ಮಧ್ಯಪ್ರದೇಶದ ಶಾಹದೋಲ್ನಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ, ಜಿಲ್ಲಾಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ನೀಡದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ತಾಯಿಯ ಮೃತದೇಹವನ್ನು ಬೈಕ್ನಲ್ಲಿ ಇಟ್ಟುಕೊಂಡು ಸುಮಾರು 80 ಕಿ.ಮೀ ಸಾಗಿರುವ ಘಟನೆ ನಡೆದಿದೆ.
ಆಸ್ಪತ್ರೆ ಆಡಳಿತ ಶವ ವಾಹನವನ್ನು ನೀಡಲು ನಿರಾಕರಿಸಿದ ನಂತರ ತನ್ನ ಮೃತ ತಾಯಿಯ ಶವವನ್ನು ಮೋಟಾರು ಸೈಕಲ್ಗೆ ಕಟ್ಟಿ 80 ಕಿಮೀ ಸಾಗಿದೆ ಎಂದು ಪುತ್ರ ಸುಂದರ್ ಆರೋಪಿಸಿದ್ದಾರೆ.
ಘಟನೆ ಹಿನ್ನೆಲೆ :
ಅನುಪ್ಪೂರಿನ ಗೋಡಾರು ಗ್ರಾಮದ ಜೈಮಂತ್ರಿ ಯಾದವ್ ಎನ್ನುವವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಸ್ಥಿತಿ ಗಂಭೀರವಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗೆ ಶಹದೋಲ್ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು, ಚಿಕಿತ್ಸೆ ಫಲಕಾರಿಯಾಗದೇ ಅಲ್ಲಿ ಅವರು ಸಾವನ್ನಪ್ಪಿದ್ದರು.
ಮೃತರ ಪುತ್ರ ಸುಂದರ್ ಯಾದವ್ ಅವರು ತಮ್ಮ ತಾಯಿಗೆ ಸರಿಯಾದ ಚಿಕಿತ್ಸೆ ನೀಡಿಲ್ಲ ಹಾಗಾಗಿ ಅವರು ಸಾವನ್ನಪ್ಪಿದ್ದಾರೆ ಮತ್ತು ತನ್ನ ತಾಯಿಯ ಸಾವಿಗೆ ವೈದ್ಯಕೀಯ ಆಸ್ಪತ್ರೆಯ ಆಡಳಿತ ಮಂಡಳಿಯೇ ಕಾರಣ ಎಂದು ದೂರಿದ್ದಾರೆ.
” ನಮಗೆ ಶವ ವಾಹನವನ್ನು ಸಹ ನೀಡಲಿಲ್ಲ ಮತ್ತು ಖಾಸಗಿ ವಾಹನಕ್ಕೆ 5 ಸಾವಿರ ರೂ ಬಾಡಿಗೆ ಕೇಳಿದರು, ಆಗಾಗಿ ಖಾಸಗಿ ವಾಹನಗಳನ್ನು ನಾವು ಖರೀದಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ನಾವು ಮರದ ಹಲಗೆಯನ್ನು ಖರೀದಿಸಿ, ನಮ್ಮ ತಾಯಿಯ ದೇಹವನ್ನು ಅದಕ್ಕೆ ಕಟ್ಟಿ ಅದನ್ನು ಸಾಗಿಸಿದ್ದೆವು” ಎಂದು ಸುಂದರ್ ಹೇಳಿದರು.
ಮಧ್ಯಪ್ರದೇಶದ ಸಾಗರ್ನಲ್ಲಿ ಒಂದೇ ಸಿರಿಂಜ್ ಬಳಸಿ 30 ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿದ ಪ್ರಕರಣ ನಡೆದ ಬೆನ್ನಲ್ಲೇ ಈ ಘಟನೆ ವರದಿಯಾಗಿದೆ.