ಬಿಹಾರ ಮಹಾಮೈತ್ರಿಕೂಟದ ಸಚಿವ ಸಂಪುಟ ರಚನೆಯಾಗಿದ್ದು ಗೃಹ ಖಾತೆಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಬಳಿ ಉಳಿಸಿಕೊಂಡಿದ್ದು ಹಿಂದಿನ ಸರ್ಕಾರದಲ್ಲಿ ತಮ್ಮಗಿದ್ದ ಪವರ್ ಅನ್ನು ಈ ಸರ್ಕಾರದಲ್ಲಿ ಮುಂದುವರೆಸಲು ಯೋಜಿಸಿದ್ದಾರೆ.
ನಿತೀಸ್ ಗೃಹ ಖಾತೆಯೊಂದಿಗೆ ಅನೇಕ ಖಾತಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದು ಸರ್ಕಾರದಲ್ಲಿ ತಮ್ಮ ಅಧಿಪತ್ಯ ಸಾಧಿಸಿದ್ದಾರೆ.
ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ಗೆ ಪ್ರಮುಖ ಖಾತೆಗಳಾದ ಆರೋಗ್ಯ, ಲೋಕೋಪಯೋಗಿ, ವಸತಿ ಹಾಗೂ ಗ್ರಾಮೀಣಾಭಿವೃದ್ದಿಯಂತಹ ಪ್ರಮುಖ ಖಾತೆಗಳು ದೊರೆತಿವೆ.
ತೇಜಸ್ವಿ ಹಿರಿಯ ಸಹೋದರ ತೇಜ್ ಪ್ರತಾಪ್ ಯಾದವ್ಗೆ ಪರಿಸರ ಹಾಗೂ ಅರಣ್ಯ ಖಾತೆಯನ್ನು ನೀಡಲಾಗಿದೆ.
ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯನ್ನು ಹೊರತುಪಡಿಸಿದರೆ ಸಚಿವರಾದ ವಿಜಯ್ ಕುಮಾರ್ (ಹಣಕಾಸು, ತೆರಿಗೆ ಮತ್ತು ಸಂಸದೀಯ ವ್ಯವಹಾರಗಳು) ಹಾಗೂ ಬಿಜೇಂದ್ರ ಯಾದವ್ (ಇಂಧನ, ಯೋಜನೆ ಮತ್ತು ಅಭಿವೃದ್ದಿ) ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದಾರೆ.