ಮೈಸೂರು ಜಿಲ್ಲೆಯ ಜೆಡಿಎಸ್ನ ಸರ್ವೋಚ್ಚ ನಾಯಕ ಜಿ.ಟಿ.ದೇವೇಗೌಡ ಹಾಗೂ ಪುತ್ರ ಹರೀಶ್ ಗೌಡನನ್ನು ಮಣಿಸಲು ಜಿಲ್ಲೆಯ ಅತೃತಪ್ತರು ವಿಶೇಷವಾಗಿ ಮಾಸ್ಟರ್ ಪ್ಲಾನ್ ಹೆಣೆದಿರುವುದಾಗಿ ತಿಳಿದು ಬಂದಿದೆ.
ಈ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಈ ರೀತಿಯ ಅತೃಪ್ತರು ಸಭೆ ನಡೆಸಿದ್ದು ಕಂಡು ಬಂದಿತ್ತು ಇದೀಗ ಈ ನಡೆ ಮೈಸೂರಿಗೂ ಪಸರಿಸಿದೆ. ಜಿಟಿಡಿ ಜೆಡಿಎಸ್ ತೊರೆದು ಕಾಂಗ್ರೆಸ್ ಅಥವಾ ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗಿತ್ತು ಆದರೆ, ಬದಲಾದ ರಾಜಕೀಯ ಸನ್ನಿಔಏಶದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಮದ್ಯಪ್ರವೇಶದಿಂದ ಜೆಡಿಎಸ್ನಲ್ಲಿಯೇ ಉಳಿಯುವುದಾಗಿ ಘೋಷಿಸಿದ್ದರು.
ಇದೀಗ ಜಿಟಿಡಿಯ ಈ ನಡೆ ಆಕಾಂಕ್ಷಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದ್ದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ನಾಯಕರ ನಡುವೆ ಬಿರುಕು ಕಾಣಿಸಿಕೊಂಡಿದೆ ಮತ್ತು ಅತೃಪ್ತರು ಸ್ವಾಭಿಮಾನಿ ಸಭೆ ಕರೆದಿದ್ದಾರೆ.
ಜೆಡಿಎಸ್ಗೆ ಮರಳಿದ ಅತೃಪ್ತರನ್ನು ಮನವೊಲಿಸಲು ಸ್ವತಃ ಜಿಟಿಡಿ ಅಖಾಡಕ್ಕೆ ಇಳಿದಿದ್ದರು ಮತ್ತು ಮನವೊಲಿಸುವಲ್ಲಿ ವಿಫಲರಾಗಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ಗೆಲುವಿಗೆ ಶ್ರಮಿಸಿದ್ದ ಮುಖಂಡರೆ ಇಂದು ಜಿಟಿಡಿ ವಿರುದ್ದ ಬಹಿರಂಗವಾಗಿ ತೊಡೆ ತಟ್ಟಿದ್ದಾರೆ.
ಬೀರಿಹುಂಡಿ ಬಸವಣ್ಣ, ಮಾವಿನಹಳ್ಳಿ ಸಿದ್ದೇಗೌಡ, ಕೆಂಪನಾಯಕ, ಬೆಳವಾಡಿ ಶಿವಮೂರ್ತಿ, ಮಾದೇಗೌಡರಿಂದ ಅತೃಪ್ತ ಮುಖಂಡರೆಂದು ತಿಳಿದು ಬಂದಿದೆ ಮತ್ತು ಸ್ವಾಭಿಮಾನಿ ಸಭೆ ಕರೆದಿದ್ದಾರೆ. ಇನ್ನು ಸ್ವಾಭಿಮಾನಿ ಸಭೆಯಲ್ಲಿ ಮಾತನಾಡಿದ ಅತೃಪ್ತ ಮುಖಂಡರು ಅಪ್ಪ ಮಗ ಇಬ್ಬರನ್ನು ಸೋಲಿಸ್ತೀವಿ ಜೆಡಿಎಸ್ ಪಕ್ಷದ ವಿರುದ್ದ ಕೆಲಸ ಮಾಡಿದ್ದ ಜಿಟಿಡಿಗೆ, ಜಿಟಿಡಿ ಪುತ್ರನಿಗೆ ಟಿಕೆಟ್ ಕೊಟ್ಟಿದ್ದಾರೆ. ಇದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರಿಗೆ ಮಾಡಿದ ಅನ್ಯಾಯ ಎಂದು ಸಭೆಯಲ್ಲಿ ಮುಖಂಡರು ಆಕ್ರೋಶ ಹೊರಹಾಕಿದ್ದರು.
ಜಿಟಿ ದೇವೇಗೌಡರಿಗಾಗಿ ನಾವು ಸಾಕಷ್ಟು ದುಡಿದಿದ್ದೇವೆ ಜಿಟಿಡಿ ನಮಗೆ ಅನ್ಯಾಯ ಮಾಡಿದ್ದಾರೆ ಇಂತವರಿಗೆ ಜೆಡಿಎಸ್ ಪಕ್ಷದಲ್ಲಿ ಎರಡು ಟಿಕೆಟ್ ಕೊಟ್ಟಿದ್ದಾರೆ ಇಂತವರಿಗೆ ತಕ್ಕ ಪಾಠ ಕಲಿಸ್ತೀವಿ ಎಂದು ಸಭೆಯಲ್ಲಿ ಆಗ್ರಹ ಕೇಳಿ ಬಂದಿದೆ.
ನಾವೂ ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಮಾಡಲಿದ್ದೇವೆ ನಮ್ಮ ಉದ್ದೇಶ ಒಂದೇ ಹುಣಸೂರಿನಲ್ಲಿ ಹರೀಶ್ಗೌಡನನ್ನ ಸೋಲಿಸೋದು ಚಾಮುಂಡೇಶ್ವರಿಯಲ್ಲಿ ಜಿಟಿಡಿಯನ್ನ ಸೋಲಿಸೋದು ಎಂದು ಶಪಥ ಮಾಡಿದ್ದಾರೆ.
ಕಾಂಗ್ರೆಸ್ಗೆ ಸಹಕಾರ ಕೋಡ್ತೀವಾ ಅಥವಾ ಜೆಡಿಎಸ್ ಸೋಲಿಸೋಕೆ ಎನ್ನಾಡ್ಬೇಕು ಅನ್ನೋದಿನ ಮುಂದಿನ ದಿನಗಳಲ್ಲಿ ತೋರಿಸ್ತೀವಿ ಕುಮಾರಸ್ವಾಮಿಯವರ ಜೊತೆಯು ಮಾತನಾಡಿದ್ದೇವೆ ಯಾವುದೇ ಮನವೊಲಿಕೆಗೂ ನಾವು ಬಗ್ಗಲ್ಲ ನಮ್ಮ ನಿಲುವು ಬದಲಾಗಲ್ಲ ಎಮದು ತಮ್ಮ ನಿಲುವನ್ನು ತಿಳಿಸಿದ್ದಾರೆ.