ಕೋವಿಡ್-19 ಸೋಂಕು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಗ್ರಾಮ ಪಂಚಾಯತಿಯಿಂದ ನಿಯೋಜಿಸಿದ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗ ತಗುಲಿ ನಿಧನರಾಗಿದ್ದ ಸರಡಗಿ ( ಬಿ) ಗ್ರಾಮ ಪಂಚಾಯತಿಯ ಪಂಪ್ ಆಪರೇಟರ್ ಈರಣ್ಣ ತಂದೆ ಶರಣಪ್ಪ ದಂಡೋತಿ ಅವರ ಕುಟುಂಬದವರಿಗೆ ರೂ 30 ಲಕ್ಷ ಮೊತ್ತದ ಪರಿಹಾರದ ಚೆಕ್ನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿಯಲ್ಲಿ ವಿತರಿಸಿದರು.

ಕೋವಿಡ್-19 ಸಾಂಕ್ರಾಮಿಕ ರೋಗ ತಗುಲಿದ್ದ ಈರಣ್ಣನನ್ನು 10.05.2021 ರಂದು ಕಲಬುರಗಿ ಜಿಮ್ಸ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೂ, ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿದ್ದು, ಇದರ ಬಗ್ಗೆ ಜಿಲ್ಲಾ ವೈದ್ಯಕೀಯ ಮಂಡಳಿ ಜಿಲ್ಲಾ ಆಸ್ಪತ್ರೆ ಕಲಬುರಗಿ ರವರು ಕೋವಿಡ್-19 ರಿಂದ ಮರಣಹೊಂದಿದ ಬಗ್ಗೆ ಧೃಢೀಕರಣ ನೀಡಿರುವ ಪ್ರಯುಕ್ತ, ಕಲಬುರಗಿ ಜಿಲ್ಲಾ ಪಂಚಾಯತ ಆಶ್ವಾಸನೆ ನಿಧಿಯಿಂದ ರೂ.30.00 ಲಕ್ಷಗಳ ಪರಿಹಾರದ ಮೊತ್ತದ ಚೆಕ್ನ್ನು ವಿತರಿಸಿದ ಸಚಿವರ ಕಷ್ಟಕಾಲದಲ್ಲಿ ಕುಟುಂಬದ ನೆರವಿಗೆ ಧಾವಿಸಿದ್ದಾರೆ.

ಮೃತರ ಧರ್ಮಪತ್ನಿಯಾದ ಶ್ರೀಮತಿ ಶಾಂತಾಬಾಯಿ ಗಂಡ ದಿ.ಈರಣ್ಣ ದಂಡೋತಿ ಸಚಿವರಿಂದ ಚೆಕ್ ಪಡೆದುಕೊಂಡರು.ತಿಪ್ಪಣ್ಣಪ್ಪ ಕಮಕನೂರ MLC, ಪ್ರವೀಣ ಹರವಾಳ ಅಧ್ಯಕ್ಷರು GESCOM, ಕೃಷ್ಣ ಬಾಜಪೇಯಿ MD GESCOM, ಫೌಜಿಯಾ ತರನ್ನುಮ್ ಬ ಜಿಲ್ಲಾಧಿಕಾರಿ, ಭಂವರಸಿಂಗ್ ಮೀನಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ವಿಕಾಸ ಸಜ್ಜನ್ ಮುಖ್ಯ ಲೆಕ್ಕಾಧಿಕಾರಿ, ಹಾಗೂ ಇತರರು ಉಪಸ್ಥಿತರಿದ್ದರು.





