ಜುಲೈ 18ರಂದು ನಡೆಯುವ ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ರಾಷ್ಟ್ರ ರಾಜಕಾರಣದಲ್ಲಿ ಈಗಾಗಲೇ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತಿದ್ದು ಈ ಮಧ್ಯ ಎಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ NDA ಅಭ್ಯರ್ಥಿ ದ್ರೌಪದಿ ಮುರ್ಮುರನ್ನು ಬೆಂಬಲಿಸಲು ವಿರೋಧ ಪಕ್ಷಗಳು ಯೋಜಿಸಿರಬಹುದು ಎಂದಿದ್ದಾರೆ.
ಬಿಜೆಪಿ ಅಭ್ಯರ್ಥಿ ಮುರ್ಮುಗೆ ಗೆಲ್ಲಲು ಉತ್ತಮ ಅವಕಾಶಗಳನ್ನು ಹೊಂದಿದ್ದು ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾವಣೆಯಾದ ನಂತರ ಎನ್ಡಿಎ ಸಂಖ್ಯಾಬಲ ಜಾಸ್ತಿಯಾಗಿದೆ ಒಮ್ಮತ್ತದ ಅಭ್ಯರ್ಥಿಯೂ ಯಾವಾಗಲೂ ದೇಶಕ್ಕೆ ಉತ್ತಮ ಎಂದು ಒತ್ತಿ ಹೇಳಿದ್ದಾರೆ.
ಬಿಜೆಪಿ ಮುರ್ಮು ಹೆಸರು ಘೋಷಿಸುವ ಮೊದಲು ನಮ್ಮನ್ನು ಸಲಹೆ ಕೇಳಿದ್ದರೆ ಹೆಚ್ಚಿನ ಹಿತಾಸಕ್ತಿಗಳನ್ನು ಗಮದಲ್ಲಿಟ್ಟುಕೊಂಡು ನಾವು ಅದನ್ನು ಪರಿಗಣಿಸುತ್ತಿದ್ದೇವು ಎಂದಿದ್ದಾರೆ.
ವಿರೋಧ ಪಕ್ಷಗಳ ತೀರ್ಮಾಣವನ್ನ ಗೌರವಿಸಿ ನಾನು ಅದರಂತೆಯೇ ನಡೆಯುತ್ತೇನೆ ಎಂದು ತಿಳಿಸಿದ್ದಾರೆ.