ಜೂನ್ 20ಕ್ಕೆ ಪ್ರಧಾನಿ ಮೋದಿ ಬೆಂಗಳೂರಿಗೆ ಬಂದಿದ್ದರು. ಈ ಹಿನ್ನೆಲೆ ಪಾಲಕೆ ಮೋದಿ ಓಡಾಡುವ ರಸ್ತೆಗಳನ್ನೆಲ್ಲಾ ಚಂದ ಮಾಡಿ ಡಾಂಬರೀಕರಣ ಮಾಡಿತ್ತು. ಅದು ಕೂಡ 23 ಕೋಟಿ ವೆಚ್ಚದಲ್ಲಿ. ಅದು ಮೂರೇ ದಿನಕ್ಕೆ ಕಿತ್ತು ಬಂದಿತ್ತು ಕೂಡ. ಈಗ ಆ ಬಗ್ಗೆ PMO ಆಫೀಸ್ ಗೆ ಕೊಟ್ಟಿರುವ ವರದಿಯಲ್ಲಿ ಪಾಲಿಕೆ ಅಮೋಘ ಕಾರಣವೊಂದನ್ನು ನೀಡಿ ಮತ್ತೆ ನಗೆಪಾಟಲಿಗೆ ಈಡಾಗಿದೆ.
ತನ್ನ ತನ್ನಪ್ಪ ಮುಚ್ಚಿಟ್ಟು ವರದಿ ನೀಡಿತೇ ಬಿಬಿಎಂಪಿ ಅಧಿಕಾರಿಗಳು ?
ಕಳೆದ ಎಂಟು ದಿನದ ಹಿಂದೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ನಗರಕ್ಕೆ ಭೇಟಿ ಕೊಟ್ಟಿದ್ರು. ಇದ್ರಿಂದ ಪ್ರಧಾನಿಗಳನ್ನ ಮೆಚ್ಚಿಸಲು ಬಿಬಿಎಂಪಿ ಅಧಿಕಾರಿಗಳು ಲಕಾ ಲಕಾ ಅಂತ ಹೊಳೆಯುವಂತೆ ಒಂದಷ್ಟು ರಸ್ತೆಗಳನ್ನ ಸಿಂಗಾರ ಗೊಳಿಸಿದ್ರು. ಆದ್ರೆ ಮೋದಿ ದೆಹಲಿ ತಲಪುವುದರ ಒಳಗೆ ಡಾಂಬಾರು ಇಲ್ಲಿ ಕಿತ್ತುಬಂದಿತ್ತು. ರಸ್ತೆ ಕುಸಿದು ಹೋಗಿತ್ತು. ಈ ಮೂಲಕ ಬಿಬಿಎಂಪಿಯ ಕಳಪೆ ಕಾಮಗಾರಿಯ ಮುಖವಾಡ ಕಳಚಿತ್ತು. ಇದ್ರಿಂದ 23 ಕೋಟಿ ವೆಚ್ಚದ ಡಾಂಬರೀಕರಣ ಮೂರು ದಿನವೂ ಬಾಳಿಕೆ ಬರದಿದ್ದಿದ್ರಿಂದ ಬ್ರಾಂಡ್ ಬೆಂಗಳೂರು ಈಗ ಗುಂಡಿ ಬೆಂಗಳೂರಾಗಿ ಮಾರ್ಪಟ್ಟಿದೆ.
ಪ್ರಧಾನಿ ಮೋದಿ ಟಾರು ಕಿತ್ತು ಬಂದ ರಸ್ತೆಯಲ್ಲಿ ಸಂಚಾರ ಮಾಡಲೇ ಇಲ್ಲವಂತೆ !!
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಕಚೇರಿಯಿಂದಲೂ ವರದಿ ಕೇಳಿ ಸರ್ಕಾರಕ್ಕೆ ಸೂಚನೆ ಬಂದಿತ್ತು. ಇದಕ್ಕೆ ಬಿಬಿಎಂಪಿ ಆಯುಕ್ತರು ತನಿಖೆ ಮಾಡುವ ನಿರ್ಧಾರಕ್ಕೆ ಬಂದರು. ಈಗ ತನಖೆ ಮುಗಿದು, ವರದಿಯೂ ಸರ್ಕಾರದ ಮೂಲಕ ಪ್ರಧಾನಿ ಆಪ್ತ ಕಾರ್ಯಾಲಯಕ್ಕೆ ತಲುಪಿದೆ ಎನ್ನಲಾಗಿದೆ. ಆದರೆ ಬಿಬಿಎಂಪಿ ವರದಿಯಲ್ಲಿ ನಮ್ಮದೇನು ತಪ್ಪಿಲ್ಲ ಎಂದು ತಮ್ಮ ಹೆಗಲು ತಾವೇ ಮುಟ್ಟಿಕೊಂಡಿದೆ.
ಬಿಬಿಎಂಪಿಯಿಂದ ‘ಪ್ರಧಾನ ವರದಿ’.!!
ಪ್ರಧಾನಿ ಸಂಚಾರ ಮಾಡಿದ ರಸ್ತೆಯಲ್ಲಿ ಗುಂಡಿ ಬಿದ್ದಿಲ್ಲ. ಗುಣಮಟ್ಟದ ಡಾಂಬರ್ ಮಾಡಿದ್ದೀವಿ ಅಂತ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಜಲಮಂಡಳಿ ಪೈಪ್ ಅಳವಡಿಕೆ ಆಗಿದ್ದರಿಂದ ಡಾಂಬರ್ ಕಿತ್ತುಬಂದಿದೆ. ಕಳಪೆ ಕಾಮಗಾರಿ ಮಾಡಿದ ಮೂವರು ಇಂಜಿನಿಯರ್ ಗಳಿಗೆ ನೊಟೀಸ್ ನೀಡಲಾಗಿದೆ.ಇನ್ಮುಂದೆ ಹೀಗೆ ಆಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಿಬಿಎಂಪಿ ಯಾವತ್ತೂ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡುತ್ತಿದೆ ಎಂದು ವರದಿಯಲ್ಲಿ ಪಾಲಿಕೆ ಉಲ್ಲೇಖಿಸಿದೆ.
PMOಗೆ ನೀಡಿದ ವರದಿಯಲ್ಲಿ ಪಾಲಿಕೆ ಯೂಟರ್ನ್.. ಬಿಬಿಎಂಪಿಯಿಂದ ಹೊಸ ಡ್ರಾಮಾ !!
ಅದ್ಯಾವಾಗ ಮೋದಿಗಾಗಿ ಹಾಕಿದ ಟಾರು ಕಿತ್ತು ಬಂತೋ ಆಗಲೇ ಬಿಬಿಎಂಪಿ ಇದನ್ನು BWSSB ತಲೆ ಕಟ್ಟುವ ಕೆಲಸ ಮಾಡಿತ್ತು. ಆದರೆ BWSSB ಮಾತ್ರ ಇದನ್ನು ಮುಲಾಜಿಲ್ಲದೆ ತಳ್ಳಿ ಹಾಕಿತ್ತು. ಅದಾಗಿ ಮರು ದಿನವೇ ಮೂವರು ಅಧಿಕಾರಿಗಳಿಗೆ ಶೋಕಾಸ್ ನೀಡಿ ಕಾರಣ ಕೊಡುವಂತೆ ಹೇಳಿತ್ತು. ಇದಾದ ಮೇಲೆ ಗುತ್ತಿಗೆದಾರರಿಗೆ ಮೂರು ಲಕ್ಷ ರೂಪಾಯಿ ದಂಡ ಹಾಕಿದೆ ಎಂದು ಪ್ರಚಾರಪಡಿಸಿತ್ತು. ಅಲ್ಲದೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿತ್ತು. ಆದರೀಗ ಪಿಚ್ಚರ್ ನಲ್ಲಿ ಇಲ್ಲದ ಒಂದು ಕಾರಣ ಪ್ರಧಾನಿ ಮೋದಿ ಕಚೇರಿಗೆ ಕೊಡುವ ಪತ್ರದಲ್ಲಿ ಉಲ್ಲೇಖಿಸಿದೆ. ಪ್ರಧಾನಿ ಮೋದಿ ಆ ರಸ್ತೆಯಲ್ಲೇ ಸಂಚಾರ ಮಾಡಿಲ್ಲ ಎನ್ನುಚುದರೆ ಮೂಲಕ ಹೊಸ ಡ್ರಾಮ ಶುರುಮಾಡಿದೆ.