ವೈದ್ಯಕೀಯ ಶಿಕ್ಷಣ (Medical Education) ಪಡೆಯಲು ಹೆಚ್ಚಿನ ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳು (Indian Students) ವಿದೇಶಕ್ಕೆ ಹೋಗುತ್ತಿರುವುದಕ್ಕೆ ಹಿಂದಿನ ಸರ್ಕಾರಗಳು ಕಾರಣವೆಂದು ಪ್ರಧಾನಿ ನರೇಂದ್ರ ಮೋದಿ (PM Narendra modi) ಆರೋಪಿಸಿದ್ದಾರೆ. ತಮ್ಮ ಸರ್ಕಾರವು ಹಿಂದಿನ ಪ್ರಮಾದಗಳನ್ನು ಸರಿಪಡಿಸುತ್ತಿದೆ, ವೈದ್ಯಕೀಯ ಕಾಲೇಜುಗಳ (Medical College) ಸಂಖ್ಯೆಯನ್ನು ಹೆಚ್ಚಿಸಲು ಕೆಲಸ ಮಾಡುತ್ತಿದೆ, ಇದರಿಂದಾಗಿ ವಿದ್ಯಾರ್ಥಿಗಳು ದೇಶದೊಳಗೆ ವೈದ್ಯಕೀಯ ಸೀಟುಗಳನ್ನು ಪಡೆಯಬಹುದು ಎಂದು ಪ್ರತಿಪಾದಿಸಿದ್ದಾರೆ.
ಯುದ್ಧ ಪೀಡಿತ ಉಕ್ರೇನ್ನಿಂದ (Ukraine) ಹಿಂದಿರುಗಿದ ಉತ್ತರ ಪ್ರದೇಶದ (Uttar Pradesh) ವಿವಿಧ ಭಾಗಗಳ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ಮೋಸಿ, ʼಉಕ್ರೇನ್ನಲ್ಲಿ ಕಷ್ಟಗಳನ್ನು ಎದುರಿಸಿದ ಬಳಿಕ ತಮ್ಮ ಕೋಪವನ್ನು ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ಪ್ರಧಾನೊ ಮೋದಿ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.
ಈ ಬಿಕ್ಕಟ್ಟಿನಲ್ಲಿ ಅವರು ಕೋಪಗೊಳ್ಳುವುದು ಸಹಜ ಎಂದು ನಾನು ಭಾವಿಸುತ್ತೇನೆ. ರಷ್ಯಾದಿಂದ ದಾಳಿಗೊಳಗಾದ ಉಕ್ರೇನ್ನಿಂದ ಭಾರತೀಯ ನಾಗರಿಕರನ್ನು, ವಿದ್ಯಾರ್ಥಿಗಳನ್ನು ಕರೆತರಲು ಸರ್ಕಾರ “ಆಪರೇಷನ್ ಗಂಗಾ” (Operation Ganga) ಪ್ರಾರಂಭಿಸಿದೆ. ಅವರು ಇನ್ನು ಮುಂದೆ ಉದ್ರೇಕಗೊಳ್ಳದೆ ಕಾರ್ಯಾಚರಣೆಯ ವಿಸ್ತಾರವನ್ನು ಅರ್ಥಮಾಡಿಕೊಂಡಾಗ, ಅವರು ತಮ್ಮ ವಾತ್ಸಲ್ಯವನ್ನು ತೋರಿಸುತ್ತಾರೆ ಎಂದು ಪ್ರಧಾನಿ ಹೇಳಿದ್ದಾರೆ.
“ವೈದ್ಯಕೀಯ ಶಿಕ್ಷಣ ನೀತಿಗಳು ಮೊದಲೇ ಸರಿಯಾಗಿದ್ದರೆ, ನೀವು ವಿದೇಶಕ್ಕೆ ಹೋಗಬೇಕಾಗಿರಲಿಲ್ಲ, ಯಾವುದೇ ಪೋಷಕರು ತಮ್ಮ ಚಿಕ್ಕ ವಯಸ್ಸಿನಲ್ಲಿ ತಮ್ಮ ಮಕ್ಕಳು ವಿದೇಶಕ್ಕೆ ಹೋಗಬೇಕೆಂದು ಬಯಸುವುದಿಲ್ಲ” ಎಂದು ಮೋದಿ ಹೇಳಿದ್ದಾರೆ.
ತಮ್ಮ ಸರ್ಕಾರ ಹಿಂದಿನ ತಪ್ಪುಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದು, ಮೊದಲು 300 ರಿಂದ 400 ವೈದ್ಯಕೀಯ ಕಾಲೇಜುಗಳಿದ್ದವು. ಈಗ ಅವು ಸುಮಾರು 700 ಇವೆ. ಈ ಹಿಂದೆ 80,000-90,000 ಸೀಟುಗಳು ಲಭ್ಯವಿದ್ದವು, ಈಗ ಅವು 1.5 ಲಕ್ಷಕ್ಕೆ ಏರಿದೆ ಎಂದು ಅವರು ಹೇಳಿದ್ದಾರೆ.
“ಪ್ರತಿ ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು ನಿರ್ಮಿಸುವುದು ನನ್ನ ಗುರಿ. ಬಹುಶಃ, ಕಳೆದ 70 ವರ್ಷಗಳಲ್ಲಿ ಉಂಟಾದ ವೈದ್ಯರಿಗಿಂತ ಹೆಚ್ಚು ವೈದ್ಯರು 10 ವರ್ಷಗಳಲ್ಲಿ ಉತ್ಪಾದನೆಯಾಗುತ್ತಾರೆ,” ಎಂದು ಅವರು ಹೇಳಿದ್ದಾರೆ.
ಯುವ ವಿದ್ಯಾರ್ಥಿಗಳು ವಿದೇಶಕ್ಕೆ ಪ್ರಯಾಣಿಸಬೇಕಾಗಿಲ್ಲ ಮತ್ತು ಅವರ ಕುಟುಂಬಗಳು ಅಂತಹ ಒತ್ತಡಕ್ಕೆ ಒಳಗಾಗಬೇಕಾಗಿಲ್ಲವಾದ್ದರಿಂದ ಇದು ಸಾಧಾರಣ ವಿಷಯವಲ್ಲ ಎಂದು ಅವರು ಹೇಳಿದ್ದಾರೆ.
“ಇಷ್ಟು ಚಿಕ್ಕ ವಯಸ್ಸಿನಲ್ಲಿ ನೀವು ದೂರದ ಸ್ಥಳದಲ್ಲಿ ಒಬ್ಬಂಟಿಯಾಗಿ ಜೀವನದಲ್ಲಿ ಇಂತಹ ಅನುಭವವನ್ನು ಅನುಭವಿಸಬೇಕಾಯಿತು. ನೀವು ಅನುಭವಿಸಿದ ಮಾನಸಿಕ ಸ್ಥಿತಿಯನ್ನು ನಾನು ಊಹಿಸಬಲ್ಲೆ. ಈಗ ನಾವು ಜನರನ್ನು ಸರಿಯಾಗಿ ಸ್ಥಳಾಂತರಿಸಲು ಸಮರ್ಥರಾಗಿದ್ದೇವೆ” ಎಂದು ಅವರು ಹೇಳಿದ್ದಾರೆ.
ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಬಿಜೆಪಿ ಪ್ರಚಾರದ ಭಾಗವಾಗಿ ಉತ್ತರಪ್ರದೇಶ ರಾಜ್ಯ ಪ್ರವಾಸದಲ್ಲಿರುವ ಮೋದಿ ಜೊತೆಗೆ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ತಮ್ಮ ಅನುಭವವನ್ನು ಹಂಚಿಕೊಂಡ ಕೆಲವು ವಿದ್ಯಾರ್ಥಿಗಳು, ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದ ನಂತರ ಅವರು ಎಲ್ಲಾ ಭರವಸೆಗಳನ್ನು ತೊರೆದಿದ್ದಾರೆ ಮತ್ತು ಸರ್ಕಾರದ ಬೆಂಬಲವಿಲ್ಲದೆ ಹಿಂತಿರುಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇನ್ನು ಕೆಲವು ವಿದ್ಯಾರ್ಥಿಗಳು ತಾವು ಯಾವುದೇ ತೊಂದರೆಗಳನ್ನು ಎದುರಿಸಲಿಲ್ಲ ಮತ್ತು ಅಲ್ಲಿನ ಭಾರತೀಯ ರಾಯಭಾರಿ ಕಚೇರಿಯಿಂದ ಸಾಕಷ್ಟು ಸೌಲಭ್ಯಗಳನ್ನು ಪಡೆದಿದ್ದೇವೆ ಎಂದು ಹೇಳಿದ್ದಾರೆ.
“ದಾಳಿ ಪ್ರಾರಂಭವಾದ ನಂತರ, ನಾನು ಹಿಂತಿರುಗಲು ಸಾಧ್ಯವಿಲ್ಲ ಎಂದು ತೋರುತ್ತಿದೆ, ಹತ್ತಿರದಿಂದ ಸಾವನ್ನು ನೋಡಿದೆ. ನಾನು ಭಾರತೀಯ ಮತ್ತು ನೀವು ನಮ್ಮ ಪ್ರಧಾನಿಯಾಗಿರುವುದಕ್ಕೆ ಹೆಮ್ಮೆಪಡುತ್ತೇನೆ” ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.