ನಂಜನಗೂಡಿನಲ್ಲಿ ಲಿಂಗಾಯತರ ಮೇಲೆ ಬ್ರಾಹ್ಮಣರಿಂದ ದಬ್ಬಾಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬ್ರಾಹ್ಮಣರು ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿರುವ ಹೇಳಿಕೆ ಶಾಸಕ ಎಸ್.ಎ.ರಾಮದಾಸ್ ಪ.ಮಲ್ಲೇಶ್ ವಿರುದ್ದ ಹರಿಹಾಯ್ದಿದ್ದಾರೆ.
ಬ್ರಾಹ್ಮಣರನ್ನು ನಿಂದಿಸಿರುವ ಪ ಮಲ್ಲೇಶ್ ವಿರುದ್ಧ ನೂರಾರು ಮಂದಿ ಬ್ರಾಹ್ಮಣರು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಬೇಕು. ಬ್ರಾಹ್ಮಣರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಪ ಮಲ್ಲೇಶ್ ವಿರುದ್ಧ ಈಗಾಗಲೇ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಇದು ಇಷ್ಟಕ್ಕೆ ಸೀಮಿತವಾಗಬಾರದು.
ಮುಂಬರುವ ದಿನಗಳಲ್ಲಿ ನೂರಾರು ಮಂದಿ ಬ್ರಾಹ್ಮಣರು ಪ ಮಲ್ಲೇಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು ಅದಕ್ಕೆ ಅಗತ್ಯವಾದ ನೆರವನ್ನು ಬ್ರಾಹ್ಮಣ ಸಂಘಟನೆಗಳ ಒಕ್ಕೂಟ ನೀಡಲಿದೆ. ಪ್ರತಿಭಟನಾ ಸಭೆಯಲ್ಲಿ ಶಾಸಕ ರಾಮದಾಸ್ ಹೇಳಿಕೆ.
ಪ್ರತಿಭಟನೆಗೆ ಆಗಮಿಸಿದ ವೇಳೆ ಶಾಸಕ ರಾಮದಾಸ್ ಕಾಲು ಮುಟ್ಟಿ ಸಂಸದ ಪ್ರತಾಪ್ ಸಿಂಹ ನಮಸ್ಕರಿಸಿದ್ದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿತ್ತು. ಇತ್ತೀಚೆಗೆ ಬಸ್ ಶೆಲ್ಟರ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಪರಸ್ಪರ ಬೈದಾಡಿಕೊಂಡಿದ್ದ ನಾಯಕರು.