ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರುಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ಮಹಾಂತೇಶ್ ಶಿರೂರ ಮಡದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮುಖ್ಯ ಆರೋಪಿ ಮಹಾಂತೇಶ್ ಗುರೂಜಿ ಬಳಿ ಕೆಲಸ ಮಾಡುತ್ತಿದ್ದ 2016ರಲ್ಲಿ ಕಾರಣಾಂತರಗಳಿಂದ ಕೆಲಸವನ್ನ ಬಿಟ್ಟಿದ್ದ. ಗುರೂಜಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವನಜಾಕ್ಷಿಯನ್ನು 2019ರಲ್ಲಿ ಚಂದ್ರಶೇಖರ್ ಗುರೂಜಿ ಸಮ್ಮುಖದಲ್ಲಿ ವಿವಾಹವಾಗಿದ್ದ ಎಂದು ತಿಳಿದು ಬಂದಿದೆ.
ವ್ಯವಹಾರದ ವಿಚಾರವಾಗಿ ಹ=ಗುರೂಜಿ ಹಾಗು ಮಹಾಂತೇಶ್ ನಡುವ ಮನಸ್ತಾಪ ಏರ್ಪಟ್ಟಿತ್ತು ಎಂದು ತಿಳಿದು ಬಂದಿದೆ. ಆ ವೈಷಮ್ಯಕ್ಕೆ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.