ಕರೋನಾ ಸಾಂಕ್ರಾಮಿಕದ ತೀವೃತೆಗೆ ಧುರೀಣರೂ, ಬಡವರೂ ತತ್ತರಿಸುತ್ತಿದ್ದಾರೆ. ಸಚಿವರ ಕಛೇರಿಯವರೆಗೂ ಸಂಪರ್ಕವಿದ್ದರೂ ಆಸ್ಪತ್ರೆಗಳಲ್ಲಿ ಬೆಡ್ ಸಿಗದಂತಹ ಪರಿಸ್ಥಿತಿ ಬೆಂಗಳೂರಿನಲ್ಲಿ ಇದೆ.
ಕನ್ನಡದ ಹಿರಿಯ ಕವಿ ಡಾ. ಸಿದ್ದಲಿಂಗಯ್ಯ ಕೂಡಾ ಕರೋನಾ ಸೋಂಕಿಗೆ ತುತ್ತಾಗಿದ್ದು, ಬೆಡ್ ಸಿಗದೆ ಎರಡು ದಿನ ಅಲೆದಾಡಿದ್ದಾರೆ.
ಸಿದ್ದಲಿಂಗಯ್ಯ ಅವರಿಗೆ ಕರೋನಾ ಸೋಂಕು ಧೃಡಪಟ್ಟಿದ್ದು, ಅವರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಕೆಮ್ಮು ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸಿದ್ದಲಿಂಗಯ್ಯ ಭಾನುವಾರದಿಂದ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದಾರೆ. ಅದಾಗ್ಯೂ, ಬೆಡ್ ಸಿಕ್ಕಿರಲಿಲ್ಲ. ಎರಡು ದಿನದ ಅಲೆದಾಟದ ಬಳಿಕ ಕೊನೆಗೂ ದಲಿತ ಕವಿಗೆ ಕೊನೆಗೂ ಬೆಡ್ ದೊರೆತಿದೆ.
ಬಲ್ಲ ಮಾಹಿತಿಗಳ ಪ್ರಕಾರ, ಸಿದ್ದಲಿಂಗಯ್ಯ ಅವರಿಗೆ ಬೆಡ್ ಸಿಗಲು ಡಿಸಿಎಂ ಅಶ್ವಥ್ ನಾರಾಯಣ ಹಾಗೂ ಸಿಎಂ ಕಚೇರಿಯಿಂದಲೇ ಫೋನ್ ಕರೆ ಹೋಗಿದೆ. ನಾಡಿನ ಹಿರಿಯ ಕವಿಗೆ ಬೆಡ್ ಒದಗಿಸಲಾಗದ ಸರ್ಕಾರದ ವಿಫಲತೆಯ ಕುರಿತು ವರದಿಯಾಗುತ್ತಿದ್ದಂತೆ ಸ್ವತಃ ಸರ್ಕಾರವೇ ಎಚ್ಚೆತ್ತುಕೊಂಡಿದೆ ಎನ್ನಲಾಗಿದೆ. ಇದೀಗ ರಂಗದೊರೈ ಆಸ್ಪತ್ರೆಯಲ್ಲಿ ಕವಿ ಸಿದ್ದಲಿಂಗಯ್ಯ ದಾಖಲಾಗಿದ್ದಾರೆ.