆ, ಪಾಲುದಾರಿಕೆ, ಹೂಡಿಕೆ, ಭದ್ರತೆ, ಔಷಧಗಳು ಸೇರಿದಂತೆ ಉಭಯ ರಾಷ್ಟ್ರಗಳ ನಡುವಿನ ನಿಕಟ ಬಾಂಧವ್ಯದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯ್ತು..

ಕುವೈತ್ನ ಅಮೀರ್, ಶೇಖ್ ಮೆಶಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್ ಸಬಾಹ್ ಅವರೊಂದಿಗೆ ಮೋದಿ ದ್ವಿಪಕ್ಷೀಯ ಸಭೆ ನಡೆಸಿದ್ರು.. ವಿವಿಧ ಅಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿದಂತೆ ಮೆಮೊರಾಂಡಮ್ ಆಫ್ ಅಂಡರ್ಸ್ಟ್ಯಾಂಡಿಂಗ್ಗೆ ಕುವೈತ್ ಸಹವರ್ತಿ ಅಬ್ದುಲ್ಲಾ ಅಲಿ ಅಲ್ ಯಾಹ್ಯಾ ಮತ್ತು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವ್ರು ಪರಸ್ಪರ ಸಹಿ ಮಾಡಿಕೊಂಡ್ರು.. ಕುವೈತ್ನ ಗಲ್ಫ್ ಸ್ಪಿಕ್ ಲೇಬರ್ ಕ್ಯಾಂಪ್ಗೆ ಭೇಟಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಮೂಲದ ಕೆಲಸಗಾರರೊಂದಿಗೆ ಸಂವಾದ ನಡೆಸಿದ್ರು.. ಬಡವರ ಅಭಿವೃದ್ಧಿಯೇ ನನ್ನ ಗುರಿ ಅಂದ್ರು..
ನನಗೆ ಅಭಿವೃದ್ಧಿ ಎಂದರೆ ಒಳ್ಳೆಯ ರಸ್ತೆಗಳು, ಉತ್ತಮ ವಿಮಾನ, ರೈಲು ನಿಲ್ದಾಣಗಳು ಮಾತ್ರವಲ್ಲ. ಬಡವರ ಮನೆಗಳಲ್ಲಿ ಶೌಚಾಲಯ ಇರಬೇಕು. 11 ಕೋಟಿ ಶೌಚಾಲಯ ನಿರ್ಮಿಸುವ ಮನಸ್ಸಿದೆ, ಬಡವರಿಗೆ ಉತ್ತಮ ಮನೆಗಳು ಇರಬೇಕು. ಬಡವರಿಗೆ 4 ಕೋಟಿ ಮನೆಗಳನ್ನು ನಿರ್ಮಿಸಿದ್ದೇವೆ. ಅದರಲ್ಲಿ ಕನಿಷ್ಠ 15-16 ಕೋಟಿ ಜನರು ವಾಸಿಸುತ್ತಾರೆ. ಪ್ರತಿಯೊಬ್ಬರಿಗೂ ಶುದ್ಧ ನೀರು ಒದಗಿಸಬೇಕು. ಇದಕ್ಕಾಗಿ ನಾನು ಸಾಕಷ್ಟು ಕೆಲಸ ಮಾಡಬೇಕಾಗಿದೆ ಎಂದಿದ್ದಾರೆ. ಇನ್ನು ನನಗೆ ಅತ್ಯಂತ ಪ್ರಮುಖ ವಿಷಯವೆಂದರೆ.. ಬಡವರ ಘನತೆ ಮತ್ತು ಗೌರವ ಅಂತಾನೂ ಪ್ರಧಾನಿ ಹೇಳಿಕೊಂಡಿದ್ದಾರೆ.