ರಾಷ್ಟ್ರ ರಾಜಧಾನಿಯ ರಾಜಕೀಯ ಭಾರೀ ಸದ್ದು ಮಾಡುತ್ತಿದ್ದು ಬಿಜೆಪಿ ಹಾಗೂ ಎಎಪಿ ಪಕ್ಷದ ನಾಯಕರು ಆರೋಪ ಹಾಗೂ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ವಿಚಾರ ಗಂಭೀರವಾಗಿದ್ದು ಬುಧವಾರ ಸಂಜೆ 4 ಘಂಟೆಗೆ ನಮ್ಮ ಪಕ್ಷದ ರಾಜಕೀಯ ಸಮಿತಿ ಸಭೆ ನಡೆಸಲಿದ್ದು ಪರಿಸ್ಥಿತಿಯನ್ನು ಅವಲೋಕಿಸಲಿದ್ದೇವೆ ಎಂದಿದ್ದಾರೆ.
ಬಿಜೆಪಿಯವರು ನಮ್ಮ ಪಕ್ಷ ಒಡೆಯಲು ಶಾಸಕರಿಗೆ ಆಮಿಷ ನೀಡುತ್ತಿದ್ದಾರೆ ಒಪ್ಪದೆ ಇದ್ದಾಗ ಬೆದರಿಕೆ ಹಾಕುತ್ತಿದ್ದಾರೆ ಈ ಕುರಿತು ಸ್ವತಃ ಶಾಸಕರೇ ನನ್ನ ಬಳಿ ಬಂದು ಹೇಳಿಕೊಂಢಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ವರ್ಷಾಂತ್ಯದಲ್ಲಿ ನಡೆಯುವ ಗುಜರಾತ್ ವಿಧಾನಸಭೆ ಚುನಾವಣೆ ಮುಗಿಯುವವರೆಗೂ ನಮ್ಮ ಮೇಲಿ ತನಿಖೆ ಹಾಗೂ ದಾಳಿ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ಎಎಪಿಯನ್ನು ತೊರೆದು ಬಿಜೆಪಿ ಸೇರಿದರೆ ಮುಖ್ಯಮಂತ್ರಿ ಸ್ಥಾನದ ಜೊತೆಗೆ ತಮ್ಮ ವಿರುದ್ದ ದಾಖಲಾಗಿರುವ ಇಡಿ ಹಾಗೂಸಿಬಿಐ ಪ್ರಕರಣಗಳನ್ನು ಹಿಂಪಡೆಯುವುದಾಗಿ ಬಿಜೆಪಿ ನಾಯಕರು ತಮ್ಮಗೆ ಆಮಿಷ ಒಡ್ಡಿರುವುದಾಗಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದದ್ದರು.
ಎಎಪಿ ಶಾಸಕರಾದ ಅಜಯ್ ದತ್, ಸಂಜೀವ್ ಜಾ, ಸೋಮನಾಥ್ ಭಾರತಿ, ಕುಲದೀಪ್ರನ್ನು ಬಿಜೆಪಿ ಶಾಸಕರು ಸಂಪರ್ಕಿಸಿ ಆಮಿಷ ಒಡ್ಡಿದ್ದಾರೆ ಎಂದು ಎಎಪಿ ರಾಷ್ಟ್ರೀಯ ವಕ್ತಾರ, ಸಂಸದ ಸಂಜಯ್ ಸಿಂಗ್ ಆರೋಪಿಸಿದದ್ದರು.