ಮಂಕಿಪಾಕ್ಸ್ ರೋಗವನ್ನು ಪತ್ತೆಹಚ್ಚುವ ಡಯಾಗ್ನೋಸ್ಟಿಕ್ ಕಿಟ್ ಮತ್ತು ಲಸಿಕೆ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಆಸಕ್ತಿ ಇರುವ ಅಭ್ಯರ್ಥಿಗಳಿಂದ ಬುಧವಾರ ಟೆಂಡರ್ ಆಹ್ವಾನಸಿದೆ. ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗುತ್ತಿರುವಂತೆ ಎಚ್ಚೆತ್ತಿರುವ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮುನ್ನೆಚ್ಚರಿಕಾ ಕ್ರಮವಾಗಿ ಲಸಿಕೆ ಅಭಿವೃದ್ಧಿಗೆ ಮುಂದಾಗಿದೆ.
ಮಂಕಿಪಾಕ್ಸ್ ವಿರುದ್ಧ ಲಸಿಕೆ ಅಭ್ಯರ್ಥಿಯನ್ನು ಅಭಿವೃದ್ಧಿಪಡಿಸಲು ಮತ್ತು ಈ ಸೋಂಕಿನ ರೋಗನಿರ್ಣಯಕ್ಕಾಗಿ ಡಯಾಗ್ನೋಸ್ಟಿಕ್ ಕಿಟ್ಗಳ ಅಭಿವೃದ್ಧಿಯಲ್ಲಿ ಜಂಟಿ ಸಹಯೋಗಕ್ಕಾಗಿ ಅನುಭವಿ ಲಸಿಕೆ ತಯಾರಕರು, ಇನ್-ವಿಟ್ರೋ ಡಯಾಗ್ನೋಸ್ಟಿಕ್ (IVD) ಕಿಟ್ ತಯಾರಕರಿಂದ ಕೇಂದ್ರವು ಆಸಕ್ತಿಯ ಅಭಿವ್ಯಕ್ತಿ (EoI) ಅನ್ನು ಆಹ್ವಾನಿಸಿದೆ. ಟೆಂಡರ್ ಸಲ್ಲಿಸಲು ಆಗಸ್ಟ್ 10ರಂದು ಕೊನೆಯ ದಿನಾಂಕವಾಗಿದೆ.
ಒಪ್ಪಂದದ ಮೂಲಕ ಐಸಿಎಂಆರ್ ಮಂಕಿಪಾಕ್ಸ್ ರೋಗದ ವಿರುದ್ಧ ಲಸಿಕೆ ಅಥವಾ ಮಂಕಿಪಾಕ್ಸ್ ವೈರಸ್ ರೋಗ ನಿರ್ಣಯಕ್ಕಾಗಿ ಡಯಾಗ್ನೋಸ್ಟಿಕ್ ಕಿಟ್ ಅಭಿವೃದ್ಧಿಪಡಿಸಬೇಕು ಎಂದು ಐಸಿಎಂಆರ್ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.
ಭಾರತದಲ್ಲಿ ಇದುವರೆಗೆ ನಾಲ್ಕು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಮೂರು ಕೇರಳದಲ್ಲಿ ವರದಿಯಾಗಿದ್ದು, ಒಂದು ಪ್ರಕರಣ ನವದೆಹಲಿಯಲ್ಲಿ ಪತ್ತೆಯಾಗಿದೆ.
ಸಾಮೂಹಿಕ ವ್ಯಾಕ್ಸಿನೇಷನ್ ಅಗತ್ಯವಿಲ್ಲ: WHO
ಮಂಕಿಪಾಕ್ಸ್ನಿಂದ ಬಳಲುತ್ತಿರುವವರಿಗೆ ಮತ್ತು ಆರೋಗ್ಯ ಕಾರ್ಯಕರ್ತರು, ಕೆಲವು ಲ್ಯಾಬ್ ಕೆಲಸಗಾರರು ಮತ್ತು ಬಹು ಲೈಂಗಿಕ ಪಾಲುದಾರರನ್ನು ಒಳಗೊಂಡಂತೆ ಸೋಂಕು ತಗಲುವ ಅಪಾಯ ಹೆಚ್ಚಿರುವವರಿಗೆ ಉದ್ದೇಶಿತ ವ್ಯಾಕ್ಸಿನೇಷನ್ ಅನ್ನು ಶಿಫಾರಸು ಮಾಡಿದರೆ ಒಳ್ಳೆಯದು ಎಂಬ ಮಾತುಗಳು ಕೇಳಿಬಂದ ಹಿನ್ನೆಲೆ. ಈ ಕುರಿತು ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಸಮಯದಲ್ಲಿ, ಮಂಕಿಪಾಕ್ಸ್ ವಿರುದ್ಧ ಸಾಮೂಹಿಕ ಲಸಿಕೆಯನ್ನು ನಾವು ಶಿಫಾರಸು ಮಾಡುವುದಿಲ್ಲ, ಸಾಮೂಹಿಕ ವ್ಯಾಕ್ಸಿನೇಷನ್ ಅಗತ್ಯವಿಲ್ಲ ಎಂದು ಬುಧವಾರ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಅವರು ರೋಗ ಪತ್ತೆ ಮತ್ತು ತಡೆಗಟ್ಟುವಿಕೆಗೆ ಸರ್ಕಾರಗಳು ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಮಂಕಿಪಾಕ್ಸ್ ಗೆ ಲಸಿಕೆ ಅಭಿವೃದ್ಧಿ ಕುರಿತು ಚಿಂತಿಸುತ್ತಿದ್ದೇವೆ ಎಂದ ಆಧಾರ್ ಪೂನಾವಾಲ:
ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ವ್ಯಾಪಕ ಭೀತಿಗೆ ಕಾರಣವಾಗಿರುವ ಮಂಕಿಪಾಕ್ಸ್ ಸೋಂಕಿಗೆ ಲಸಿಕೆ ಅಭಿವೃದ್ಧಿ ಮಾಡುವ ಕುರಿತು ಗಂಭೀರ ಚಿಂತನೆ ನಡೆಸಿದ್ದೇವೆ ಎಂದು ಬುದವಾರ ಸೆರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯಸ್ಥ ಆಧಾರ್ ಪೂನಾವಾಲ ಘೋಷಿಸಿದ್ದಾರೆ.