ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಮಹಾರಾಷ್ಟ್ರ ವಿರೋಧಿ ಹೇಳಿಕೆ ನೀಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಇನ್ನು ಈ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಕೋಶ್ಯಾರಿ ಮಹಾರಾಷ್ಟ್ರ ಜನತೆಯ ಕ್ಷಮೆಯಾಚಿಸಿದ್ದು ತಾವು ಉದ್ದೇಶಪೂರ್ವಕವಾಗಿ ಆ ಮಾತನ್ನು ಹೇಳಿಲ್ಲ ಎಂದಿದ್ದಾರೆ.
ಕಳೆದ ವಾರ ಅಂಧೇರಿಯಲ್ಲಿ ನಡೆದ ಸಬ್ ಅರ್ಬನ್ ರೈಲ್ವೆ ಮಾರ್ಗ ಉದ್ಘಾಟನೆ ಮಾಡಿ ಮಾತನಾಡುವ ವೇಳೆ ಗುಜರಾತಿ ಹಾಗು ರಾಜಸ್ಥಾನಿಗಳ ಕೊಡುಗೆ ಇಲ್ಲದಿದ್ದರೆ ಮುಂಬೈ ಆರ್ಥಿಕ ರಾಜಧಾನಿಯಾಗಲು ಸಾಧ್ಯವಿಲ್ಲ ಹಾಗೂ ದೇಶಕ್ಕೆ ಇವರುಗಳ ಕೊಡುಗೆ ಅಪಾರ ಎಂದು ಹೇಳುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದರು.