ಇತ್ತೀಚಿಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿರಾಯಸವಾಗಿ ಜಯಗಳಿಸಿದೆ. ತಾನು ಕಣಕ್ಕಿಳಿಸಿದ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಲ್ಲಿ ರಾಜಸ್ಥಾನ ಸಿಎಂ ಆಶೋಕ್ ಗೆಹ್ಲೋಟ್ ಯಶಸ್ವಿಯಾಗಿದ್ದರು. ಮತ್ತೊಮ್ಮೆ ತಾನೊಬ್ಬ ಜಾದೂಗಾರ ಎಂಬುದನ್ನು ನಿರೂಪಿಸಿದ್ದಾರೆ ಎಂದು ಸ್ಥಳೀಯ ನಾಯಕರು ಗೆಹ್ಲೋಟ್ರನ್ನು ಹಾಡಿ ಹೊಗಳಿದ್ದರು.
ಈ ಮಧ್ಯೆ ರಾಜಸ್ಥಾನ ಕಾಂಗ್ರೆಸ್ನಲ್ಲಿ ಬಣ ರಾಜಕೀಯ ಜೋರಾಗಿದ್ದು ಅದರ ಲಾಭ ಪಡೆಯಲೆತ್ನಿಸಿದ ಬಿಜೆಪಿಗೆ ಗೆಹ್ಲೋಟ್ ತಮ್ಮ ತಂತ್ರಗಾರಿಕೆಯ ಮೂಲಕ ತಿರುಗೇಟು ನೀಡಿದ್ದಾರೆ. ನಂತರ ಇದು ಪ್ರಜಾಪ್ರಭುತ್ವದ ಗೆಲುವು ಎಂದು ಹೇಳಿ ನಗೆ ಬೀರಿದ್ದರು.
ಈ ಗೆಲುವು ಕಾಂಗ್ರೆಸ್ಸಿಗೆ ಮಾತ್ರವಲ್ಲ 71 ವರ್ಷದ ಗೆಹ್ಲೋಟ್ಗು ಅನಿವಾರ್ಯವಾಗಿತ್ತು. ಏಕೆಂದರೆ ಈಗಾಗಲೇ ನಾಯಕತ್ವ ಬದಲಾವಣೆ ಹೆಸರಿನಲ್ಲಿ ಸಿಎಂ ಪಟ್ಟದ ಮೇಲೆ ಕಣ್ಣಿಟ್ಟಿರುವ ಸಚಿನ್ ಪೈಲಟ್ ಭಾಯಿ ಮುಚ್ಚಿಸುವಲ್ಲಿ ಈ ಗೆಲುವು ಅಶೋಕ್ಗೆ ಸಹಕಾರಿಯಾಗಿದೆ.
ಈ ಹಿಂದೆ ನಾಯಕತ್ವ ಬದಲಾವಣೆ ಕುರಿತು ವ್ಯಾಪಕ ಚರ್ಚೆ ಶುರುವಾದ ಬೆನ್ನಲ್ಲೇ ನನ್ನ ರಾಜೀನಾಮೆ ಈಗಾಗಲೇ ಸೋನಿಯಾರ ಬಳಿ ಇದೆ. ಕಾಂಗ್ರೆಸ್ ಮುಖ್ಯಮಂತ್ರಿ ಬದಲಾವಣೆ ಮಾಡುವ ಸುಳಿವು ಯಾರಿಗೂ ಸಿಗುವುದಿಲ್ಲ ಎಂದು ಪ್ರತಿಕ್ರಿಯಿಸಿ ಸುಮ್ಮನಾಗಿದ್ದರು.
ಆರ್ಥಶಾಸ್ತ್ರ ಹಾಗು ಕಾನೂನು ಸ್ನಾತಕೋತರ ಪದವಿ ಪಡೆದಿರುವ ಗೆಹ್ಲೋಟ್ ಒಂದು ವೇಳೆ ರಾಜಕೀಯ ಪ್ರವೇಶಿಸಿದಿದ್ದರೆ ತಮ್ಮ ತಂದೆ ಬಾಬು ಲಕ್ಷ್ಮಣ್ ಸಿಂಗ್ ದಕ್ಷ್ ಹಾಗೆ ಜಾದೂಗಾರನಾಗಿ ಜನರಿಗೆ ಮೋಡಿ ಮಾಡುತ್ತಿದೆ ಎಂದು ಹಲವಾರು ಭಾರೀ ಹೇಳಿಕೊಂಡಿದ್ದಾರೆ.
ಮಾಲಿ(ತೋಟಗಾರ) ಸಮುದಾಯದವರಾದ ಗೆಹ್ಲೋಟ್ ತಮ್ಮ ರಾಜಕೀಯ ಜೀವನದಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದಾರೆ. ಮೊದಮೊದಲು ತಮ್ಮ ರಾಜಕೀಯ ಪ್ರವೇಶದ ಸಮಯದಲ್ಲಿ ದುಡ್ಡನ್ನು ಹೊಂಚಿಸಲು ತಮ್ಮ ಗಾಡಿಯನ್ನ ಮಾರಾಟ ಮಾಡಿದ್ದರು.
ಅಂದಿನ ಕಾಲಘಟದಲ್ಲಿ ಗೆಹ್ಲೋಟ್ರನ್ನು ಗುರುತಿಸಿದ ಇಂದಿರಾ ಗಾಂಧಿ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದ್ದುದಾಗಿ ಹೇಳಿದ್ದರು. ಅಂದು ಅವರು ಆ ರೀತಿ ಹೇಳದೆ ಗೆಹಲೋಟ್ರನ್ನು ಕಾಂಗ್ರೆಸ್ಗೆ ಕರೆದಿಲ್ಲವೆಂದಿದ್ದರೆ ಇಂದು ರಾಜಸ್ಥಾನದಲ್ಲಿ ಪ್ರಬಲ ರಾಜಕೀಯ ನಾಯಕನನ್ನು ಕಾಂಗ್ರೆಸ್ ಕಳೆದುಕೊಳ್ಳುತಿತ್ತು.
ಸಂಜಯ್ ಗಾಂಧಿ ಆಶಿರ್ವಾದದಿಂದ ರಾಜಕೀಯ ಜೀವನ ಶುರು ಮಾಡಿದ್ದ ಗೆಹ್ಲೋಟ್ ರಾಜಸ್ಥಾನ ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇಂದಿರಾ ಸಂಪುಟದಲ್ಲಿ ಮಂತ್ರಿಗಳಾಗಿದ್ದ ಗೆಹ್ಲೋಟ್ ಅಂದು ತಾವು ಸ್ಥಾಪಿಸಿದ ದೆಹಲಿ ಹಾತ್ ಇಂದಿಗೂ ಸಹ ಚಾಲ್ತಿಯಲ್ಲಿದೆ.
ಹಾಗೆಯೇ ಗಾಂಧಿ ಕುಟುಂಬ ಜೊತೆ ಗೆಹ್ಲೋಟ್ ಒಡನಾಟ ಮುಂದುವರಿಯುತ್ತಾ ಹೋಯಿತ್ತು ಇಂದಿಗೂ ಸಹ ಗಾಂಧಿ ಕುಟುಂಬದವರಿಗೆ ಅಶೋಕ್ ಎಂದರೆ ಅಚ್ಚು ಮೆಚ್ಚು.
2017ರಲ್ಲಿ ಅಂದಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಸಚಿನ್ ಪೈಲಟ್ರಿಗೆ ರಾಜ್ಯಧ್ಯಕ್ಷನ ಸ್ತಾನ ನೀಡಿ ಸಂಘಟನೆ ಕಡೆ ಗಮನ ಹರಿಸುವಂತೆ ಸೂಚಿಸಿದ್ದರು.
2018ರ ವರ್ಷಾಂತ್ಯದಲ್ಲಿ ನಡೆದ ವಿಧಾನಸಭೆ ಚುನಾವಣೇಯಲ್ಲಿ ಕಾಂಗ್ರೆಸ್ ಪ್ರಚಂಡ ದಿಗ್ವಿಜಯ ಸಾಧಿಸಿದ್ದರು ಸಹ ರಾಹುಲ್ ಜಾದೂಗಾರನಿಗೆ ಮುಖ್ಯಮಂತ್ರಿ ಪಟ್ಟ ವಹಿಸಿಕೊಳ್ಳುವಂತೆ ಸೂಚಿಸಿದ್ದರು.
ಗಾಂಧಿ ಕುಟುಂಬವನ್ನ ತೀವ್ರವಾಗಿ ಕಾಡಿದ ಜಿ-23 ನಾಯಕರ ಜೊರೆ ಗುರುತಿಸಿಕೊಳ್ಳಲು ಕಮಲನಾಥ್ ಹಾಗೂ ದಿಗ್ವಿಜಯ್ ಸಿಂಗ್ರಂತೆ ನಿರಾಕರಿಸಿ ಗಾಂಧಿ ಕುಟುಂಬಕ್ಕೆ ಮತ್ತಷ್ಟು ಹತ್ತಿರವಾದರು.
ಆದರೆ, ಇತ್ತೀಚಿನ ವರ್ಷಗಳಲ್ಲಿ ಗೆಹ್ಲೋಟ್ ರಾಜಸ್ಥಾನ ಕಾಂಗ್ರೆಸ್ನನ್ನು ತಮ್ಮ ವಶದಲ್ಲಿಟ್ಟುಕೊಂಡಿರುವುದು ಇದಕ್ಕೆಲ್ಲಾ ಸಾಕ್ಷಿ. ಯಾಕೆಂದರೆ ಪೈಲಟ್ ಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಸಿಕೊಂಡಾಗ ಅವರ ಮುಂದೆ ಸಾಲು ಸಾಲು ಸವಾಲಿದ್ದವು ಹಾಗು ಈತ ಯಶಸ್ವಿಯಾಗುವುದಿಲ್ಲ ಎಂದು ಹಲವರು ಭವಿಷ್ಯವನ್ನ ನುಡಿದಿದ್ದರು.
ಇದಕ್ಕೆ ಪೂರಕವೆಂಬಂತೆ ಇತ್ತೀಚಿಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಗೆಹ್ಲೋಟ್ ತಮ್ಮ ಪಕ್ಷ ಹಾಗು ಶಾಸಕರ ಮೇಲೆ ಎಷ್ಟು ಹಿಡಿತವಿಟ್ಟು ಕೊಂಡಿದ್ದರು ಎಂದರೆ ಒಂದು ಮತ ಚದರದಂತೆ ನೋಡಿಕೊಳ್ಲಲಾಗದೆ ಮತ್ತು ಬಿಜೆಪಿಗೆ ವಲಸೆ ಹೋಗುವವರನ್ನು ತಡೆಯಲು ಯಶಸ್ವಿಯಾಗಿದ್ದಾರೆ ಗಹ್ಲೋಟ್.
ಈಗೆ ಮಾತನಾಡುವ ಸಮಯದಲ್ಲಿ ಗೆಹ್ಲೋಟ್ ನಾನು ಜಾದೂಗಾರ ನಾನು ಜಾದೂ ಮಾಡಿಕೊಂಡು ಇಲ್ಲಿಯವರೆಗು ಬಂದಿದ್ದೇನೆ ಎಂದು ಹೇಳಿ ವಿರೋಧಿಗಳಿಗೆ ಸಂದೇಶ ರವಾನಿಸಿದ್ದಾರೆ.
ವಯಸ್ಸಿನ ಕಾರಣ, ನಾಯಕತ್ವ ಬದಲಾವಣೆ ಹಾಗು ಪೈಲಟ್ ಗೆಹ್ಲೋಟರನ್ನು ಬಿಟ್ಟು ಬಿಡದಂತೆ ಕಾಡುತ್ತಿರುವುದು ಚಿಂತೆಗೀಡುಮಾಡಿದೆ. ಎರಡು ಭಾರೀ ಕೇಂದ್ರ ಸಚಿವ ಹಾಗು ಮೂರು ಭಾರೀ ಮುಖ್ಯಮಂತ್ರಿಯಾಗಿರುವ ಮರಳುಗಾಡಿನ ಜಾದೂಗಾರನಿಗೆ ದೊಡ್ಡ ಸವಾಲೆಸೆದಿದೆ.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಾಯಕತ್ವ ಬದಲಾವಣೆ ಹೆಸರಿನಲ್ಲಿ ಅಮರೀಂದರ್ರಂತೆ ಇವರನ್ನು ಮೂಲೆಗುಂಪು ಮಾಡುತ್ತದೆಯೋ ಅಥವಾ ಮತ್ತೆ ಮಣೆ ಹಾಕುತ್ತದೆಯೋ ಏಂಬುದನ್ನ ಕಾದು ನೋಡಬೇಕಿದೆ.