ಮುರುಘಾ ಮಠದ ಪೀಠಾಧಿಪತಿ ಮುರುಘಾ ರಾಜೇಂದ್ರ ಶಿವಮೂರ್ತಿ ಶರಣರ ವಿರುದ್ದ ಕೇಳಿ ಬಂದಿರುವ ಲೈಂಗಿಕದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನಾವು ಮುರ=ರುಘಾ ಮಠದ ಪರಂಪರೆಯೊಂದಿಗೆ ನಿಲ್ಲುತ್ತೇವೆ ಎಂದಿದ್ದಾರೆ.
ಶರಣರ ವಿರುದ್ದ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾನೂನು ಪ್ರಕ್ರಿಯೆ ನಡೆಯುತ್ತಿದ್ದು ಸದ್ಯ ಪ್ರತಿಕ್ರಿಯೆ ನೀಡುವುದು ಕಷ್ಟವಾಗಿದೆ.
ನಾವು ಮುರುಘಾ ಶರಣರ ಶಿಷ್ಯರು ಮಠಕ್ಕೆ ಅದರೆ ಆದ ದೊಡ್ಡ ಪರಂಪರೆ, ಶತಮಾನಗಳ ದೊಡ್ಡ ಇತಿಹಾಸವಿದೆ. ರಾಜ್ಯದ ಧಾರ್ಮಿಕ ಪರಂಪರೆಯಲ್ಲಿ ಮಠ ಅತಿದೊಡ್ಡ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.
ಶರಣರ ಮೇಲೆ ಕೇಳಿ ಬಂದಿರುವ ಆರೋಪದ ಬಗ್ಗೆ ನಾವು ಮಾತನಾಡಲು ಸಾಧ್ಯವಿಲ್ಲ ಮಠದ ಭಕ್ತರು, ಆಡಳಿತ ಮಂಡಳಿ, ವೀರಶೈವ-ಲಿಂಗಾಯತ ಸಮುದಾಯದ ಮುಖಂಡರಿಗೆ ಬಿಟ್ಟ ವಿಚಾರ. ಪೀಠ ತ್ಯಾಗ ಅದು ಸ್ವಾಮೀಜಿಗೆ ಬಿಟ್ಟ ನಿರ್ಧಾರ ಅದನ್ನು ನಾವು ಹೇಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಇದು ಸ್ವಾಮೀಜಿಗಳ ವಿರುದ್ದ ಹೆಣೆದಿರುವ ಷಡ್ಯಂತ್ರ ಎಂದು ಹೇಳಲು ಸಾಧ್ಯವಿಲ್ಲ ರಾಜಕಾರಣಿಗಳಂತೆ ನಾವು ಮಾತನಾಡಲು ಆಗುವುದಿಲ್ಲ ಎಂದು ಮಾದಾರ ಚನ್ನಯ್ಯ ಸ್ವಾಮೀಜಿ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ್ದಾರೆ.