ಮಹಾರಾಷ್ಟ್ರ ರಾಜಕಾರಣದಲ್ಲಿ ತೀಓವ್ರ ಗದ್ದಲ ಎಬ್ಬಿಸಿರುವ ಹನುಮಾನ್ ಚಾಲೀಸಾ ಪಠಣೆ ವಿವಾದ ತಿರುವು ಪಡೆದುಕೊಂಡಿದ್ದು ಪಕ್ಷೇತರ ಶಾಸಕ ರವಿರಾಣಾ ಹಾಗೂ ಅವರ ಪತ್ನಿ ಸಂಸದೆ ನವನೀತ್ ರಾಣಾರ ವಿರುದ್ದ ಮಹಾರಾಷ್ಟ್ರ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ ಮತ್ತು ಬಾಂದ್ರಾ ಮ್ಯಾಜಿಸ್ರ್ಟೇಟ್ ನ್ಯಾಯಾಲಯ ಇಬ್ಬರನ್ನು 14ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಸಂಸದೆ ನವನಿತ್ರನ್ನು ಬೈಕುಲ್ಲಾ ಜೈಲಿನಲ್ಲಿ ಇರಿಸಲಾಗಿದ್ದು ಪತಿ ರವಿ ರಾಣಾರನ್ನು ತಲೀಜಾ ಜೈಲ್ಲಿನಲ್ಲಿ ಇರಿಸಲಾಗಿದೆ. ಈ ಮೊದಲು ದಂಪತಿಗಳನ್ನು ಅರ್ಥರ್ ರೋಡಿನ ಜೈಲಿನಲ್ಲಿ ಇರಿಸಲು ನಿರ್ಧರಿಸಲಾಗಿತ್ತು ಆದರೆ, ಅವರ ಬೆಂಬಲಿಗರು ಹಾಘು ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಸೇರಿದ ಕಾರಣ ದಂಪತಿಗಳನ್ನು ಪ್ರತ್ಯೇಕವಾಗಿ ಬೇರೆ ಬೇರೆ ಜೈಲ್ಲಿನಲ್ಲಿ ಇರಿಸಲಾಗಿದೆ.
ಈ ಮೊದಲು ರಾಣಾ ದಂಪತಿಗಳು ಮುಖ್ಯಮಂತ್ರಿ ಉದ್ದವ್ ಠಾಕ್ರೆ ನಿವಾಸದೆದುರು ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿದ್ದರು ಇದಕ್ಕೆ ರಾಜ್ಯಾದ್ಯಂತ ತೋವ್ರ ಆಕ್ಷೇಪಗಳು ವ್ಯಕ್ತವಾಗಿದ್ದವು. ಪ್ರಧಾನಿ ಮೋದಿ ಮುಂಬೈ ಭೇಟಿ ಹಿನ್ನೆಲೆಯಲ್ಲಿ ನಿರ್ಧಾರ ಕೈ ಬಿಟ್ಟ ರಾಣಾ ದಂಪತಿಯನ್ನಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಪೊಲೀಸರು ಬಂಧಿಸಿದ್ದರು.
