ಹೈದರಾಬಾದ್;ಮಗನ ಸಾವನ್ನು ನೋಡಲು ಸಾಧ್ಯವಿಲ್ಲ ಎಂದು ತಾಯಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾಹಕ ಘಟನೆ ನಡೆದಿದೆ.
ಹೈದರಾಬಾದ್ನ ಕೆಪಿಎಚ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ವಾತಿ(38)ಆತ್ಮಹತ್ಯೆ ಮಾಡಿಕೊಂಡ ಸಾಫ್ಟ್ವೇರ್ ಇಂಜಿನಿಯರ್.
ಸ್ವಾತಿ ಮತ್ತು ಶ್ರೀಧರ್ ದಂಪತಿಗೆ 8 ವರ್ಷದ ಓರ್ವ ಮಗನಿದ್ದಾನೆ.ಮಗ ಅಂಗವೈಕಲ್ಯದಿಂದ ಬಳಲುತ್ತಿದ್ದ.ಇದು ಆಕೆಯ ಪತಿಗೆ ಸಮಸ್ಯೆಯಾಗಿತ್ತು.
ಮಗನಿಗೆ ದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸುವಂತೆ ಸ್ವಾತಿಯನ್ನು ಶ್ರೀಧರ್ ಒತ್ತಾಯಿಸುತ್ತಿದ್ದ. ಆದರೆ,ಸ್ವಾತಿ ಮಾತ್ರ ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಆದ್ದರಿಂದ ಆಕೆಗೆ ಪತಿ ಶ್ರೀದರ್ ಕಿರುಕುಳ ಕೊಡುತ್ತಿದ್ದ.
ಇದರಿಂದಾಗಿ ಮಗನಿಗೆ ಇವರು ಮುಂದೆ ಕೊಲೆ ಮಾಡುತ್ತಾರೆಂದು ಸ್ವಾತಿ 23ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.