ಮಾಜಿ ಸಿಎಂ ಸಿದ್ದರಾಮಯ್ಯ ಜನ್ಮದಿನೋತ್ಸವ ಸಿದ್ದರಾಮೋತ್ಸವ ಆಚರಿಸದಿರಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿರುವ ಬೆನ್ನಲ್ಲೇ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿ ಸುದ್ದಿಗಳನ್ನು ಅಲ್ಲಗೆಳೆದಿದ್ದಾರೆ.
ಈ ಕುರಿತು ಗದಗದಲ್ಲಿ ಪ್ರತಿಕ್ರಿಯಿಸಿರುವ ಶಾಸಕಿ ನಾನು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ 25ವರ್ಷದಿಂದ ಪರಿಚಯ ಇದ್ದೇನೆ.ಅವರು ವ್ಯಕ್ತಿ ಮುಖ್ಯವಲ್ಲ. ಪಕ್ಷ ಮುಖ್ಯ ಅಂತ ಅವತ್ತಿನಿಂದಲೂ ಅದನ್ನೇ ಹೇಳ್ತಿದ್ದಾರೆ. ಆದ್ರೆ ಮೀಡಿಯಾ ಮುಂದೆ ಬಂದು ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಇದೆಲ್ಲಾ ಕಟ್ಟುಕಥೆ ಎಂದು ಹೇಳಿದ್ದಾರೆ.
ವ್ಯಕ್ತಿ ಪೂಜೆ ಬಿಡಿ, ಪಕ್ಷ ಪೂಜೆ ಮಾಡಿ ಅಂತ ಅವತ್ತಿನಿಂದಲೂ ಹೇಳಿದ್ದಾರೆ. ಆದ್ರೆ ಆ ಮಾತಿಗೂ ಸಿದ್ಧರಾಮಯ್ಯನವರ ಹುಟ್ಟು ಹಬ್ಬಕ್ಕೆ ಯಾವ ತಾಳೆ, ಯಾವ ಕಲೆಕ್ಷನ್ ಇದೆ. ಯಾವುದೇ ಕಾರ್ಯಕ್ರಮಕ್ಕೆ ಯಾರೂ ವಿರೋಧ ಮಾಡಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಅವರಿಗೆ ಮಾಡೊದಕ್ಕೆ ಕೆಲಸ ಇಲ್ಲ. ಜನರಿಗೆ ಏನು ಭಾಷೆ ಕೊಟ್ಟಿದ್ರು ಅದ್ಯಾವುದನ್ನು ಮಾಡಲಿಲ್ಲ. ಈಗ ಉಳಿದಿದ್ದು, ಬರೀ ಫೇಕ್ ನ್ಯೂಸ್ ಸ್ಪ್ರೆಡ್ ಮಾಡೋದು ಬಿಟ್ರೆ ಬೇರೆ ಏನೂ ಇಲ್ಲ. ಸೋಶಿಯಲ್ ಮೀಡಿಯಾ ಮುಖಾಂತರ ವಾಸ್ತವವನ್ನು ಹಾಳು ಮಾಡ್ತಿದ್ದಾರೆ. ಜನರ ಎದುರಿಗೆ ಅವರ ಮುಖವಾಡ ಕಳಿಚಿಬಿದ್ದಿದೆ ಎಂದು ಟೀಕಿಸಿದ್ದಾರೆ.
ಬಿಜೆಪಿ ಅವರಿಗೆ ನಮ್ಮ ಪಕ್ಷದ ಆಂತರಿಕ ವಿಚಾರಗಳ ಏನು ಗೊತ್ತು? ಅವರಿಗೆ ದೇವರು ಪ್ರತ್ಯಕ್ಷ ಆಗಿ ಬಂದು ಹೇಳಿದ್ನಾ? ಸಿದ್ಧರಾಮಯ್ಯನವರು 224 ಕ್ಷೇತ್ರದಲ್ಲಿ ಎಲ್ಲಿ ನಿಲ್ತಾರೆ? ಅಂತ ಕನಸು ಬಿದ್ದಿದೆಯಾ..? ಅವರು ಮನಸ್ಸು ಮಾಡಿದ್ರೆ ಎಲ್ಲಿ ಬೇಕಾದರೂ ನಿಲ್ಲಬಹುದಾದ ನಾಯಕರು. ಅವರ ಬಗ್ಗೆ ಇವರಿಗೆ ಯಾಕೆ ಚಿಂತೆ? ಎಂದು ಪ್ರಶ್ನಿಸಿದ್ದಾರೆ.