ಬಿಜೆಪಿಯ (Bjp) ಶಾಸಕರನ್ನು ಸದನದಿಂದ ಒಂದು ವರ್ಷ ಅಮಾನತುಗೊಳಿಸಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ (R ashok) ನೇತೃತ್ವದಲ್ಲಿ ಶಾಸಕರು ಇಂದು ಸ್ಚೀಕರ್ ರನ್ನ ಭೇಟಿ ಮಾಡಿದ್ದಾರೆ.

ಈ ಬಗ್ಗೆ ವಿಧಾನಸೌಧದಲ್ಲಿ ಸ್ಚೀಕರ್ ಯು.ಟಿ.ಖಾದರ್ (UT Khadar) ಮಾತನಾಡಿದ್ದು,ಸ್ವೀಕರ್ ಮತ್ತು ಶಾಸಕರ ಆತ್ಮೀಯ ಸಂಬಂಧ ಇದೆ.ಪ್ರತಿಪಕ್ಷದವರು ಕೂಡ ನನ್ನ ಆತ್ಮೀಯ ಮಿತ್ರರೇ. ಬೇರೆ ಬೇರೆ ವಿಚಾರಗಳಿವೆ ನಾವು ಚರ್ಚೆ ಮಾಡುತ್ತೇವೆ ಎಂದಿದ್ದಾರೆ.
ಇನ್ನು ಚರ್ಚೆ ಮಾಡಲು ಎಲ್ಲರಿಗೂ ಅವಕಾಶ ಇದೆ.ಶಾಸಕರು ಸ್ವೀಕರ್ ಜೊತೆಗೆ ನೂರಾರು ವಿಚಾರ ಚರ್ಚೆ ಮಾಡ್ತಾರೆ.ಪ್ರತಿಪಕ್ಷದವರು ಆತ್ಮೀಯರು,ನಾನು ಅವ್ರ ಮಿತ್ರ.ನಮಗೆ ಗೊತ್ತಿಲ್ಲ ಯಾವ ವಿಚಾರಕ್ಕೆ ಭೇಟಿ ಮಾಡ್ತಾರೆ ಅಂತ .. ಚರ್ಚೆ ಮಾಡ್ತೀವಿ ಎಂದಿದ್ದಾರೆ.