Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಮೈಸೂರು ಪೇಂಟ್ ಆಧುನೀಕರಣಕ್ಕೆ ಅಗತ್ಯ ನೆರವು: ಸಿಎಂ ಬೊಮ್ಮಾಯಿ

ಪ್ರತಿಧ್ವನಿ

ಪ್ರತಿಧ್ವನಿ

November 29, 2022
Share on FacebookShare on Twitter

ಮೈಸೂರು ಪೇಂಟ್ ಆಧುನೀಕರಣ, ವಿಸ್ತರಣೆ ಹಾಗೂ ಸಾಮಥ್ರ್ಯ ಆಭಿವೃದ್ಧಿಗೆ ಸರ್ಕಾರ ಅಗತ್ಯ ನೆರವು  ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಕೋಲಾರದಲ್ಲಿ ನಿಲ್ಲಬೇಕೋ ಓಡಿ ಹೋಗಬೇಕೋ ನನಗೆ ಬಿಟಿದ್ದು, ಯಡುಯೂರಪ್ಪ ಯಾರು ಹೇಳೋಕೆ : Siddaramaiah | yediyurappa

Nalin Kumar Kateel..ಒಬ್ಬ ವಿದೂಷಕ : Siddaramaiah

Rameshjarkiholi Video ಬಿಡುಗಡೆ ಮಾಡಿದ್ದು D K Shivakumar ಅಂತೆ ..ನನಗೆ ಏನು ಗೊತ್ತಿಲ್ಲ : Siddaramaiah

ನಮ್ಮ ಹೆಮ್ಮೆಯ ಸಂಸ್ಥೆಯಾದ ಇದು  ಪೈಪೋಟಿಯನ್ನು ಎದುರಿಸುತ್ತಿದೆ. ಖಾಸಗಿ ವಲಯದಲ್ಲಿ ಬಹಳಷ್ಟು ಪೈಪೋಟಿ ಇದೆ. ಸರ್ಕಾರಿ ವಲಯದಲ್ಲಿ ಸಾಕಷ್ಟು ಬೆಂಬಲವಿರುವುದರಿಂದ ಲಾಭ ಮಾಡುತ್ತಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ವಿಸ್ತರಣೆಯಾಗಲು ಆಧುನೀಕರಣ, ತಂತ್ರಜ್ಞಾನ, ಮಾರುಕಟ್ಟೆ ತಂತ್ರಗಾರಿಕೆಯ ಅವಶ್ಯಕತೆ ಇದೆ ಎಂದಿದ್ಧಾರೆ.

ಗುಣಮಟ್ಟವನ್ನು ಕಾಪಾಡಿಕೊಂಡಿದ್ದರಿಂದ ಪೈಪೋಟಿ ಎದುರಿಸಲು ಸಾಧ್ಯವಾಗಿದೆ ಮಹಾರಾಜರ ಕಾಲದಲ್ಲಿ ಮನುಷ್ಯನಿಗೆ ಅಗತ್ಯವಿರುವ ಎಲ್ಲವನ್ನೂ ತಯಾರು ಮಾಡುವ ಕೆಲಸವಾಗಿತ್ತು.  ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ, ಪೇಪರ್ ಸೋಪ್ ಅಂಡ್ ಡಿಟರ್ಜೆಂಟ್ ವರೆಗೂ ಎಲ್ಲವೂ ತಯಾರಾಗುತ್ತಿತ್ತು. ಕೆಲವು ಸಂಸ್ಥೆಗಳು ಜಾಗತೀಕರಣವಾದ ಸಂದರ್ಭದಲ್ಲಿಯೂ ಕೂಡ ನಮ್ಮ ಗುಣಮಟ್ಟವನ್ನು ಕಾಪಾಡಿಕೊಂಡಿದ್ದರಿಂದ ಪೈಪೋಟಿಯನ್ನು ಎದುರಿಸಿ ನಿಲ್ಲಲು ಸಾಧ್ಯವಾಗಿದೆ. ಹೊಸ ತಂತ್ರಜ್ಞಾನ ಬಳಕೆ ಮಾಡುವ ಅನಿವಾರ್ಯತೆ ಹಾಗೂ ಅವಶ್ಯಕತೆ ಇದೆ ಎಂದು ಮಾತನಾಡುವ ವೇಳೆ ಹೇಳಿದ್ದಾರೆ.  

ವಾಣಿವಿಲಾಸ ಸಾಗರದಲ್ಲಿ ಮಹಾರಾಜರ ಪ್ರತಿಮೆ ಸ್ಥಾಪನೆ


88 ವರ್ಷಗಳ ನಂತರ ವಾಣಿವಿಲಾಸ ಸಾಗರ ಅಣೆಕಟ್ಟು ತುಂಬಿದೆ.  ಅಂದು ಪಶ್ಚಿಮ ಘಟ್ಟದಿಂದ ಬರುವ ನೀರನ್ನು ಹಿಡಿದಿಟ್ಟ ಕಾರಣದಿಂದ ವಾಣಿ ವಿಲಾಸ ಸಾಗರ ತುಂಬಿರಲಿಲ್ಲ.  ಭದ್ರಾ ಮೇಲ್ದಂಡೆ ಯೋಜನೆಯಿಂದ ವಾಣಿವಿಲಾಸಸಾಗರ 130 ಅಡಿಗಿಂತ ಹೆಚ್ಚು ತುಂಬಿದೆ. ಆ ಸಂದರ್ಭದಲ್ಲಿಯೂ ನಾವು  ಮಹಾರಾಜರನ್ನು ಸ್ಮರಿಸಿದೆವು. ಅವರ ಪ್ರತಿಮೆಗಳನ್ನು ಅಲ್ಲಿ ಸ್ಥಾಪಿಸಲಾಗುತ್ತಿದೆ. ಆ ಸಂದರ್ಭದಲ್ಲಿ ಮಹಾರಾಜರನ್ನು ಆಹ್ವಾನಿಸುವ ತೀರ್ಮಾನ ಮಾಡಲಾಗಿದೆ. ಕೆಆರ್‍ಎಸ್  ರೀತಿಯಲ್ಲಿಯೇ ಇಡೀ ಮಧ್ಯ ಕರ್ನಾಟಕಕ್ಕೆ ನೀರು ಒದಗಿಸುವ ಗ್ರಿಡ್ ಇದಾಗಿದೆ. ಈ ಎರಡೂ ಚಿರಸ್ಥಾಯಿಯಾಗಿ ರೈತರಿಗೆ ವರದಾನವಾಗಿರುವ ಅಣೆಕಟ್ಟುಗಳನ್ನು ಉಳಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಕೆ.ಆರ್.ಎಸ್ ಅದ್ಭುತ ಕಟ್ಟಡ


75 ವರ್ಷಗಳ ಆಚರಣೆಯ ಸಂದರ್ಭದಲ್ಲಿ ಕೆ.ಆರ್.ಎಸ್ ಗೇಟುಗಳಿಗೆ ಹೊಸ ಸ್ಲೂಯಿಸ್ ಗೇಟುಗಳನ್ನು ಅಳವಡಿಸುವ ಅವಕಾಶ ನನಗೆ ದೊರೆಯಿತು. 300 ಕ್ಯೂಸೆಕ್ಸ್ ನೀರು ಹರಿದುಹೋಗುತ್ತಿತ್ತು. ಮಹಾರಾಜರು ಕಟ್ಟಿರುವುದನ್ನು ಉಳಿಸಲು  ಸರ್ಕಾರಿ ವಲಯದಲ್ಲಿ ಆಗದೇ ಇರುವುದನ್ನು ಖಾಸಗಿ ವಲಯದ ಪರಿಣಿತರಿಂದ ಗೇಟ್‍ಗಳನ್ನು ಅಳವಡಿಸಲಾಗಿದೆ. ಈಗ ಒಂದು ಹನಿಯೂ ಸೋರಿಕೆಯಾಗುತ್ತಿಲ್ಲ. ನೂರಕ್ಕೂ ಹೆಚ್ಚು ಗೇಟುಗಳನ್ನು ಅಳವಡಿಸಲಾಗುತ್ತಿದೆ. ಇದು ಕನಿಷ್ಠ 50 ವರ್ಷಗಳ ಕಾಲ ಬಾಳಿಕೆ ಬರಲಿದೆ.  ಕಟ್ಟಡ ಮಾತ್ರ ಒಂದು ಸಾವಿರ ವರ್ಷವಾದರೂ ಉಳಿಯುವ ಅದ್ಭುತ ಕಟ್ಟಡ. ಸಿಮೆಂಟ್ ಬಳಕೆಯಿಲ್ಲದೇ ಗಾರೆ ಬಳಸಿ ಕಟ್ಟಲಾಗಿದೆ.  ಮೈಸೂರು ಪೇಯಿಂಟ್ ಮತ್ತು ವಾರ್ನಿಶ್ ಉಳಿಯುವ ಕೆಲಸ ಮಾಡುತ್ತೇವೆ ಎಂ
ದು ಪುನರುಚ್ಚರಿಸಿದ್ದಾರೆ.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

B. S. Yediyurappa|ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಎಲ್ಲಾ ಕ್ಷೇತ್ರ ಗೆಲ್ಲಲು ಚಿಂತನೆ ನಡೆದಿದೆ.
ರಾಜಕೀಯ

B. S. Yediyurappa|ವಿಶೇಷವಾಗಿ ಬೆಳಗಾವಿ ಜಿಲ್ಲೆಯ ಎಲ್ಲಾ ಕ್ಷೇತ್ರ ಗೆಲ್ಲಲು ಚಿಂತನೆ ನಡೆದಿದೆ.

by ಪ್ರತಿಧ್ವನಿ
January 30, 2023
ರಾಜಕೀಯ

KARNATAKA CONGRESS ‘ಪ್ರಜಾ ಧ್ವನಿ’ ಯಾತ್ರೆಯ ”ದೊಡ್ಡಬಳ್ಳಾಪುರ ‘ ಸಮಾವೇಶ’ PrajaDhwaniYatre

by ಪ್ರತಿಧ್ವನಿ
January 24, 2023
ಐಸಿಸಿ ಶ್ರೇಯಾಂಕ: ನಂಬರ್‌ 1 ಬೌಲರ್‌ ಆಗಿ ಹೊರಹೊಮ್ಮಿದ ಮಹಮ್ಮದ್‌ ಸಿರಾಜ್
Top Story

ಐಸಿಸಿ ಶ್ರೇಯಾಂಕ: ನಂಬರ್‌ 1 ಬೌಲರ್‌ ಆಗಿ ಹೊರಹೊಮ್ಮಿದ ಮಹಮ್ಮದ್‌ ಸಿರಾಜ್

by ಪ್ರತಿಧ್ವನಿ
January 25, 2023
ramya|ಮೋಹಕ ತಾರೆ ರಮ್ಯಾ ಯಾವ ಕ್ಯಾಮರಾ ಕಣ್ಣಿಗೂ ಸಿಗುತ್ತಿಲ್ಲ
ಸಿನಿಮಾ

ramya|ಮೋಹಕ ತಾರೆ ರಮ್ಯಾ ಯಾವ ಕ್ಯಾಮರಾ ಕಣ್ಣಿಗೂ ಸಿಗುತ್ತಿಲ್ಲ

by ಪ್ರತಿಧ್ವನಿ
January 27, 2023
Jaggesh|ಮೋದಿ ಕೆಳಗೆ ಕೆಲಸ ಮಾಡೋದು ನಮ್ಮ ಭಾಗ್ಯ Modiji
ರಾಜಕೀಯ

Jaggesh|ಮೋದಿ ಕೆಳಗೆ ಕೆಲಸ ಮಾಡೋದು ನಮ್ಮ ಭಾಗ್ಯ Modiji

by ಪ್ರತಿಧ್ವನಿ
January 30, 2023
Next Post
ಬಿಜೆಪಿಗೆ ಸುಮಲತಾ ಆಪ್ತರ ಸೇರ್ಪಡೆ; ಸಂಸದರು ಬಿಜೆಪಿ ಸೇರೋದು ಯಾವಾಗ ?

ಬಿಜೆಪಿಗೆ ಸುಮಲತಾ ಆಪ್ತರ ಸೇರ್ಪಡೆ; ಸಂಸದರು ಬಿಜೆಪಿ ಸೇರೋದು ಯಾವಾಗ ?

ಉಡುಪಿ; ವಿದ್ಯಾರ್ಥಿಯನ್ನು ಕಸಬ್ ಎಂದು ಸಂಬೋಧಿಸಿದ ಶಿಕ್ಷಕ ಅಮಾನತು

ಉಡುಪಿ; ವಿದ್ಯಾರ್ಥಿಯನ್ನು ಕಸಬ್ ಎಂದು ಸಂಬೋಧಿಸಿದ ಶಿಕ್ಷಕ ಅಮಾನತು

ವಿಜಯ್ ಹಜಾರೆ ಟ್ರೋಫಿ; ಸೆಮೀಸ್‌ಗೆ ಕರ್ನಾಟಕ ಲಗ್ಗೆ

ವಿಜಯ್ ಹಜಾರೆ ಟ್ರೋಫಿ; ಸೆಮೀಸ್‌ಗೆ ಕರ್ನಾಟಕ ಲಗ್ಗೆ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist