ಇನ್ನು ಕೆಲವೇ ತಿಂಗಳುಗಳಲ್ಲಿ ತೆರವಾಗಲಿರುವ ಭಾರತದ ರಾಷ್ಟ್ರಪತಿ (president of India) ಹುದ್ದೆಗೆ ಹೊಸ ಆಯ್ಕೆ ಯಾರಾಗಲಿದ್ದಾರೆ ಎನ್ನುವ ಚರ್ಚೆ ಬಿಹಾರ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ (president of India) ಅವರ ಹೆಸರು ಸದ್ಯ ಮುಂಚೂಣಿಯಲ್ಲಿದೆ.
ಶರದ್ ಪವಾರ್ (Sharad Pawar )ನೇತೃತ್ವದ ತಮ್ಮ ಪಕ್ಷವು ಬಿಜೆಪಿಯೊಂದಿಗಿನ ಸಖ್ಯದಿಂದ ದೂರವಾದರೆ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಜೆಡಿಯು ನಾಯಕನನ್ನು ಬೆಂಬಲಿಸಲು ಸಿದ್ಧವಾಗಿದೆ ಎಂದು ಮಹಾರಾಷ್ಟ್ರ ಎನ್ಸಿಪಿ (Maharashtra NCP ) ನಾಯಕ ನವಾಬ್ ಮಲಿಕ್ ಹೇಳಿಕೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ಈ ಕುರಿತು ಪತ್ರಕರ್ತರು ನಿತೀಶ್ ಕುಮಾರ್ ಅವರನ್ನು ಸಂಪರ್ಕಿಸಿದಾಗ, “ಈ ವಿಷಯ ನನ್ನ ಮನಸ್ಸಿನಲ್ಲಿಲ್ಲ” ಎಂದು ಕೈ ಜೋಡಿಸಿ ಉತ್ತರಿಸಿದ್ದಾರೆ ಎಂದು the week ವರದಿ ಮಾಡಿದೆ.
ಲೋಕಸಭೆಯಲ್ಲಿ ಬಹುಮತದೊಂದಿಗೆ ಕೇಂದ್ರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಹಾಗೂ ಬಿಹಾರದ ರಾಜ್ಯ ಬಿಜೆಪಿ ಘಟಕ ಇದುವರೆಗೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಾಷ್ಟ್ರಪತಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಇತರ ಪಕ್ಷಗಳ ಬೆಂಬಲ ಹೆಚ್ಚಾಗಿ ಅವಲಂಬಿಸಬೇಕಾಗಾಗುತ್ತದೆ. ಯಾರ ಹೆಸರನ್ನು ಅದು ಪ್ರಕಟಿಸಲಿದೆ ಎಂಬುದು ಕೂಡ ಕುತೂಹಲ ಸಂಗತಿ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ram Nath Kovind ) ಅವರ ಅಧಿಕಾರಾವಧಿ ಜುಲೈನಲ್ಲಿ ಕೊನೆಗೊಳ್ಳಲಿದೆ. ರಾಷ್ಟ್ರಪತಿ ಆಯ್ಕೆ ವಿಚಾರದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗ ಸಭೆಗಳ ಜೊತೆಗೆ ಸಂಸತ್ತಿನ ಎರಡೂ ಸದನಗಳ ಸದಸ್ಯರನ್ನು ಒಳಗೊಂಡಿರುತ್ತದೆ. ನಿತೀಶ್ ಕುಮಾರ್ ಅವರ ಕಟ್ಟಾ ಪ್ರತಿಸ್ಪರ್ಧಿ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರು ಸ್ಥಾಪಿಸಿ, ನೇತೃತ್ವ ವಹಿಸಿರುವ ಆರ್ಜೆಡಿಯಲ್ಲಿ (RJD) ಈ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಲಾಲು ಪ್ರಸಾದ್ ಅವರ ಹಿರಿಯ ಮಗ ತೇಜ್ ಪ್ರತಾಪ್ ಯಾದವ್, “ಕೊಲೆ ಆರೋಪಿ” ಉನ್ನತ ಹುದ್ದೆಗೆ ಹೇಗೆ ಆಯ್ಕೆಯಾಗಬಹುದು ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ನಿತೀಶ್ ಕುಮಾರ್ ಅವರನ್ನು ಸುಪ್ರೀಂ ಕೋರ್ಟ್ (Supreme Court) ಖುಲಾಸೆಗೊಳಿಸಿದ ಸುಮಾರು ಮೂರು ದಶಕಗಳಷ್ಟು ಹಳೆಯ ಪ್ರಕರಣವನ್ನು ಅವರು ಉಲ್ಲೇಖಿಸಿ ಮಾತನಾಡಿದ್ದಾರೆ.
ಮುಂದುವರೆದು, ಮೇವು ಹಗರಣದ (Fodder Scam )ಪ್ರಕರಣದಲ್ಲಿ ತಮ್ಮ ತಂದೆಯ ಶಿಕ್ಷೆಗೆ ಅಸಮಾಧಾನಗೊಂಡಿರುವ ಅವರು “ಲಾಲು ಜಿ ಮುಂದಿನ ಪ್ರಧಾನಿಯಾಗುತ್ತಾರೆ” ಎಂದು ಖಾರವಾಗಿ ಘೋಷಿಸಿದ್ದಾರೆ.
ಆರ್ಜೆಡಿ ವಕ್ತಾರರಾದ ಮೃತ್ಯುಂಜಯ್ ತಿವಾರಿ ಮತ್ತು ಶಕ್ತಿ ಯಾದವ್ (Mrityunjay Tiwari and Shakti Yadav) ಹೆಚ್ಚು ಈ ಬಗ್ಗೆ ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದು, ಒಬ್ಬ ಬಿಹಾರಿಯಾಗಿ, ರಾಜ್ಯದ ನಾಯಕರೊಬ್ಬರು ರಾಷ್ಟ್ರಪತಿಯಾದರೆ ನಾವು ಹೆಮ್ಮೆಪಡುತ್ತೇವೆ ಎಂದು ತಿವಾರಿ ಹೇಳಿದ್ದಾರೆ. ಆದರೆ ನಿತೀಶ್ ಕುಮಾರ್ ಹಾಗೂ ಲಾಲು ಪ್ರಧಾನಿ ಅಭ್ಯರ್ಥಿಗಳಂತೆ ಕಂಡರೂ ಬಿಜೆಪಿಯೊಂದಿಗೆ (BJP) ಮರುಹೊಂದಾಣಿಕೆಯ ನಂತರ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಜೆಡಿಯು ನಾಯಕ 2012 ರಲ್ಲಿ ಎನ್ಡಿಎ (NDA) ಜೊತೆಗಿದ್ದರೂ ಸಹ ಪ್ರಣಬ್ ಮುಖರ್ಜಿ ಅವರನ್ನು ಬೆಂಬಲಿಸಿದ್ದರು ಮತ್ತು 2017 ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದ ಕೋವಿಂದ್ ಅವರನ್ನು ಬೆಂಬಲಿಸಿದರು. ಆದರೆ ಅವರು ಆಗ ಆರ್ಜೆಡಿ ಮತ್ತು ಕಾಂಗ್ರೆಸ್ (Congress) ಒಳಗೊಂಡ ಮಹಾಮೈತ್ರಿಕೂಟದಲ್ಲಿದ್ದರು ಎಂಬುದನ್ನು ಇಲ್ಲಿ ಗಮನಿಸಬಹುದು.