Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಜನ್ಮದಿನ ವಿಶೇಷ | ಗಾಂಧೀಜಿ ತತ್ವವನ್ನೇ ಜೀವನದುದ್ದಕ್ಕೂ ಅನುಕರಿಸಿದ ಮಹಾನ್ ನಾಯಕ ಮಾರ್ಟಿನ್ ಲೂಥರ್ ಕಿಂಗ್

ಬಾಲಾಜಿ ಕುಂಬಾರ

ಬಾಲಾಜಿ ಕುಂಬಾರ

January 15, 2022
Share on FacebookShare on Twitter

“ಒಂದು ದಿನ ನನ್ನ ನಾಲ್ಕು ಪುಟ್ಟ ಮಕ್ಕಳು, ಚರ್ಮದ ಬಣ್ಣಕ್ಕೆ ಬದಲಾಗಿ ವ್ಯಕ್ತಿತ್ವದ ಮೇಲೆ ಚಾರಿತ್ರ್ಯ ಅಳೆಯುವಂತಹ ರಾಷ್ಟ್ರದಲ್ಲಿ ಬದುಕುತ್ತಾರೆ ಎಂಬ ಕನಸಿದೆ. ಜಾರ್ಜಿಯಾದ ಕೆಂಪು ಪರ್ವತಗಳ ಮೇಲೆ, ಗುಲಾಮರ ಹಾಗೂ ಮಾಲೀಕರ ಮಕ್ಕಳ ಸಹೋದರತೆಯ ಮೇಜಿನ ಮೇಲೆ ಒಟ್ಟೊಟ್ಟಿಗೆ ಕುಳಿತು ಮಾತನಾಡುತ್ತಾರೆ ಎಂಬ ಕನಸು ನನ್ನಲ್ಲಿದೆ.”

ಹೆಚ್ಚು ಓದಿದ ಸ್ಟೋರಿಗಳು

ಭಾರತದ ವಿದೇಶಿ ವಿನಿಮಯ ಆಪದ್ಧನ ಏಕೆ ಕರಗುತ್ತಿದೆ?

ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್ ರಾಜೀನಾಮೆ‌

ಗುಜರಾತ್‌ ನಲ್ಲಿ ಗೋಡೆ ಕುಸಿದು 12 ಮಂದಿ ದುರ್ಮರಣ

ಈ ಮೇಲಿನ ದೂರದೃಷ್ಟಿ ಚಿಂತನೆಯ ಮಾತುಗಳನ್ನು ಹೇಳಿದವರು ಮತ್ತಾರು ಅಲ್ಲ ವರ್ಣಭೇದ ನೀತಿ ವಿರುದ್ಧ ಧ್ವನಿಯೆತ್ತಿದ ಮಾರ್ಟಿನ್ ಲೂಥರ್ ಕಿಂಗ್.

ಇಂದು ಮಾರ್ಟಿನ್ ಲೂಥರ್ ಕಿಂಗ್ ಅವರ ಜನ್ಮದಿನ. ಜನವರಿ 15, 1929 ರಲ್ಲಿ ಜನಿಸಿದ ಕಿಂಗ್ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಅಮೆರಿಕದ ಕರಿಯರ ಪಾಲಿಗೆ ಭರವಸೆಯ ನಾಯಕನಾಗಿ, ಕ್ರಾಂತಿಯ ಚೇತನವಾಗಿ ಆಗಮಿಸಿದ ಕಿಂಗ್ ವರ್ಣಭೇದ ನೀತಿ ವಿರುದ್ಧ ಧ್ವನಿಯೆತ್ತಿ ಯಶಸ್ವಿಯಾದರು.

ಬಿಳಿಯರ ಕಿರುಕುಳಕ್ಕೆ, ಅಸ್ಪ್ರಶ್ಯತೆಗೆ ಒಳಗಾಗಿರುವ ಕರಿಯರನ್ನು ಅಪ್ಪಿಕೊಂಡು ಕರಿಯ ಜನಾಂಗದವರ ಪರ ಹೋರಾಟಕ್ಕೆ ಸಜ್ಜಾಗಿ ಕರಿಯರ ನಾಯಕನಾಗಿ ಕಿಂಗ್ ಹೊರಹೊಮ್ಮಿದ. ಬಿಳಿಯರು ಹಿಂಸಾತ್ಮಕ ಚಟುವಟಿಕೆಗಳು ನಡೆಸಿ ಎಷ್ಟೇ ಕಿರುಕುಳ ನೀಡಿದರೂ ಲೂಥರ್ ಕಿಂಗ್ ಹಿಂಸಾತ್ಮಕ ಮಾರ್ಗ ಹಿಡಿಯಲಿಲ್ಲ. ಅದಕ್ಕೆ ಬಲವಾದ ಕಾರಣ ಒಂದಿತ್ತು. ಅದೇನೆಂದರೆ ಭಾರತದ ಅಹಿಂಸಾತ್ಮಕ ಹೋರಾಟಗಾರ ಮಹಾತ್ಮ ಗಾಂಧೀಜಿಯವರು ಮಾರ್ಟಿನ್ ಲೂಥರ್ ಕಿಂಗ್ ಗೆ ಪ್ರೇರಣೆ. ಗಾಂಧೀಜಿಯವರ ತತ್ವವನ್ನೇ ಜೀವನದುದ್ದಕ್ಕೂ ಕಿಂಗ್ ಅನುಕರಣೆ ಮಾಡಿದರು.

ಅಮೆರಿಕಾದಿಂದ ಭಾರತಕ್ಕೂ ಆಗಮಿಸಿದ ಕಿಂಗ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ್ದರು. ಎಲ್ಲಾ ಕ್ಷೇತ್ರಗಳಲ್ಲೂ ಬಿಳಿಯರಿಗೆ ಮಾತ್ರ ಅವಕಾಶಗಳಿದ್ದವು, ಆದರೆ ಕರಿಯರು ಮಾತ್ರ ಯಾವುದೇ ಸೌಲಭ್ಯ, ಹಕ್ಕುಗಳು ದಕ್ಕಿಸಿಕೊಳ್ಳಲು ಸಾಧ್ಯವಾಗದೇ ವಂಚಿತರಾಗಿ ಬದುಕುತ್ತಿದ್ದರು. ಕರಿಯರಿಗೆ ಮತ್ತು ಬಿಳಿಯರಿಗೆ ಪ್ರತ್ಯೇಕತೆ ಮಾಡುವ ಮೂಲಕ ಅಸಮಾನ ವ್ಯವಸ್ಥೆ ಜಾರಿಯಲ್ಲಿತ್ತು. ಇಂತಹ ಅನೇಕ ಸಂಕಷ್ಟ, ಅವಮಾನಗಳನ್ನು ಎದುರಿಸಿದ ಲೂಥರ್ ಕಿಂಗ್ ಮುಂದೆ ದೊಡ್ಡ ಮಟ್ಟದಲ್ಲಿ ಅಹಿಂಸಾತ್ಮಕ ಪ್ರತಿಭಟನೆಗೆ ಸಜ್ಜಾದರು. ಲಕ್ಷ – ಲಕ್ಷ ಕರಿಯ ಜನಾಂಗದವರನ್ನು ಒಂದೆಡೆ ಸೇರಿಸಿದ ಕಿಂಗ್ ವೇದಿಕೆ ಮೇಲೆ ಆಗಮಿಸಿ ತನ್ನ ಭಾವುಕತೆಯಿಂದ ಹೇಳಿದ “ನನಗೆ ಒಂದು ಇಂದು ಕನಸಿದೆ’ ಎನ್ನುವ ಪ್ರಸಿದ್ಧ ಭಾಷಣವು ಜನಾಂಗೀಯ ಕೇಂದ್ರಿತ ನಿಂದನೆ, ಕರಿಯರ ಕಿರುಕುಳ ಮತ್ತು ಶೋಷಣೆಯ ಸಾಮಾಜಿಕ ಅನುಭವಗಳನ್ನು ಪ್ರತಿಬಿಂಬಿಸುತ್ತದೆ.

ಕೊನೆಗೂ ಕಿಂಗ್ ಹೋರಾಟದ ಫಲವಾಗಿ 1964 ರಲ್ಲಿ ಅಮೆರಿಕ ಅಧ್ಯಕ್ಷ ನಾಗರೀಕ ಹಕ್ಕುಗಳ ಕಾಯಿದೆ ಜಾರಿಗೊಂಡು, ಒಪ್ಪಂದಕ್ಕೆ ಸಹಿ ಹಾಕಿದರು. ನೂರಾರು ವರ್ಷಗಳ ಕಾಲ ಬಿಳಿಯರ ಅಟ್ಟಹಾಸ, ಹಿಂಸೆ, ದೌರ್ಜನ್ಯಕ್ಕೆ ಒಳಗಾಗಿದ್ದ ಲಕ್ಷಾಂತರ ಕರಿಯರು ಮಾರ್ಟಿನ್ ಲೂಥರ್ ಕಿಂಗ್ ಎಂಬ ಚೈತನ್ಯ ಶಕ್ತಿಯಿಂದ ನಿಟ್ಟುಸಿರು ಬಿಡುವಂತಾಗಿತ್ತು.

ಸಾಮಾಜಿಕ ಕ್ರಾಂತಿಗೆ ಹೆಸರಾದ ಮಾರ್ಟಿನ್ ಲೂಥರ್ ಕಿಂಗ್ ಗೆ ‘ನೊಬೆಲ್ ಶಾಂತಿ’ ಪ್ರಶಸ್ತಿ ಕೂಡ ಒಲಿದಿತ್ತು. ‘ಅಮೆರಿಕದ ಗಾಂಧಿ’ ಎಂದೇ ಪ್ರಖ್ಯಾತಿ ಪಡೆದಿರುವ ಕಿಂಗ್ ಅಹಿಂಸಾತ್ಮಕ ತತ್ವಗಳಿಂದಲೇ ಗೆಲುವು ಸಾಧಿಸಿದ ಜನಮನ ನೇತಾರ. ಆದರೆ ಕೊನೆಗೆ ಎಪ್ರಿಲ್ 4, 1968 ರಲ್ಲಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿ ಅಂದು ಅಮೆರಿಕಾ ಚರಿತ್ರೆಯಲ್ಲಿ ದುರಂತದ ಸಾವಿಗೆ ಶರಣಾದರು.

ಮಾರ್ಟಿನ್ ಕಿಂಗ್ ದೈಹಿಕವಾಗಿ ಮರೆಯಾದರೂ ಲಕ್ಷಾಂತರ ಹೃದಯಗಳಲ್ಲಿ ಇಂದಿಗೂ ನೆಲೆಸಿದ್ದಾರೆ. ಮಾರ್ಟಿನ್ ಒಬ್ಬ ಛಲಗಾರ, ಹೋರಾಟಗಾರ ಅಷ್ಟೇ ಅಲ್ಲದೇ ಸಾಮಾಜಿಕ ಸುಧಾರಣೆಗಾಗಿ ಪ್ರಾಣತ್ಯಾಗ ಮಾಡಿದ ಅದಮ್ಯ ಚೇತನ ಕೂಡ ಹೌದು. ಇಂಥ ಕ್ರಾಂತಿಕಾರಿ ನಾಯಕರ ಆದರ್ಶಗಳು ನಮ್ಮಂತಹ ಲಕ್ಷಾಂತರ ಮನಸ್ಸುಗಳಿಗೆ ಸ್ಫೂರ್ತಿದಾಯಕವಾಗಬೇಕಾಗಿದೆ.

ಅಸಮಾನತೆ, ಅಸ್ಪೃಶ್ಯತೆ, ಅಶಾಂತಿ, ಹಿಂಸಾಚಾರ ತಾಂಡವವಾಡುತ್ತಿರುವ ದುರಿತ ಕಾಲದಲ್ಲಿ ‘ಮಾರ್ಟಿನ್ ಲೂಥರ್ ಕಿಂಗ್’ ಎನ್ನುವ ಕ್ರಾಂತಿಯ ಚಿಲುಮೆಗಳು ಮತ್ತೆ ಮತ್ತೆ ಹುಟ್ಟು ಪಡೆದು ಪುಟಿದೇಳಬೇಕು ಎಂದೆನಿಸುತ್ತದೆ.

RS 500
RS 1500

SCAN HERE

don't miss it !

ವಿಡಿಯೋ

ದೇಶದ್ರೋಹದ ಈ ಕಾನೂನು ಸದ್ಭಳಕೇನೇ ಆಗಿಲ್ಲ!

by ಪ್ರತಿಧ್ವನಿ
May 14, 2022
KSRTC ಬಸ್ ಬಾಡಿಗೆ ಪಡೆಯೋರಿಗೆ ಕಹಿ ಸುದ್ದಿ : ಕಿಲೋಮೀಟರ್ ದರ ಹೆಚ್ಚಳ
ಕರ್ನಾಟಕ

KSRTC ಬಸ್ ಬಾಡಿಗೆ ಪಡೆಯೋರಿಗೆ ಕಹಿ ಸುದ್ದಿ : ಕಿಲೋಮೀಟರ್ ದರ ಹೆಚ್ಚಳ

by ಪ್ರತಿಧ್ವನಿ
May 17, 2022
ಮೈಸೂರು ಹುಲಿ ಬಿರುದಿಗೆ ಕತ್ತರಿ: 2 ಸಾಲಿಗೆ ಮುಗಿದ ಟಿಪ್ಪು ಸುಲ್ತಾನ್‌ ಪಠ್ಯ!
ಕರ್ನಾಟಕ

ಮೈಸೂರು ಹುಲಿ ಬಿರುದಿಗೆ ಕತ್ತರಿ: 2 ಸಾಲಿಗೆ ಮುಗಿದ ಟಿಪ್ಪು ಸುಲ್ತಾನ್‌ ಪಠ್ಯ!

by ಪ್ರತಿಧ್ವನಿ
May 17, 2022
ಬ್ರಾಹ್ಮಣ್ಯದ ಕ್ರೌರ್ಯ.. ದಲಿತರ ಮಾನವತಾವಾದ.. ನಂಗೇಲಿಯ ʼಪುಝುʼ : ಮಲಯಾಳಂನಲ್ಲಿ ಮತ್ತೊಂದು ʻಅಸ್ಪ್ರಶ್ಯ ಕಥಾʼಹಂದರ ಹೊಂದಿರುವ ಸಿನಿಮಾ !
ಅಭಿಮತ

ಬ್ರಾಹ್ಮಣ್ಯದ ಕ್ರೌರ್ಯ.. ದಲಿತರ ಮಾನವತಾವಾದ.. ನಂಗೇಲಿಯ ʼಪುಝುʼ : ಮಲಯಾಳಂನಲ್ಲಿ ಮತ್ತೊಂದು ʻಅಸ್ಪ್ರಶ್ಯ ಕಥಾʼಹಂದರ ಹೊಂದಿರುವ ಸಿನಿಮಾ !

by ಕರ್ಣ
May 17, 2022
ಕೆಎಲ್‌ ರಾಹುಲ್‌ ಶತಕ; ಮುಂಬೈಗೆ 200 ರನ್‌ ಗುರಿ!
ಕ್ರೀಡೆ

5ನೇ ಬಾರಿ 500 ಪೂರೈಸಿ ಕೊಹ್ಲಿ ದಾಖಲೆ ಸರಿಗಟ್ಟಿದ ಕೆಎಲ್ ರಾಹುಲ್!

by ಪ್ರತಿಧ್ವನಿ
May 18, 2022
Next Post
ಸಮುದ್ರದೊಳಗೆ ಜ್ವಾಲಾಮುಖಿ ಸ್ಪೋಟ; ಕ್ಷಣಾರ್ಧದಲ್ಲೇ ಅಪ್ಪಳಿಸಿದ ಸುನಾಮಿ

ಸಮುದ್ರದೊಳಗೆ ಜ್ವಾಲಾಮುಖಿ ಸ್ಪೋಟ; ಕ್ಷಣಾರ್ಧದಲ್ಲೇ ಅಪ್ಪಳಿಸಿದ ಸುನಾಮಿ

ದೆಹಲಿಗೆ ಹೋಗಿ ಬಂದಿರುವ ಯತ್ನಾಳ್ ಮುಖದಲ್ಲಿ ಖುಷಿ ; ಈ ಬಾರಿ ಸಂಪುಟ ಸ್ಥಾನ ಪಡೆಯುತ್ತಾರಾ?

ದೆಹಲಿಗೆ ಹೋಗಿ ಬಂದಿರುವ ಯತ್ನಾಳ್ ಮುಖದಲ್ಲಿ ಖುಷಿ ; ಈ ಬಾರಿ ಸಂಪುಟ ಸ್ಥಾನ ಪಡೆಯುತ್ತಾರಾ?

ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಪಂಜಾಬ್ ಕಾಂಗ್ರೆಸ್; ಚಮ್ಕೌರ್ ಸಾಹಿಬ್ನಿಂದ ಚನ್ನಿ ಸ್ಪರ್ಧೆ

ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಪಂಜಾಬ್ ಕಾಂಗ್ರೆಸ್; ಚಮ್ಕೌರ್ ಸಾಹಿಬ್ನಿಂದ ಚನ್ನಿ ಸ್ಪರ್ಧೆ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist